ಮಂಗಳೂರು ಹೈಟೆಕ್‌ ವೇಶ್ಯಾವಾಟಿಕೆ ಪ್ರಕರಣದ, 17 ಆರೋಪಿಗಳು ಖುಲಾಸೆ!

ಮಂಗಳೂರಿನ ಅತ್ತಾವರದಲ್ಲಿ 2022ರಲ್ಲಿ ನಡೆದ ವೇಶ್ಯಾವಾಟಿಕೆ ಪ್ರಕರಣದ 17 ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ನ್ಯಾಯಾಲಯ ಖುಲಾಸೆಗೊಳಿಸಿದೆ. ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದರೂ, ಪ್ರಮುಖ ಸಾಕ್ಷಿಗಳು ಹಾಜರಾಗದ ಕಾರಣ ಆರೋಪಿಗಳು ಖುಲಾಸೆಯಾಗಿದ್ದಾರೆ.


ಮಂಗಳೂರು (ಎ.2): ಅತ್ತಾವರದ ನಂದಿಗುಡ್ಡೆಯ ಪ್ಲ್ಯಾಟ್‌ನಲ್ಲಿ  2022ರಲ್ಲಿ ನಡೆದಿದ್ದ ವೇಶ್ಯಾವಾಟಿಕೆ ಪ್ರಕರಣದ ಎಲ್ಲ 17 ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಳಿಸಲಾಗಿದೆ. ಮಂಗಳೂರಿನಲ್ಲಿ ಸಂಚಲನ ಉಂಟು ಮಾಡಿದ್ದ ಈ ಪ್ರಕರಣವನ್ನು ಅಂದಿನ ಪೊಲೀಸ್ ಆಯುಕ್ತ ಶಶಿಕುಮಾರ್ ಮತ್ತು ಡಿಸಿಪಿ ಹರಿರಾಮ್ ಶಂಕರ್ ನೇತೃತ್ವದ ತಂಡ ದಾಳಿ ನಡೆಸಿ ಪತ್ತೆ ಮಾಡಿತ್ತು.

ಅಧಿಕಾರಿಗಳು ಉಳ್ಳಾಲದ ಪ್ರಭಾವಿ ರಾಜಕಾರಣಿಗಳ ಸಹವರ್ತಿಗಳು ಮತ್ತು ಪ್ರಮುಖ ಸ್ಥಳೀಯ ಬಿಲ್ಡರ್‌ಗಳು ಸೇರಿದಂತೆ 17 ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದರು. ಕಾಸರಗೋಡಿನ ಉಪ್ಪಳದ ಶಮೀನಾ ಎಂಬಾಕೆ ಆಕೆಯ ಪತಿ ಅಬೂಬಕರ್ ಸಿದ್ದಿಕ್ ಮತ್ತು ಸಹವರ್ತಿಗಳಾದ ಅಸ್ಮಾ, ಐಸಮ್ಮ, ರೆಹಮತ್ ಮತ್ತು ಉಮ್ಮರ್ ಕುಂಞಿ ಅವರೊಂದಿಗೆ ಸೇರಿ ಹೈಟೆಕ್ ವೇಶ್ಯಾವಾಟಿಕೆ ಜಾಲವನ್ನು ನಡೆಸುತ್ತಿದ್ದರು ಎಂದು ಆರೋಪಿಸಲಾಗಿತ್ತು.

Latest Videos

ಹೊಟ್ಟೆಪಾಡಿಗೆ ವೇಶ್ಯಾವಾಟಿಕೆಗೆ ಮಕ್ಕಳನ್ನು ತಳ್ತಿದ್ದಾರೆ ಪೋಷಕರು

ತನಿಖೆಯ ಪ್ರಕಾರ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಯುವತಿಯರನ್ನು, ಅದರಲ್ಲೂ ಕಾಲೇಜು ವಿದ್ಯಾರ್ಥಿನಿಯರನ್ನು ಐಷಾರಾಮಿ ಜೀವನಶೈಲಿ ಮತ್ತು ದೊಡ್ಡ ಮೊತ್ತದ ಹಣದ ಆಮಿಷವೊಡ್ಡಿ ಕರೆತರಲಾಗಿತ್ತು. ಇಬ್ಬರು ಮುಸ್ಲಿಂ ಯುವತಿಯರನ್ನು ರಕ್ಷಿಸಲಾಗಿದ್ದು, ಮೂವರು ಮಹಿಳೆಯರು ಮತ್ತು 75 ವರ್ಷದ ವೃದ್ಧ ಸೇರಿದಂತೆ 15 ಜನರನ್ನು ಬಂಧಿಸಲಾಗಿತ್ತು. ಖಾಸಗಿ ಅಪಾರ್ಟ್‌ಮೆಂಟ್‌ಗಳಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯರನ್ನು ಭೇಟಿಯಾಗಬಹುದು ಎಂದು ನಂಬಿಸಿ ವಂಚಿಸಲಾದ ಗ್ರಾಹಕರಲ್ಲಿ ಕೇರಳದ ಶ್ರೀಮಂತ ವ್ಯಕ್ತಿಗಳು ಸೇರಿದ್ದರು.

ಮಿಸ್‌ ಇಂಡಿಯಾ ಸ್ಪರ್ಧಿಯಾಗಿದ್ದ ಈ ನಟಿ ಯಾರದೋ ತಪ್ಪಿಗೆ ಜೈಲಿಗೆ ಹೋದಳು!

ಆರೋಪಿಗಳು ಕಾಲೇಜು ಹುಡುಗಿಯರೊಂದಿಗೆ ಸ್ನೇಹ ಬೆಳೆಸಿ, ಅವರನ್ನು ಹೊರಗೆ ಕರೆದುಕೊಂಡು ಹೋಗಿ, ನಂತರ ಲಕ್ಷಾಂತರ ರುಪಾಯಿಗಳನ್ನು ನೀಡಿ ವೇಶ್ಯಾವಾಟಿಕೆಯಲ್ಲಿ ತೊಡಗುವಂತೆ ಪ್ರೇರೇಪಿಸುತ್ತಿದ್ದರು ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿ 86 ಸಾಕ್ಷಿಗಳನ್ನು ಹಾಜರುಪಡಿಸಿದರೂ, ಪ್ರಮುಖ ಸಾಕ್ಷಿಗಳು ಹಾಜರಾಗಲು ವಿಫಲರಾದ ಕಾರಣ ಪ್ರಕರಣವು ನ್ಯಾಯಾಲಯದಲ್ಲಿ ಹಿನ್ನಡೆ ಗಳಿಸಿದೆ.

ಮದುವೆಯಾಗಲು ಹುಡುಗಿ ತೋರಿಸುವ ನೆಪದಲ್ಲಿ ವೇಶ್ಯಾವಾಟಿಕೆ ಮನೆಗೆ ಕಳುಹಿಸಿ ₹50 ಸಾವಿರ ಸುಲಿಗೆ!

ಮಂಗಳೂರು ಜಿಲ್ಲಾ ಹೆಚ್ಚುವರಿ ಪೋಕ್ಸೋ ನ್ಯಾಯಾಲಯ ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ ಆರೋಪಿಗಳ ಪರವಾಗಿ ಶುಕ್ರವಾರ ತೀರ್ಪು ನೀಡಿತು. ವಿಚಾರಣೆಯ ಸಂದರ್ಭದಲ್ಲಿ ಪ್ರಮುಖ ಆರೋಪಿ ಶಮೀನಾ ಮೃತಪಟ್ಟಿದ್ದಳು. ವಕೀಲರಾದ ಅರುಣ್ ಬಂಗೇರಾ, ವಿಕ್ರಮ್ ರಾಜ್, ಪ್ರಸಾದ್ ಬಂಗೇರಾ ಮತ್ತು ಮೊಹಮ್ಮದ್ ಅಸ್ಗರ್ ಅವರು ಪ್ರತಿವಾದಿಗಳ ಪರ ವಾದ ಮಂಡಿಸಿದ್ದರು.

click me!