ರಾಜ್ಯದ ಓವೈಸಿ ಆಗಲು ಹೊರ​ಟಿರುವ ಜಮೀರ್‌

By Kannadaprabha NewsFirst Published Aug 21, 2020, 8:41 AM IST
Highlights

ಬೆಂಗಳೂರಿನಲ್ಲಿ ಎಲ್ಲೇ ಗಲಾಟೆ ಆದರೂ ಜಮೀರ್ ಅಹಮದ್ ಹಾಜರಿರುತ್ತಾರೆ. ಅವರು ರಾಜ್ಯದ ಓವೈಸಿ ಆಗಲು ಹೊರಟಿದ್ದಾರೆ ಎಂದು ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

 ಮೈಸೂರು (ಆ.21): ಬೆಂಗಳೂರಿನಲ್ಲಿ ಎಲ್ಲೆ ಗಲಾಟೆ ಆದರೂ ಶಾಸಕ ಜಮೀರ್‌ ಅಹಮದ್‌ ಹಾಜರಾಗುತ್ತಾರೆ. ಜಮೀರ್‌ ಕರ್ನಾಟಕದ ಒವೈಸಿ ಆಗಲು ಹೊರಟಿದ್ದಾರೆ ಎಂದು ಮೈಸೂರು ಸಂಸದ ಪ್ರತಾಪ್‌ ಸಿಂಹ ಕಿಡಿಕಾರಿದ್ದಾರೆ. 

"

‘ಜಮೀರ್‌ ಅವರನ್ನು ನಿಯಂತ್ರಿಸಲು ಕಾಂಗ್ರೆಸ್‌ ನಾಯಕರಿಗೆ ಆಗುತ್ತಿಲ್ಲ. ಶಾಸಕ ಅಖಂಡ ಶ್ರೀನಿವಾಸ್‌ ಅವರ ಮೇಲೆ ಒತ್ತಡ ಹೇರಲಾಗುತ್ತಿದೆ. ರಾಜ್ಯದಲ್ಲಿ ಸ್ಲೀಪರ್‌ ಸೆಲ್‌ ಆಕ್ಟಿವ್‌ ಆಗಿದೆ. ಕೇರಳ ಮಾದರಿಯಲ್ಲಿ ರಾಜಕೀಯ ಹತ್ಯೆಯಾಗುತ್ತಿದೆ. ಕೆಎಫ್‌ಡಿ ಮತ್ತು ಎಸ್‌ಡಿಪಿಐ ರಾಜ್ಯಕ್ಕೆ ಕಾಲಿಟ್ಟಿದೆ. ಕಾಂಗ್ರೆಸ್‌ನವರು ಇದನ್ನು ಪೋಷಿಸುತ್ತಿದ್ದಾರೆ’ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಗಲಭೆ: ಪೊಲೀಸ್ ಫೈರಿಂಗ್‌ನಲ್ಲಿ ಸತ್ತವರ ಅಂತ್ಯಕ್ರಿಯೆಲ್ಲಿ ಜಮೀರ್ ಭಾಗಿ...

ಇನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ದಲಿತರ ಮೇಲೆ ದೌರ್ಜನ್ಯ ನಡೆಸುವ ಉದ್ದೇಶದಿಂದ ಎಸ್‌ಡಿಪಿಐ ಛೂ ಬಿಟ್ಟಿದ್ದಾರೆ. ಸಿದ್ದರಾಮಯ್ಯ ಅವರಿಗೆ ಆಗುತ್ತಿರುವ ನೋವು, ವೇದನೆ ನೋಡಿ ನಮಗೆ ಆಶ್ಚರ್ಯವಾಗುತ್ತಿದೆ. 30 ವರ್ಷಗಳ ಗಲಾಟೆ ಕುರಿತು ಪ್ರಸ್ತಾಪಿಸಿದ್ದಾರೆ. 

ನಿವೃತ್ತ ನ್ಯಾಯಮೂರ್ತಿಗಳ ಮೂಲಕ ತನಿಖೆ ನಡೆಸಿದರೆ ವರದಿ ಬರಲು ಒಂದು ವರ್ಷ ಬೇಕಾಗುತ್ತದೆ. ಆ ಮೂಲಕ ಸಿದ್ದರಾಮಯ್ಯ ವ್ಯವಸ್ಥಿತವಾಗಿ ಎಸ್‌ಡಿಪಿಐ ರಕ್ಷಣೆಗೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.

click me!