'ಮುಸ್ಲಿಮರಿಗೆ ಮುಸ್ಲಿಂ ರಾಷ್ಟ್ರಗಳಿವೆ, ಹಿಂದೂಗಳೆಲ್ಲಿ ಹೋಗಬೇಕು'..?

Suvarna News   | Asianet News
Published : Dec 12, 2019, 02:37 PM ISTUpdated : Dec 12, 2019, 04:55 PM IST
'ಮುಸ್ಲಿಮರಿಗೆ ಮುಸ್ಲಿಂ ರಾಷ್ಟ್ರಗಳಿವೆ, ಹಿಂದೂಗಳೆಲ್ಲಿ ಹೋಗಬೇಕು'..?

ಸಾರಾಂಶ

ತಿದ್ದುಪಡಿ ಮಸೂದೆ ತಂದಿರುವುದು ಸರಿಯಾಗಿದೆ. ಬಾಂಗ್ಲಾ ದೇಶದಿಂದ ಬಂದ ಹಿಂದುಗಳು ಎಲ್ಲಿಗೆ ಹೋಗಬೇಕು. ಇಲ್ಲಿಯೂ ಇಲ್ಲ ಅಲ್ಲಿಯೂ ಇಲ್ಲ , ಅನಾಥರಾಗಿ ಬಿಡಲು ಸಾಧ್ಯವೇ? ಎಂದು ಪೇಜಾವರ ಶ್ರೀ ಪ್ರಶ್ನಿಸಿದ್ದಾರೆ.

ಉಡುಪಿ(ಡಿ.12): ಪೌರತ್ವ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಪೇಜಾವರ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ. ತಿದ್ದುಪಡಿ ಮಸೂದೆ ತಂದಿರುವುದು ಸರಿಯಾಗಿದೆ. ಬಾಂಗ್ಲಾ ದೇಶದಿಂದ ಬಂದ ಹಿಂದುಗಳು ಎಲ್ಲಿಗೆ ಹೋಗಬೇಕು. ಇಲ್ಲಿಯೂ ಇಲ್ಲ ಅಲ್ಲಿಯೂ ಇಲ್ಲ , ಅನಾಥರಾಗಿ ಬಿಡಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.

ಮುಸಲ್ಮಾನರಿಗಾದ್ರೆ ಸಾಕಷ್ಟು ಅವಕಾಶ ಇದೆ. ಮಾನವೀಯ ದೃಷ್ಟಿಯಿಂದ ಈ ವಿಚಾರವನ್ನು ನೋಡಿ. ಇದರಿಂದ ಹಿಂದೂಗಳಿಗೂ ನೋವಿಲ್ಲ, ಮುಸಲ್ಮಾನರಿಗೂ ನೋವಿಲ್ಲ. ನಮ್ಮ ದೇಶದಲ್ಲಿರುವ ಮುಸಲ್ಮಾನರಿಗೆ ಏನೂ ಅನ್ಯಾಯ ಆಗಲ್ಲ. ಬೇರೆ ದೇಶದ ಮುಸಲ್ಮಾನರಿಗೂ ತೊಂದ್ರೆ ಆಗಲ್ಲ, ಅವರಿಗೆ ಬೇರೆ ದೇಶ ಇದೆಯಲ್ಲಾ. ನಿರಾಶ್ರಿತ ಹಿಂದೂಗಳಿಗೆ ಸ್ಥಳ ದೊರೆತಂತಾಗುತ್ತೆ ಎಂದಿದ್ದಾರೆ.

CAB: ಕೇಂದ್ರ ಸಚಿವರ ಮನೆ ಮೇಲೆ ದಾಳಿ ಮಾಡಿದ ಪ್ರತಿಭಟನಾಕಾರರು!

ಇಲ್ಲಿನ‌ ನಿರಾಶ್ರಿತರು ಅವರ ರಾಷ್ಡ್ರಗಳಿಗೆ ಹೋಗಬಹುದು. ನಿರಾಶ್ರಿತ ಮುಸ್ಲಿಂಮರಿಗೆ ಮುಸ್ಲಿಂ ರಾಷ್ಟ್ರಗಳಿವೆ, ಪಾಕಿಸ್ಥಾನ ಇದೆ. ಹಿಂದೂಗಳಿಗೆ ಮತ್ತೆಲ್ಲಿದೆ ಅವಕಾಶ, ಮಾನವೀಯವಾಗಿ ಯೋಚಿಸಿ ಎಂದು ಪೇಜಾವರ ಶ್ರೀ ಹೇಳಿದ್ದಾರೆ.

ಕುಷ್ಟಗಿ: ಬರದ ನಾಡಲ್ಲೂ ಆಕಾಶದೆತ್ತರಕ್ಕೆ ಚಿಮ್ಮುತ್ತಿದೆ ಕೊಳೆವೆ ಬಾವಿ ನೀರು

ಡಿಸೆಂಬರ್ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

PREV
click me!

Recommended Stories

ಚಂದ್ರಗ್ರಹಣಕ್ಕಾಗಿ ರಥೋತ್ಸವದ ಸಮಯ ಬದಲಾದ್ರೂ ಕಾಣಿಸಿಕೊಂಡ ಗರುಡ; ಭಕ್ತರ ಹರ್ಷೋದ್ಘಾರ
ಭದ್ರಾವತಿ ಬಿಇಒ, ಮಧ್ಯವರ್ತಿ ಲೋಕಾಯುಕ್ತ ಬಲೆಗೆ: 4 ಲಕ್ಷ ಕೇಳಿ 1 ಲಕ್ಷ ವಸೂಲಿ ವೇಳೆ ರೆಡ್‌ಹ್ಯಾಂಡಾಗಿ ಸೆರೆ