ಜೆಡಿಎಸ್‌ ಮುಖಂಡ ಸಚಿವ ನಾಗೇಶ್ ಬಣಕ್ಕೆ ಸೆರ್ಪಡೆ

Kannadaprabha News   | Asianet News
Published : Sep 09, 2020, 12:58 PM IST
ಜೆಡಿಎಸ್‌ ಮುಖಂಡ ಸಚಿವ ನಾಗೇಶ್ ಬಣಕ್ಕೆ ಸೆರ್ಪಡೆ

ಸಾರಾಂಶ

ಜೆಡಿಎಸ್ ಮುಖಂಡರೋರ್ವರು ಪಕ್ಷ ತೊರೆದು ಇದೀಗ ಅಬಕಾರಿ ಸಚಿವ ನಾಗೇಶ್ ಬಣಕ್ಕೆ ಸೇರ್ಪಡೆಯಾಗಿದ್ದಾರೆ. 

ಮುಳಬಾಗಿಲು (ಸೆ.09): ತಾಲೂಕಿನ ದುಗ್ಗಸಂದ್ರ ಹೋಬಳಿಯ ಎಚ್‌.ಗೊಲ್ಲಹಳ್ಳಿ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಹಾಗೂ ಜೆಡಿಎಸ್‌ ಪಕ್ಷದ ಮುಖಂಡ ಎಚ್‌. ರಮೇಶ್‌ ಜೆಡಿಎಸ್‌ ಪಕ್ಷ ತೋರೆದು ಸಚಿವ ಎಚ್‌.ನಾಗೇಶ್‌ ಬಣಕ್ಕೆ ಸೆರ್ಪಡೆಗೊಂಡರು.

ಈ ಸಂದರ್ಭದಲ್ಲಿ ಸಚಿವ ಎಚ್‌.ನಾಗೇಶ್‌ ಮಾತನಾಡಿ, ತಾಲೂಕಿನ ಅಭಿವೃದ್ಧಿಗೆ ಪಕ್ಷಾತೀತವಾಗಿ ಕೈಗೊಳ್ಳುತ್ತಿರುವ ನಮ್ಮ ಕೆಲಸ ಕಾರ್ಯಗಳನ್ನು ಹಾಗೂ ಕಾರ್ಯವೈಖರಿಯನ್ನು ಕಂಡು ಅನ್ಯ ಪಕ್ಷಗಳಲ್ಲಿನ ಹಲವರು ಮುಖಂಡರು ನಮ್ಮೊಂದಿಗೆ ಕೈ ಜೋಡಿಸುತ್ತಿರುವುದು ಸಂತಸ ತಂದಿದೆ. ಗ್ರಾಮಗಳ ಅಭಿವೃದ್ಧಿಗೆ ಮುಖಂಡರು ತೆಗೆದುಕೊಳ್ಳುತ್ತಿರುವ ಇಂತಹ ನಿರ್ಧರಗಳು ಗ್ರಾಮಗಳಲ್ಲಿ ರಾಜಕೀಯವನ್ನು ಹೊರತುಪಡಿಸಿ ಅಭಿವೃದ್ಧಿಗೆ ಪೂರಕವಾಗುವಂತಹ ಕೆಲಸಗಳನ್ನು ಮಾಡಲು ಸಾಧ್ಯವಾಗಲಿದೆ ಎಂದರು.

ಜೆಡಿ​ಎಸ್‌ ತೊರೆದು ಕಾಂಗ್ರೆಸ್‌ ಸೇರಲು ಸಜ್ಜಾದ ಪ್ರಭಾವಿ ಮುಖಂಡ ...

ಈ ಸಂದರ್ಭದಲ್ಲಿ ದರಖಾಸ್ತು ಸಮಿತಿ ಸದಸ್ಯ ಪೆದ್ದಪ್ಪಯ್ಯ, ಎಚ್‌. ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ಯುವ ಮುಖಂಡ ಜಿ.ಎಸ್‌. ಜಗದೀಶ್‌, ಆವಣಿ ವಿಜಯ ಕುಮಾರ್‌ ಮತ್ತಿತರರು ಇದ್ದರು.

ರಾಜ್ಯದಲ್ಲಿ ಈಗಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇನ್ನೇನು ಶೀಘ್ರದಲ್ಲೇ ಗ್ರಾಮ ಪಂಚಾಯತ್ ಚುನಾವಣೆ ನಡೆಯಲಿದ್ದು, ವಿವಿಧ ಪಕ್ಷಗಳಲ್ಲಿ ಚುನಾವಣೆ ಸಿದ್ಧತೆಯೂ ನಡೆಯುತ್ತಿದೆ.

PREV
click me!

Recommended Stories

ಬೆಂಗಳೂರು: 2 ಲಕ್ಷ ಬೆಲೆಯ ಗಿಳಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ!
ವಿಮಾನದಲ್ಲಿ ಹೃದಯಾಘಾತ- ಅಮೆರಿಕ ಪ್ರಜೆಯ ಜೀವ ಉಳಿಸಿದ ಡಾ. ಅಂಜಲಿ ನಿಂಬಾಳ್ಕರ್