ವಿಜಯಪುರ: ಕಾಲು ಜಾರಿ ಬಾವಿಗೆ ಬಿದ್ದು ತಾಯಿ-ಮಗು ದುರ್ಮರಣ

Kannadaprabha News   | Asianet News
Published : Apr 25, 2020, 12:01 PM IST
ವಿಜಯಪುರ: ಕಾಲು ಜಾರಿ ಬಾವಿಗೆ ಬಿದ್ದು ತಾಯಿ-ಮಗು ದುರ್ಮರಣ

ಸಾರಾಂಶ

ಬಾವಿಗೆ ಬಿದ್ದ ಮಗು​ವನ್ನು ಕಾಪಾ​ಡಲು ಹೋಗಿ ತಾಯಿಯೂ ಕಾಲು ಜಾರಿ ಬಾವಿಗೆ ಬಿದ್ದು ಇಬ್ಬರೂ ಸಾವು| ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಆಸಂಗಿಹಾಳ ಗ್ರಾಮದಲ್ಲಿ ನಡೆದ ದುರ್ಘಟನೆ| ಈ ಸಂಬಂಧ ಆಲಮೇಲ ಪೊಲೀಸ್‌ ಠಾಣೆಯಲ್ಲಿ ಪ್ರಕ​ರಣ ದಾಖಲು| 

ವಿಜಯಪುರ(ಏ.25): ಬಾವಿಗೆ ಬಿದ್ದ ಮಗು​ವನ್ನು ಕಾಪಾ​ಡಲು ಹೋಗಿ ತಾಯಿಯೂ ಕಾಲು ಜಾರಿ ಬಾವಿಗೆ ಬಿದ್ದು ಇಬ್ಬರೂ ಮೃತ​ಪಟ್ಟ ಘಟನೆ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಆಸಂಗಿಹಾಳ ಗ್ರಾಮದ ಹೊರವಲಯದ ತೊಟದ ವಸ್ತಿಯಲ್ಲಿ ಶುಕ್ರ​ವಾರ ಸಂಭ​ವಿ​ಸಿದೆ.

ಮೃತರನ್ನ ಆಸಂಗಿ​ಹಾಳ ಗ್ರಾಮದ ಕವಿತಾ ವಿಠ್ಠಲ ಘತ್ತರಗಿ ಉರ್ಫ್‌ ಜಮಾದಾರ (30), ಅಮೃಶ ಘತ್ತರಗಿ (5) ಎಂದು ಗುರುತಿಸಲಾಗಿದೆ.'

ವಿಜಯಪುರ: ಏಷ್ಯಾದ ಅತ್ಯಂತ ಉದ್ದದ ಜಲ ಸೇತುವೆಗೆ ವಿಧ್ಯುಕ್ತ ಚಾಲನೆ

ಕಾಲು ಜಾರಿ ಮಗು ಬಾವಿಗೆ ಬಿದ್ದಿದೆ. ಅಲ್ಲಿಯೇ ಬಟ್ಟೆ ತೊಳೆ​ಯು​ತ್ತಿ​ರುವ ತಾಯಿ ಆ ಮಗು​ವನ್ನು ಕಾಪಾಡಲು ಮುಂದಾಗಿದ್ದಾಳೆ, ಆಗ ಕಾಲು ಜಾರಿ ಆಕೆಯೂ ಬಾವಿಗೆ ಬಿದ್ದಿದ್ದಾರೆ. ಮಹಿಳೆಗೆ ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಆಲಮೇಲ ಪೊಲೀಸ್‌ ಠಾಣೆಯಲ್ಲಿ ಪ್ರಕ​ರಣ ದಾಖ​ಲಾ​ಗಿದೆ.

PREV
click me!

Recommended Stories

Cockroach janata party: ಬೆಂಗಳೂರಿನಲ್ಲಿಂದು 'ಜಿರಳೆ'ಗಳ ಪ್ರತಿಭಟನೆ; ನಟ ಪ್ರಕಾಶ್ ರಾಜ್ ಭಾಗಿ!
ಬೆಂಗಳೂರು ನಗರದಲ್ಲಿ 1 ಲಕ್ಷ ಗಿಡಗಳ ನಾಟಿಗೆ ಸಿದ್ಧತೆ; ಪ್ರತಿ ಪಾಲಿಕೆಗೂ 30 ಸಾವಿರ ಸಸಿ ನೆಡಲು ಸೂಚನೆ!