ಸಾವಿನ ಕೈಗೆ ಬುದ್ಧಿ ಕೊಡದೆ ಧೈರ್ಯವಾಗಿ ಎದುರಿಸಿ

Published : Oct 09, 2018, 04:28 PM ISTUpdated : Oct 09, 2018, 10:50 PM IST
ಸಾವಿನ ಕೈಗೆ ಬುದ್ಧಿ ಕೊಡದೆ ಧೈರ್ಯವಾಗಿ ಎದುರಿಸಿ

ಸಾರಾಂಶ

ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತ ಮಹಿಳೆ ಮನೆಗೆ ಭೇಟಿ ನೀಡಿ ಅವರ ಕುಟುಂಬವರ್ಗಕ್ಕೆ ಧೈರ್ಯ ತುಂಬಿದರಲ್ಲದೇ ಇತ್ತೀಚೆಗಷ್ಟೇ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಿದ್ದರೂ ಕೂಡ ರೈತರು ಮತ್ತೆ ಆತ್ಮಹತ್ಯೆಯ ಹಾದಿ ತುಳಿಯುತ್ತಿರುವುದು ವಿಷಾದನೀಯ - ಯತೀಂದ್ರ ಸಿದ್ದರಾಮಯ್ಯ

ತಾಂಡವಪುರ[ಅ.09]: ದೇಶಕ್ಕೆ ಅನ್ನ ನೀಡುವ ಅನ್ನದಾತರು ಯಾವುದೇ ಕಾರಣಕ್ಕೂ ಮಾಡಿದ ಸಾಲಕ್ಕಾಗಿ ಹೆದರಿ ಆತ್ಮಹತ್ಯೆ ದಾರಿ ತುಳಿಯಬೇಡಿ ನಿಮ್ಮ ಜೊತೆ ಸರ್ಕಾರವಿದೆ ಎಂದು ಶಾಸಕ ಡಾ. ಎಸ್. ಯತೀಂದ್ರ ಸಿದ್ದರಾಮಯ್ಯ ಮನವಿ ಮಾಡಿದರು.

ನಂಜನಗೂಡು ತಾಲೂಕಿನ ಮರಳೂರು ಗೊದ್ದನಪುರ ಗ್ರಾಮದ ರೈತ ಮಹಿಳೆ ಶಿವಮ್ಮ ಎಂಬವರು ಮಾಡಿದ ಸಾಲ ತೀರಿಸಲಾಗದೇ ಹೆದರಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತ ಮಹಿಳೆ ಮನೆಗೆ ಭೇಟಿ ನೀಡಿ ಅವರ ಕುಟುಂಬವರ್ಗಕ್ಕೆ ಧೈರ್ಯ ತುಂಬಿದರಲ್ಲದೇ ಇತ್ತೀಚೆಗಷ್ಟೇ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಿದ್ದರೂ ಕೂಡ ರೈತರು ಮತ್ತೆ ಆತ್ಮಹತ್ಯೆಯ ಹಾದಿ ತುಳಿಯುತ್ತಿರುವುದು ವಿಷಾದದ ಸಂಗತಿಯಾಗಿದೆ ಎಂದರು.

ಏನೇ ಕಷ್ಟ ಬಂದರೂ ಧೈರ್ಯವಾಗಿ ಎದುರಿಸಬೇಕು, ನಿಮ್ಮನ್ನೇ ನಂಬಿ ಬದುಕುತ್ತಿರುವ ಕುಟುಂಬವನ್ನು ಬೀದಿ ಪಾಲು ಮಾಡಬೇಡಿ, ಎಷ್ಟೇ ಸಾಲವಿದ್ದರೂ ಅದನ್ನು ಧೈರ್ಯವಾಗಿ ಎದುರಿಸಿ ನಿಲ್ಲಬೇಕು, ಸಾವಿನ ಕೈಗೆ ಬುದ್ದಿಕೊಡಬೇಡಿ ಎಂದು ರೈತರಿಗೆ ಮನವಿ ಮಾಡಿದರು.

ಗ್ರಾಪಂ ಅಧ್ಯಕ್ಷರಾದ ಬಿ.ಎಂ. ಮಹೇಶ್ ಕುಮಾರ್, ಸದಸ್ಯರಾದ ಬಿ. ಪುಟ್ಟಸ್ವಾಮಿ, ಸೂರಿ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಕೆಂಪಣ್ಣ, ಯೋಗೀಶ್, ದೊರೆಸ್ವಾಮಿ, ತಾಪಂ ಮಾಜಿ ಸದಸ್ಯ ರಾಜಶೇಖರ್ ಕಾಮರಾಜು ಇದ್ದರು.

PREV
click me!

Recommended Stories

ಮೈಸೂರಲ್ಲಿ ಈಗಮತ್ತೊಂದು ಡ್ರಗ್ಸ್‌ ಫ್ಯಾಕ್ಟರಿ ಪತ್ತೆ- ಮನೆಯಲ್ಲೇ ಡ್ರಗ್ಸ್‌ ತಯಾರಿಸುತ್ತಿದ್ದ ಜಾಲ
ಮುಡಾ ಕೇಸಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿದ್ದ ಸ್ನೇಹಮಯಿ ಕೃಷ್ಣಗೆ ಮತ್ತೆ ಬಿತ್ತು ಗುದ್ದು!