ಕಾರ್ಮಿಕರನ್ನ ಕರೆತರಲು ಗೋವಾಗೆ ಹೋದ ಶಾಸಕ: ರಸ್ತೆ ಬದಿ ಖಾಲಿ ಜಾಗದಲ್ಲಿ ನಿದ್ರಿಸಿದ ನಡಹಳ್ಳಿ..!

Published : May 11, 2020, 12:32 PM ISTUpdated : May 18, 2020, 05:44 PM IST
ಕಾರ್ಮಿಕರನ್ನ ಕರೆತರಲು ಗೋವಾಗೆ ಹೋದ ಶಾಸಕ: ರಸ್ತೆ ಬದಿ ಖಾಲಿ ಜಾಗದಲ್ಲಿ ನಿದ್ರಿಸಿದ ನಡಹಳ್ಳಿ..!

ಸಾರಾಂಶ

ವಲಸೆ ಕಾರ್ಮಿಕರನ್ನ ಗೋವಾಗೆ ಹೋದ ತಿರ್ಮಾನಿಸಿದ ಶಾಸಕ ಎ. ಎಸ್.ಪಾಟೀಲ್‌ ನಡಹಳ್ಳಿ| ರಾತ್ರಿ ಇಡಿ ಚೋರ್ಲಾ ಚೇಕ್‌ಪೋಸ್ಟ್‌ ಬಳಿಯೇ ಕಾರ್ಮಿಕರೊಂದಿಗೆ ಕಾಲ ಕಳೆದ ಶಾಸಕ| ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ರೋಗದಿಂದ ಪಾರಾಗುವುದರ ಕುರಿತು ಎಲ್ಲ ಜಾಗೃತಿ ಮೂಡಿಸಿ ಆಯಾ ಗ್ರಾಮಗಳಿಗೆ ಕಳುಹಿಸಿಕೊಡಲಾಗಿದೆ|

ಮುದ್ದೇಬಿಹಾಳ(ಮೇ.11): ಲಾಕ್‌ಡೌನ್‌ ಆಗಿದ್ದರಿಂದ ಗೋವಾದಲ್ಲಿ ಸಿಲುಕಿಕೊಂಡಿದ್ದ ಕ್ಷೇತ್ರದ ಜನರನ್ನ  ಸರ್ಕಾರದ ನಿಯಮಗಳ ಅನುಸಾರವೇ ಕಾರ್ಮಿಕರನ್ನು ಕರೆದುಕೊಂಡು ಹೋಗಲೇಬೇಕು ಎಂದು ತಿರ್ಮಾನಿಸಿದ ಶಾಸಕ ಎ. ಎಸ್.ಪಾಟೀಲ್‌ ನಡಹಳ್ಳಿ ಅವರು ಶುಕ್ರುವಾರ ರಾತ್ರಿ ಇಡಿ ಚೋರ್ಲಾ ಚೇಕ್‌ಪೋಸ್ಟ್‌ ಬಳಿಯೇ ಅಲ್ಲಿನ ಕಾರ್ಮಿಕರೊಂದಿಗೆ ಕಾಲ ಕಳೆದಿದ್ದಾರೆ. ಅಲ್ಲದೆ ಅಲ್ಲಿಯೇ ಹತ್ತಿರ ಇರುವ ಮಳಿಗೆಯೊಂದರ ಮುಂದಿನ ಖುಲ್ಲಾ ಜಾಗದಲ್ಲಿ ನಿದ್ದೆ ಮಾಡಿದ್ದಾರೆ. 

ಗೋವಾದಿಂದ ಬಂದಿಳಿದಿರುವ ಎಲ್ಲ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಬಳಿಕ ಶಾಸಕ ಎ.ಎಸ್‌.ಪಾಟೀಲ(ನಡಹಳ್ಳಿ)ಯವರು ಪ್ರತಿಯೊಬ್ಬರಿಗೂ ಉಪಹಾರ, ಕುಡಿಯುವ ನೀರು ನೀಡಿದರು. ಮುಂದಿನ 15 ದಿನಗಳವೆರೆಗೆ ಅನುಕೂಲವಾಗುವಂತೆ ಉಚಿತ ದಿನಸಿ ಹಾಗೂ ಆರೋಗ್ಯ ಕಿಟ್‌ ನೀಡಿದ್ದಾರೆ. 

ಕೊರೋನಾ ಭೀತಿ: ಮುದ್ದೇಬಿಹಾಳಕ್ಕೆ 495 ವಲಸೆ ಕಾರ್ಮಿಕರ ಆಗಮನ

ಯಾವುದೇ ಕಾರಣಕ್ಕೂ ಸರ್ಕಾರ ನಿರ್ದೇಶಿಸಿದ ನಿಯಮಗಳನ್ನು ಚಾಚುತಪ್ಪದೇ ಪಾಲಿಸಲು ಬಂದ ಕಾರ್ಮಿಕರಿಗೆ ತಿಳಿಸುವ ಮೂಲಕ ಎಚ್ಚರಿಕೆ ನೀಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ರೋಗದಿಂದ ಪಾರಾಗುವುದರ ಕುರಿತು ಎಲ್ಲ ಜಾಗೃತಿ ಮೂಡಿಸಿ ಆಯಾ ಗ್ರಾಮಗಳಿಗೆ ಕಳುಹಿಸಿಕೊಡಲಾಗಿದೆ ಎಂದು ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಹೇಳಿದ್ದಾರೆ.  
 

PREV
click me!

Recommended Stories

ಶಿಕ್ಷಕರ ನೇಮಕಾತಿ: ವಯೋಮಿತಿ ಸಡಿಲಿಕೆ, ಗಣಿತ ಮತ್ತು ವಿವಿಧ ಭಾಷಾ ಅಭ್ಯರ್ಥಿಗಳಿಗೆ ಅವಕಾಶಕ್ಕೆ ಆಗ್ರಹ
ಮಂಗಳೂರು KFC ಮಳಿಗೆ, ಮೈಸೂರಿನ ಹೋಟೆಲ್‌ಗಳ ಮೇಲೆ ಆಹಾರ ಇಲಾಖೆ ದಾಳಿ! ಕೊಳೆತ ಮಾಂಸ ಪತ್ತೆ