ಬಾಗಲಕೋಟೆ: ಅ​ಮಾ​ವಾ​ಸ್ಯೆ ದಿನವೇ ಹೂತ ಶವ ಹೊತ್ತೊಯ್ದ ದುಷ್ಕ​ರ್ಮಿ​ಗಳು..!

Kannadaprabha News   | Asianet News
Published : Jul 23, 2020, 02:14 PM IST
ಬಾಗಲಕೋಟೆ: ಅ​ಮಾ​ವಾ​ಸ್ಯೆ ದಿನವೇ ಹೂತ ಶವ ಹೊತ್ತೊಯ್ದ ದುಷ್ಕ​ರ್ಮಿ​ಗಳು..!

ಸಾರಾಂಶ

ಫೆ. 21ರಂದು ಕ್ಯಾನ್ಸರ್‌ ರೋಗದಿಂದ ಸಾವಿಗೀಡಾಗಿದ್ದ ವ್ಯಕ್ತಿ| ಮೃತ ವೃದ್ಧನನ್ನು ಅಮಾವಾಸ್ಯೆಯ ದಿನವೇ ತಮ್ಮ ಒಡೆತನದ ಜಮೀನಿನಲ್ಲಿ ಅಂತ್ಯಕ್ರಿಯೆ ಮಾಡಲಾ​ಗಿತ್ತು| ಐದು ತಿಂಗಳ ಬಳಿಕ ಭೀಮನ ಅಮಾವಾಸ್ಯೆಯ ದಿನವಾದ ಜು. 21ರಂದು ಈ ಶವವನ್ನು ಹೊತ್ತೊಯ್ದಿದ ದುಷ್ಕರ್ಮಿಗಳು|

ಬಾಗಲಕೋಟೆ(ಜು.23): ಅಮಾವಾಸ್ಯೆ ದಿನದಂದು ಹೂತಿದ್ದ ಶವವನ್ನು ದುಷ್ಕರ್ಮಿಗಳು ಹೊರ ತೆಗೆದು ಹೊತ್ತೊಯ್ದ ಘಟನೆ ಜಿಲ್ಲೆಯ ಮುಧೋಳ ತಾಲೂಕಿನ ರೂಗಿ ಗ್ರಾಮದಲ್ಲಿ ಸಂಭ​ವಿ​ಸಿದೆ. 

ಶಿವರಾತ್ರಿಯ ಅಮಾವಾಸ್ಯೆಯಾದ ಫೆ. 21ರಂದು ಕ್ಯಾನ್ಸರ್‌ ರೋಗದಿಂದ ಸಾವಿಗೀಡಾಗಿದ್ದ ರಾಮಪ್ಪ ಎಂಬ 63 ವರ್ಷದ ವೃದ್ಧನನ್ನು ಅಮಾವಾಸ್ಯೆಯ ದಿನವೇ ತಮ್ಮ ಒಡೆತನದ ಜಮೀನಿನಲ್ಲಿ ಅಂತ್ಯಕ್ರಿಯೆ ಮಾಡಲಾ​ಗಿತ್ತು. ಆದರೆ, ಐದು ತಿಂಗಳ ಬಳಿಕ ಮೊನ್ನೆ ಅಂದರೆ ಭೀಮನ ಅಮಾವಾಸ್ಯೆಯ ದಿನವಾದ ಜು. 21ರಂದು ಈ ಶವವನ್ನು ದುಷ್ಕರ್ಮಿಗಳು ಹೊತ್ತೊಯ್ದಿದ್ದಾರೆ. 

ಹುಬ್ಬಳ್ಳಿ: ಪಾಕಿಸ್ತಾನ ವಿರುದ್ಧ ಗೆದ್ದು ಕೊರೋನಾಗೆ ಸೋತ ಯೋಧ!

ವಾಮಾಚಾರ, ನಿ​ಧಿ ಆಸೆಗೆಂದು ಹೂತಿದ್ದ ಶವವನ್ನು ಹೊತ್ತೊಯ್ದಿರುವ ಸಾಧ್ಯತೆ ಇದೆ. ಹೂತ ಮೃತದೇಹ ಐದು ತಿಂಗಳವಾಗಿದ್ದರಿಂದ ಅಸ್ಥಿಪಂಜರವಾಗಿರುವ ಸಾಧ್ಯತೆ ಇದ್ದು, ಅದನ್ನು ವಾಮಾಚಾರಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಪ್ರಕರಣ ಲೋಕಾಪೂರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
 

PREV
click me!

Recommended Stories

ಸದ್ದಿಲ್ಲದೇ ಓಪನ್ ಆದ 'ಬಿಗ್ ಬಾಸ್' ನಡೆಯುವ ಜಾಲಿವುಡ್ ಸ್ಟುಡಿಯೋ! KSPCB ಅನುಮತಿ
ವಿಧಾನಸಭೆಯಲ್ಲಿ ಸಿಎಂ ಕುರ್ಚಿಯದ್ದೇ ಗುದ್ದಾಟ: ಬೈರತಿ 'ಕಿಂಗ್ ಅಲೈವ್' ಅಂದಿದ್ದು ಯಾಕೆ? ಆರ್ ಅಶೋಕ್, ಬೈರತಿ ವಾಕ್ಸಮರ!