ಬಲೆ ತೆಲಿಪಾಲೆ: ಮಸ್ಕಿರಿ ಕುಡ್ಲ ತಂಡಕ್ಕೆ ಪ್ರಶಸ್ತಿ

Kannadaprabha News   | Asianet News
Published : Feb 28, 2020, 08:51 AM IST
ಬಲೆ ತೆಲಿಪಾಲೆ: ಮಸ್ಕಿರಿ ಕುಡ್ಲ ತಂಡಕ್ಕೆ ಪ್ರಶಸ್ತಿ

ಸಾರಾಂಶ

ಬಲೆ ತೆಲಿಪಾಲೆ ಕಾರ್ಯಕ್ರಮದಲ್ಲಿ ಮಸ್ಕಿರಿ ಕುಡ್ಲ ತಂಡಕ್ಕೆ ಪ್ರಶಸ್ತಿ ಬಂದಿದೆ.  2 ಲಕ್ಷ ರು. ನಗದು ಬಹುಮಾನ ಹಾಗೂ ಸ್ಮರಣಿಕೆ ನೀಡಲಾಗಿದೆ. ದ್ವಿತೀಯ ಸ್ಥಾನವನ್ನು ಸಮರ ಸಾರಥಿ ಪಡೆದಿದ್ದು, 1 ಲಕ್ಷ ರು. ನಗದು ಬಹುಮಾನ ಪಡೆದಿದೆ.  

ಮಂಗಳೂರು(ಫೆ.28) : ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನ ಹಾಗೂ ನಮ್ಮ ಟಿವಿ ವಾಹಿನಿ ಜಂಟಿ ಆಶ್ರಯದಲ್ಲಿ ಮೂಡಿ ಬಂದಿರುವ ಬಲೆ ತೆಲಿಪಾಲೆ-7 ಅಂತಿಮ ಸುತ್ತು ಮಂಗಳೂರಿನ ಪುರಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಂತಿಮ ಸುತ್ತಿನಲ್ಲಿ 9 ತಂಡಗಳು ಭಾಗವಹಿಸಿದ್ದವು. ಪ್ರಥಮ ಸ್ಥಾನವನ್ನು ಮಸ್ಕಿರಿ ಕುಡ್ಲ ಪಡೆದಿದ್ದು, 2 ಲಕ್ಷ ರು. ನಗದು ಬಹುಮಾನ ಹಾಗೂ ಸ್ಮರಣಿಕೆ ಪಡೆಯಿತು. ದ್ವಿತೀಯ ಸ್ಥಾನವನ್ನು ಸಮರ ಸಾರಥಿ ಪಡೆದಿದ್ದು, 1 ಲಕ್ಷ ರು. ನಗದು ಬಹುಮಾನ, ತೃತೀಯ ಸ್ಥಾನವನ್ನು ರಾಜಶ್ರೀ ಕುಡ್ಲ 50 ಸಾವಿರ ರು. ನಗದು ಬಹುಮಾನ, ನಾಲ್ಕನೇ ಸ್ಥಾನವನ್ನು ಕಲಾಶ್ರೀ ಕುಡ್ಲ 30 ಸಾವಿರ ರು. ನಗದು ಬಹುಮಾನ ಪಡೆದುಕೊಂಡಿತು.

ಮಂಗಳೂರು-ಬೆಂಗಳೂರು ರಾತ್ರಿ ರೈಲು ಬುಕ್ಕಿಂಗ್‌ ರದ್ದು

ತೀರ್ಪುಗಾರರಾಗಿ ಸಂಗೀತ ನಿರ್ದೇಶಕ ಗುರುಕಿರಣ್‌, ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯನಾಥ ವಿಠಲ ಶೆಟ್ಟಿಹಾಗೂ ನಮ್ಮ ಟಿವಿಯ ನಿರ್ದೇಶಕ ಶಿವಶರಣ್‌ ಶೆಟ್ಟಿಪಾಲ್ಗೊಂಡಿದ್ದರು.

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!