
ಬೆಂಗಳೂರು (ಅ.16): ಸಿಲಿಕಾನ್ ಸಿಟಿ ಬೆಂಗಳೂರು ಮತ್ತೊಮ್ಮೆ ಭಾರೀ ಮಳೆಯಿಂದಾಗಿ ತಪ್ಪಿಸಿಕೊಳ್ಳಲಾಗದ ಸಂಕಷ್ಟಕ್ಕೆ ಸಿಲುಕಿದೆ, ವಿಶೇಷವಾಗಿ ಪ್ರಸಿದ್ಧ ಮಾನ್ಯತಾ ಟೆಕ್ ಪಾರ್ಕ್ನಲ್ಲಿ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವೀಡಿಯೊಗಳು ತಂತ್ರಜ್ಞಾನ ಕೇಂದ್ರವು ನೀರಿನಲ್ಲಿ ಮುಂಚಿರುವುದನ್ನು ತೋರಿಸುತ್ತವೆ. ಅನೇಕ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಲು (Work from Home) ಅವಕಾಶ ನೀಡುವಂತೆ ಆಗ್ರಹಿಸಿದ್ದಾರೆ. ಏಕೆಂದರೆ ನಗರವು ಕಳೆದ 18 ಗಂಟೆಗಳಿಂದ ನಿರಂತರ ಮಳೆಯನ್ನು ಎದುರಿಸುತ್ತಿದೆ.
ಬುಧವಾರ ಬೆಳಿಗ್ಗೆ, ಪರ್ಪಲ್ ಲೈನ್ನಲ್ಲಿರುವ ಬೆಂಗಳೂರು ಮೆಟ್ರೋದ ರೈಲು ಹಳಿಯ ಮೇಲೆ ಮರ ಬಿದ್ದಾಗ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು. ಎರಡು ಗಂಟೆಗಳ ಕಾಲ ಸೇವೆಗಳಿಗೆ ಅಡಚಣೆಯಾಯಿತು. ಬಿಎಂಆರ್ಸಿಎಲ್ ಸಿಬ್ಬಂದಿಯ ತುರ್ತು ಕ್ರಮವನ್ನು ಕೈಗೊಂಡಿ ಮರವನ್ನು ತ್ವರಿತವಾಗಿ ತೆರವು ಮಾಡಿದ್ದಾರೆ. ಸ್ವಲ್ಪ ಸಮಯದ ನಂತರ ಮೆಟ್ರೋ ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲು ಸೇವೆಗಳನ್ನು ಪುನರಾರಂಭಿಸಲಾಯಿತು.
ಬೆಂಗಳೂರು ಜನರಲ್ಲಿ ಹತಾಶೆ : ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಅನೇಕ ಬಳಕೆದಾರರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಅನ್ನು ಕಳಪೆ ನಗರ ನಿರ್ವಹಣೆಗಾಗಿ ಟೀಕಿಸಿದ್ದಾರೆ. ನಗರದ ಬಹುತೇಕ ಅಂಡರ್ಪಾಸ್ಗಳು ಮುಳುಗಡೆ ಆಗಿದ್ದು, ಅಂಡರ್ಪಾಸ್ಗಳಲ್ಲಿ ಸಿಕ್ಕಿಹಾಕಿಕೊಂಡಿರುವ ವಾಹನಗಳು ಮತ್ತು ನೀರಿನಿಂದ ತುಂಬಿರುವ ಮನೆಗಳನ್ನು ಚಿತ್ರಿಸುವ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇನ್ನು ಮಾನ್ಯತಾ ಟೆಕ್ ಪಾರ್ಕ್ ಬಳಿಯ ರಸ್ತೆಯಿಂದ ಕೆಳಗೆ ಜಲಪಾತದಂತೆ ನೀರು ಧುಮ್ಮಿಕ್ಕುತ್ತಿರುವುದನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ನೋಡಿದ ಸೋಶಿಯಲ್ ಮಿಡಿಯಾ ಬಳಕೆದಾರರು ಇದನ್ನು 'ಮಾನ್ಯತಾ ಟೆಕ್ ಫಾಲ್ಸ್' ಎಂದು ಹಾಸ್ಯದಿಂದ ಕರೆದಿದ್ದಾರೆ. ಈ ಚಿತ್ರಣವು ಪಾಲಿಕೆಯನ್ನು ಗೇಲಿ ಮಾಡುವುದಕ್ಕೆಂದೇ ಮಾಡಿದ ಅಪಹಾಸ್ಯ ಎಂದು ತಿಳಿಯುತ್ತಿದೆ. ಇನ್ನು ಕೆಲವರು ಈ ದೃಶ್ಯವನ್ನು ನೋಡಿ ಮಾನ್ಯತಾ ಟೆಕ್ ಪಾರ್ಕ್ನಲ್ಲಿ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ತಾವು ಕೆಲಸಕ್ಕೆ ಹೋಗುವ ಮೊದಲು ಸ್ನಾನ ಮಾಡುವುದಕ್ಕೆ ಇದೊಂದು ಉತ್ತಮ ಸ್ಥಳವೆಂದು ಹೇಳಿದ್ದಾರೆ.
New Destination Sight Seeing - Manyata Tech Falls. pic.twitter.com/bJNPaooe63
ನಿರಂತರ ಮಳೆಯು ಮಾನ್ಯತಾ ಟೆಕ್ ಪಾರ್ಕ್ನಲ್ಲಿ ಗಮನಾರ್ಹವಾದ ಭೂಕುಸಿತಕ್ಕೂ ಕಾರಣವಾಗಿದೆ. ಬರೋಬ್ಬರಿ 20 ಅಡಿ ಭೂಮಿಯು ಗೋಡೆಯೊಂದಿಗೆ ಕುಸಿತ ಆಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮಾನ್ಯತಾ ಟೆಕ್ ಪಾರ್ಕ್ನ ಗೇಟ್ ಸಂಖ್ಯೆ 2ರ ಬಳಿ ಗೋಡೆ ಕುಸಿದಿದೆ. ಇದಕ್ಕೆ ಕಾರಣ ಈ ಗೇಟಿನ ಬಳಿಯಲ್ಲಿ ಕಟ್ಟಡ ಕಾಮಗಾರಿಗಾಗಿ ಸುಮಾರು 60 ಅಡಿಯಷ್ಟು ಆಳಕ್ಕೆ ಭೂಮಿಯನ್ನು ಅಗೆದಿರುವುದು ಕೂಡ ಕಾರಣ ಎಂದು ಹೇಳಲಾಗುತ್ತಿದೆ. ಇದರಿಂದ ಸುರಕ್ಷತೆಗಾಗಿ ಅಕ್ಕಪಕ್ಕರ ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಅದೃಷ್ಟವಶಾತ್ ಯಾರುಗೂ ಯಾವುದೇ ಗಾಯಗಳಾಗಿಲ್ಲ.
Manyata Tech park today 💀 🌧️
Glad that I cancelled my office cab this morning. This looks horrible.
Bangalore rains. pic.twitter.com/4DO6giwV6r
ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರಸ್ತುತ ಕಾಂಗ್ರೆಸ್ ಸರ್ಕಾರವನ್ನು ಅಣಕಿಸಲು ಈ ಕ್ಷಣವನ್ನು ಬಳಸಿಕೊಂಡಿದ್ದಾರೆ. ಬೆಂಗಳೂರನ್ನು ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನ ಕೇಂದ್ರವಾಗಿ ನಿರ್ವಹಿಸುವಲ್ಲಿ ಮತ್ತು ಅಭಿವೃದ್ಧಿಪಡಿಸುವಲ್ಲಿನ ವೈಫಲ್ಯಗಳನ್ನು ಎತ್ತಿ ತೋರಿಸಿದ್ದಾರೆ. ಕಿರಣ್ ಸಿ. ಕರುಣಾಕರನ್ "ಮಾನ್ಯತಾ ಫಾಲ್ಸ್" ನೊಂದಿಗೆ ಪ್ರವಾಹವನ್ನು ತಮಾಷೆಯಾಗಿ ಉಲ್ಲೇಖಿಸಿ ಟ್ವೀಟ್ ಅನ್ನು ಹಂಚಿಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರ ಅಭಯ್ ಎಸ್ ಕಪೂರ್ ಪರಿಸ್ಥಿತಿಯ ಬಗ್ಗೆ ವ್ಯಂಗ್ಯವಾಡಿದ್ದಾರೆ. ಹೊಸ ಪ್ರವಾಸಿ ಸ್ಥಳ ಬೆಂಗಳೂರಿನ ನಿವಾಸಿಗಳ ಆಕರ್ಷಣೀಯ ಸ್ಥಳವಾಗಿ ಹೊರಹೊಮ್ಮಿದೆ. ಜೊತೆಗೆ ಬೋಟಿಂಗ್ ವ್ಯವಸ್ಥೆಗಳನ್ನೂ ಮಾಡಲಾಗಿದೆ ಎಂದು ತಮಾಷೆ ಮಾಡಿದ್ದಾರೆ.