ಮ್ಯಾಟ್ರಿಮೊನಿ ಮೋಸ: ಫಸ್ಟ್ ನೈಟ್ ವಿಡಿಯೋ ಮಾಡಿಕೊಂಡು 2ನೇ ಹೆಂಡ್ತಿಗೆ ಕೈಕೊಟ್ಟ ಸರ್ಕಾರಿ ನೌಕರ ಗುರುರಾಜ್!

By Sathish Kumar KHFirst Published Oct 16, 2024, 2:32 PM IST
Highlights

ರಾಯಚೂರಿನ ಜೆಸ್ಕಾಂ ಇಂಜಿನಿಯರ್ ಮ್ಯಾಟ್ರಿಮೊನಿಯಲ್ಲಿ ಮದುವೆಯಾಗಿ ಫಸ್ಟ್ ನೈಟ್ ವಿಡಿಯೋ ಮಾಡಿ ಹಲ್ಲೆ ಮಾಡಿ ಮನೆಯಿಂದ ಹೊರದಬ್ಬಿದ್ದಾನೆ ಎಂದು ಆರೋಪ. ಮೊದಲ ಪತ್ನಿ ಜೀವಂತ ಇದ್ದರೂ ಸುಳ್ಳು ಹೇಳಿ ಮದುವೆಯಾಗಿ ಹಿಂಸೆ ನೀಡಿದ್ದಾನೆ ಎಂದು ಸಂತ್ರಸ್ತೆ ದೂರು ನೀಡಿದ್ದಾರೆ.

ರಾಯಚೂರು (ಅ.16): ರಾಯಚೂರಿನಲ್ಲಿ ಜೆಸ್ಕಾಂ ಇಲಾಖೆಯ ಸಹಾಯಕ ಇಂಜಿನಿಯರ್ ಮ್ಯಾಟ್ರಿಮೊನಿಯಲ್ಲಿ ಹುಡುಗಿಯೊಬ್ಬಳನ್ನು ನೋಡಿ ಮದುವೆ ಮಾಡಿಕೊಂಡು ನಂತರ ಫಸ್ಟ್ ನೈಟ್ ವಿಡಿಯೋ ಮಾಡಿಕೊಂಡಿದ್ದಾನೆ. ನಂತರ ಈ ವಿಡಿಯೋ ತೋರಿಸಿ ಆಕೆಯ ಮೇಲೆ ಹಲ್ಲೆ ಮಾಡಿ ಮನೆ ಬಿಟ್ಉ ಕಳುಹಿಸಿ ಇದೀಗ 3ನೇ ಮದುವೆ ಮಾಡಿಕೊಂಡಿದ್ದಾನೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.

ಹೌದು, ಈತ ಸರ್ಕಾರಿ ನೌಕರನಾಗಿದ್ದಾನೆ ಎಂಬ ಒಂದೇ ಒಂದು ನೆಪವನ್ನಿಟ್ಟುಕೊಂಡು ದುಂಬಿ ಹುಳ ಹೂವಿನ ಮಕರಣದ ಹೀರುವಂತೆ ಮ್ಯಾಟ್ರಿಮೊನಿಯಲ್ಲಿ ಸಿಕ್ಕ ಸಿಕ್ಕ ಹುಡುಗಿಯರನ್ನು ಪರಿಚಯ ಮಾಡಿಕೊಂಡು ಮದುವೆ ಮಾಡಿಕೊಂಡು ಮೋಸ ಮಾಡುವುದೇ ಈತನ ಖಯಾಲಿ ಮಾಡಿಕೊಂಡಿದ್ದಾನೆ. ಮ್ಯಾಟ್ರಿಮೊನಿಯಲ್ಲಿ ಚೆನ್ನಾಗಿ ಕಾಣುವ ಹುಡುಗಿಯರನ್ನು ಅಂತರ್ಜಾತಿಯಾದರೂ ಸರಿ ಮದುವೆ ಮಾಡಿಕೊಳ್ಳುವುದಾಗಿ ಸರಳ ವಿವಾಹವಾಗಿ ನಂತರ ಫಸ್ಟ್ ನೈಟ್ ದಿನವೇ ಅವರೊಂದಿಗಿನ ಖಾಸಗಿ ದೃಶ್ಯವನ್ನು ವಿಡಿಯೋ ಮಾಡಿಕೊಳ್ಳುತ್ತಾನೆ. ನಂತರ, ಅವರನ್ನು ಬಿಟ್ಟು ಹೋಗುವಂತೆ ಹಿಂಸೆ ಕೊಡುತ್ತಾನೆ. ಆದರೆ, ಇದೀಗ 2ನೇ ಹೆಂಡತಿ ಆತನ ವಿರುದ್ಧ ತಿರುಗಿಬಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರಿದ್ದರಿಂದ ಆಕೆಯನ್ನು ಕೊಲೆ ಮಾಡುವುದಕ್ಕೆ ಸಂಚು ರೂಪಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. 

Latest Videos

ಇದನ್ನೂ ಓದಿ: ತಾನೇ ಜನ್ಮ ನೀಡಿದ ಮಕ್ಕಳ ಜೀವ ತೆಗೆದು ತಾಯಿ : ಪ್ರಿಯಕರನಿಗಾಗಿ ಮಕ್ಕಳ ಬಲಿ

ರಾಯಚೂರು ಜಿಲ್ಲೆ ಮಾನ್ವಿ ಜೆಸ್ಕಾಂ ಸಹಾಯಕ ಇಂಜಿನಿಯರ್ ಆಗಿರುವ ಗುರುರಾಜ್ ನಾಯಕ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದ ಅಮೃತಾ ಎಂಬ ಮಹಿಳೆ ಆರೋಪ ಮಾಡಿದವರಾಗಿದ್ದಾರೆ. ಗುರುರಾಜ್ ನಾಯಕ ಮೊದಲ ಪತ್ನಿ ಜೀವಂತ ಇದ್ದರೂ ಸುಳ್ಳು ಹೇಳಿ ಮದುವೆಯಾಗಿದ್ದಾರೆ. ಮದುವೆಯಾದ ನಂತರ ಫಸ್ಟ್‌ ದಿನದ ವಿಡಿಯೋ ಮಾಡಿಟ್ಟುಕೊಂಡು ಅದನ್ನು ತೋರಿಸಿ ನನಗೆ ವಿನಾಕಾರಣ ಹಿಂಸೆ ನೀಡಿ ಹಲ್ಲೆ ಮಾಡುತ್ತುದ್ದಾನೆ. ಮನೆ ಬಿಟ್ಟು ಹೋಗುವಂತೆ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಸಂತ್ರಸ್ತ ಮಹಿಳೆ ಅಮೃತಾ ಎರಡು ಬಾರಿ  ತನ್ನ ಪತಿ ವಿರುದ್ಧ ಮಾನ್ವಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಆದರೂ ಪತಿ ವಿರುದ್ಧ ಜೆಸ್ಕಾಂ ಇಲಾಖೆಯಿಂದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮದುವೆ ಆಗಿದ್ದೇಗೆ?
ಮ್ಯಾಟ್ರಿಮೂನಿದಲ್ಲಿ ಅಮೃತಾ ಮತ್ತು ಗುರುರಾಜ್ ನಾಯಕ ಪರಿಚಯವಾಗಿದೆ. ನಾನು ನಿನ್ನನ್ನು ಮದುವೆ ಮಾಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ ಸರ್ಕಾರಿ ನೌಕರ ಗುರುರಾಜ್ ನಾಯಕ ಅಮೃತಾಳನ್ನು 2021ರ ಜನವರಿ 10ರಂದು ಅಂತರ್ಜಾತಿ ವಿವಾಹ ಆಗಿದ್ದಾನೆ. ಇದಾದ ನಂತರ ಗುರುರಾಜನಿಗೆ ಮೊದಲೇ ಮದುವೆಯಾಗಿತ್ತು ಎಂಬ ವಿಚಾರ ಗೊತ್ತಾಗಿದೆ. ಮದುವೆಯಾದ 45 ದಿನಗಳು ಮಾತ್ರ ಖುಷಿಯಾಗಿ ಸಂಸಾರ ನಡೆಸಿದ ದಂಪತಿ, ಆ ಬಳಿಕ ವಿನಾಕಾರಣ ಜಗಳ ಮಾಡಿಕೊಂಡಿದ್ದಾರೆ. ಕೆಲಸಕ್ಕೆ ಹೋಗಿಬರುವ ಗುರುರಾಜ್ ಮನೆಗೆ ಬಂದು ಅಮೃತಾಳಿಗೆ ಮನಬಂದಂತೆ ಹಲ್ಲೆ ಮಾಡಿ ಹಿಂಸೆ ನೀಡಿದ್ದಾರಂತೆ. ಜೊತೆಗೆ, ನನ್ನನ್ನು ಕೊಲೆ ಮಾಡುವುದಕ್ಕೆ ಪತಿ ಕಡೆಯವರು ಪ್ರಯತ್ನ ಮಾಡುತ್ತಿದ್ದಾರೆ ಎಂದು ಅಮೃತಾ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಮನೆ ಮುಂದಿನ ಕುರಿ, ಮೇಕೆಗಳನ್ನ ಕದ್ದು ಮಾರಾಟ ಮಾಡುತ್ತಿದ್ದ 'ಸಿಂಧನೂರು ಗ್ಯಾಂಗ್' ಅರೆಸ್ಟ್!

ಕಳೆದ ಎರಡು ವರ್ಷದಿಂದ ಏಕಾಂಗಿಯಾಗಿ ಅಮೃತಾ ಪತಿ ವಿರುದ್ಧ ಹೋರಾಟ ಮಾಡಿದ್ದಾರೆ. ನೀನು ನನ್ನ ಮೇಲೆ ದೂರು ಕೊಟ್ಟರೆ ಫಸ್ಟ್ ನೈಟ್ ವಿಡಿಯೋ ವೈರಲ್ ಮಾಡುವುದಾಗಿ ಪತ್ನಿಗೆ ಪತಿ ಬೆದರಿಕೆ ಹಾಕುತ್ತಿದ್ದರಂತೆ. ಪತಿ ಬೆದರಿಕೆಯಿಂದ ಮುಖ ಮುಚ್ಚಿಕೊಂಡು ಓಡಾಡುವಂತಾಗಿದೆ. ಇನ್ನು ಮನೆಯಿಂದ ಹೊರಬಂದ್ರೆ ಟಿಪ್ಪರ್ ಹತ್ತಿಸಿ ಕೊಲೆ ಮಾಡುವುದಾಗಿ ಪತಿ ಗುರುರಾಜ್ ನಾಯಕ ಬೆದರಿಕೆ ಹಾಕಿದ್ದಾನೆ. ಹೀಗಾಗಿ, ಜೆಸ್ಕಾಂ ಮತ್ತು ಪೊಲೀಸ್ ಇಲಾಖೆ ತನ್ನ ಗಂಡ ಗುರುರಾಜ್ ವಿರುದ್ಧ ಕಾನೂನು ಕ್ರಮ ಕೈಒಳ್ಳುವಂತೆ ಆಗ್ರಹಿಸಿದ್ದಾರೆ.

click me!