ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿದ ವ್ಯಕ್ತಿ : ಹುಡುಕಾಟ

Published : Nov 09, 2020, 03:21 PM IST
ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿದ ವ್ಯಕ್ತಿ :  ಹುಡುಕಾಟ

ಸಾರಾಂಶ

ನೇತ್ರಾವತಿ ನದಿಗೆ ವ್ಯಕ್ತಿಯೋರ್ವ ಹಾರಿದ್ದು ಆತನಿಗಾಗಿ ಪೊಲೀಸರಿಂದ ಹುಡುಕಾಟ ನಡೆದಿದೆ. 

ಬಂಟ್ವಾಳ (ನ.09):  ಬೆಳಗ್ಗೆ ಸುಮಾರು 7ರಿಂದ 8 ಗಂಟೆಯೊಳಗೆ ವ್ಯಕ್ತಿಯೊಬ್ಬ ಬಿ.ಸಿ. ರೋಡಿನ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿದ ಘಟನೆ ನಡೆದಿದ್ದು, ಇದೀಗ ಆತನ ಶೋಧ ಕಾರ್ಯ ನಡೆಯುತ್ತಿದೆ.

ಗೂಡಿನಬಳಿಯ ಮುಳುಗುತಜ್ಞರಾದ ಮಹಮ್ಮದ್‌ ಮತ್ತು ತಂಡ, ಬಂಟ್ವಾಳ ಅಗ್ನಿಶಾಮಕದಳ ಇಲಾಖೆಯ ಸಿಬ್ಬಂದಿ ಸುದ್ದಿ ತಿಳಿದ ತಕ್ಷಣ ಕಾರ್ಯಪ್ರವೃತ್ತರಾಗಿದ್ದು, ಬಂಟ್ವಾಳ ನಗರ ಪೊಲೀಸರು ಉಪಸ್ಥಿತರಿದ್ದರು. 

ಭಾರೀ ಮಳೆಗೆ ಉಕ್ಕೇರುತ್ತಿದ್ದಾಳೆ ನೇತ್ರಾವತಿ ...

ಸೇತುವೆಯಲ್ಲಿ ಪುತ್ತೂರು ಸಮೀಪದ ಬಲ್ನಾಡು ಎಂಬಲ್ಲಿನ ವ್ಯಕ್ತಿಯೊಬ್ಬರ ಹೆಸರಿನ ಗುರುತಿನ ಚೀಟಿ, ಆಧಾರ್‌ ಕಾರ್ಡ್‌ ಮತ್ತಿತರ ವಸ್ತುಗಳಿರುವ ಬ್ಯಾಗೊಂದು ದೊರಕಿದ್ದು, ಕೂಡಲೇ ಪೊಲೀಸರು ಆ ವಿಳಾಸವನ್ನು ಸಂಪರ್ಕಿಸಿ ಮನೆಯವರನ್ನು ಬರ ಹೇಳಿದ್ದಾರೆ.

ಇದೀಗ ನೀರಿಗೆ ಹಾರಿದ ವ್ಯಕ್ತಿಯನ್ನು ಪತ್ತೆಹಚ್ಚಿದ ಮೇಲಷ್ಟೇ ಸ್ಪಷ್ಟಚಿತ್ರಣ ದೊರಕಲಿದೆ.

PREV
click me!

Recommended Stories

ಡಾಕ್ಟರ್ ಹೆಸರಿನ ಮುಂದೆ Dr. ಇದ್ದಂತೆ ಇನ್ಮುಂದೆ ಶಿಕ್ಷಕರಿಗೆ Tr, ಸಿಎಂ ಡಿಕೆ ಶಿವಕುಮಾರ್ ಘೋಷಣೆ
ಚಂಡಿಕಾಯಾಗಕ್ಕೂ ಮುನ್ನ ಬೂದೇಶ್ವರ ದೇಗುಲಕ್ಕೆ ಭೇಟಿ ನೀಡಿದ ಸಿಎಂ ಡಿಕೆಶಿ: ಕಾರಣ ಇದೇನಾ?