ಉಸಿರಾಟ ಸಮಸ್ಯೆಯಿಂದ ಯುವಕ ಸಾವು: ಕೊರೋನಾ ಶಂಕೆ

Kannadaprabha News   | Asianet News
Published : Apr 15, 2020, 07:52 AM IST
ಉಸಿರಾಟ ಸಮಸ್ಯೆಯಿಂದ ಯುವಕ ಸಾವು: ಕೊರೋನಾ ಶಂಕೆ

ಸಾರಾಂಶ

ಮಂಗಳೂರಿನ ಹೊರವಲಯ ಸುರತ್ಕಲ್‌ ನಿವಾಸಿಯೊಬ್ಬರು ಉಸಿರಾಟ ತೊಂದರೆಯಿಂದ ವ್ಯಕ್ತಿ ಸಾವಿಗೀಡಾಗಿದ್ದು, ಈ ಹಿನ್ನೆಲೆಯಲ್ಲಿ ಮೃತದೇಹದ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಮಂಗಳೂರು(ಏ.15): ಮಂಗಳೂರಿನ ಹೊರವಲಯ ಸುರತ್ಕಲ್‌ ನಿವಾಸಿಯೊಬ್ಬರು ಉಸಿರಾಟ ತೊಂದರೆಯಿಂದ ವ್ಯಕ್ತಿ ಸಾವಿಗೀಡಾಗಿದ್ದು, ಈ ಹಿನ್ನೆಲೆಯಲ್ಲಿ ಮೃತದೇಹದ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಸುರತ್ಕಲ್‌ನ 27 ವರ್ಷ ವಯಸ್ಸಿನ ಯುವಕ ಉಸಿರಾಟದ ತೊಂದರೆಗೆ ಒಳಗಾಗಿದ್ದಾನೆ. ವ್ಯಕ್ತಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಸಾವು ಸಂಭವಿಸಿದೆ.

ರೋಗಿಯ ನೆಪದಲ್ಲಿ ಅಕ್ರಮವಾಗಿ ಬಂದ 6 ಮಂದಿಗೆ ಕ್ವಾರಂಟೈನ್‌

ಕೊರೋನಾ ಸೋಂಕಿನ ಲಕ್ಷಣವೂ ಉಸಿರಾಟದ ಸಮಸ್ಯೆ ಆಗಿರುವುದರಿಂದ ಮೃತದೇಹದ ಸ್ಯಾಂಪಲ್‌ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

PREV
click me!

Recommended Stories

Bengaluru: ಕಂಡೋರ ಹೆಂಡ್ತಿಯನ್ನು ಪಟಾಯಿಸಿದ ಪೊಲೀಸಪ್ಪ; ಇದು ರೀಲ್ಸ್ ಅಂಟಿಯ ಮೋಹದ ಕಥೆ
ಬೆಂಗಳೂರಿನಲ್ಲಿ ಜಿಮ್‌ಗೆ ಹೋದ್ರೆ, ಚಿಕನ್‌ ತಿಂದ್ರೆ ಮ್ಯಾನೇಜರ್‌ ನಗ್ತಾರೆ: NRI ಪೋಸ್ಟ್‌ನಿಂದ ಆಘಾತಕಾರಿ ಸತ್ಯ ಬಯಲು!