ಮಂಗಳೂರಿನ ಹೊರವಲಯ ಸುರತ್ಕಲ್ ನಿವಾಸಿಯೊಬ್ಬರು ಉಸಿರಾಟ ತೊಂದರೆಯಿಂದ ವ್ಯಕ್ತಿ ಸಾವಿಗೀಡಾಗಿದ್ದು, ಈ ಹಿನ್ನೆಲೆಯಲ್ಲಿ ಮೃತದೇಹದ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಮಂಗಳೂರು(ಏ.15): ಮಂಗಳೂರಿನ ಹೊರವಲಯ ಸುರತ್ಕಲ್ ನಿವಾಸಿಯೊಬ್ಬರು ಉಸಿರಾಟ ತೊಂದರೆಯಿಂದ ವ್ಯಕ್ತಿ ಸಾವಿಗೀಡಾಗಿದ್ದು, ಈ ಹಿನ್ನೆಲೆಯಲ್ಲಿ ಮೃತದೇಹದ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಸುರತ್ಕಲ್ನ 27 ವರ್ಷ ವಯಸ್ಸಿನ ಯುವಕ ಉಸಿರಾಟದ ತೊಂದರೆಗೆ ಒಳಗಾಗಿದ್ದಾನೆ. ವ್ಯಕ್ತಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಸಾವು ಸಂಭವಿಸಿದೆ.
ರೋಗಿಯ ನೆಪದಲ್ಲಿ ಅಕ್ರಮವಾಗಿ ಬಂದ 6 ಮಂದಿಗೆ ಕ್ವಾರಂಟೈನ್
ಕೊರೋನಾ ಸೋಂಕಿನ ಲಕ್ಷಣವೂ ಉಸಿರಾಟದ ಸಮಸ್ಯೆ ಆಗಿರುವುದರಿಂದ ಮೃತದೇಹದ ಸ್ಯಾಂಪಲ್ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.