ಮಹೇಶ್‌ಗೆ ಸಚಿವ ಸ್ಥಾನ ಬೇಡ : ಕುಮಾರಸ್ವಾಮಿ

Kannadaprabha News   | Asianet News
Published : Aug 25, 2021, 07:28 AM IST
ಮಹೇಶ್‌ಗೆ ಸಚಿವ ಸ್ಥಾನ ಬೇಡ : ಕುಮಾರಸ್ವಾಮಿ

ಸಾರಾಂಶ

ಹಿಂದೂ ಧರ್ಮವನ್ನು ಮನುಧರ್ಮ ಎಂದಿದ್ದ ಶಾಸಕ ಮಹೇಶ್ ಮಹೇಶ್‌ ಅವರನ್ನು ಮಂತ್ರಿ ಮಾಡುವುದಕ್ಕೆ ನಮ್ಮ ವಿರೋಧ ಇದೆ ಎಂದ ಕುಮಾರಸ್ವಾಮಿ

ಚಿಕ್ಕಮಗಳೂರು (ಆ.25): ಹಿಂದೂ ಧರ್ಮವನ್ನು ಮನುಧರ್ಮ ಎಂದಿದ್ದ ಕೊಳ್ಳೆಗಾಲ ಶಾಸಕ ಎನ್‌.ಮಹೇಶ್‌ ಅವರನ್ನು ಮಂತ್ರಿ ಮಾಡುವುದಕ್ಕೆ ನಮ್ಮ ವಿರೋಧ ಇದೆ ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು. 

ಮಹೇಶ್‌ ಈಗ ಬಿಜೆಪಿಗೆ ಬಂದಿದ್ದಾರೆ. ಅವರು ಇನ್ನೂ 20 ವರ್ಷ ಪಕ್ಷದಲ್ಲಿ ದುಡಿಯಬೇಕು. ಪಕ್ಷಕ್ಕೆ ಬಂದ ತಕ್ಷಣ ಮಂತ್ರಿ ಮಾಡಲು ಸಂಘ ಪರಿವಾರ ಒಪ್ಪುವುದಿಲ್ಲ ಎಂದು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

ನಿಯತ್ತು ಮರೆತಿದ್ದಕ್ಕೆ ಉಚ್ಛಾಟನೆ : ಬಿಜೆಪಿ ಸೇರಿದ N ಮಹೇಶ್ ವಿರುದ್ಧ ಗಂಭೀರ ಅರೋಪ

ಎನ್‌.ಮಹೇಶ್‌ ಅವರನ್ನು ಕಾಂಗ್ರೆಸ್‌-ಜೆಡಿಎಸ್‌ ಬಿಟ್ಟಿದೆ, ಬಿಎಸ್‌ಪಿ ಉಚ್ಛಾಟನೆ ಮಾಡಿದೆ. ಅವರು ಈ ಹಿಂದೆ ಹಿಂದೂ ಧರ್ಮದ ಬಗ್ಗೆ ಹೀನಾಯವಾಗಿ ಬೈದಿದ್ದರು. 

ಜಾತಿ-ಧರ್ಮ ಎತ್ತಿಕಟ್ಟಿದ್ದರು. ಜನಾಂಗ-ಜನಾಂಗ ಒಡೆದು ಶಾಸಕರಾಗಿದ್ದಾರೆ. ನಮ್ಮಲ್ಲಿ ಹಿಂದೂ ಧರ್ಮ, ವೈದಿಕ ಧರ್ಮವನ್ನು ಬೈದವರನ್ನು ಮಂತ್ರಿ ಮಾಡುತ್ತಾರೆ ಎಂದು ಅನಿಸುವುದಿಲ್ಲ. ಪಕ್ಷಕ್ಕಾಗಿ ದುಡಿದವರು ಮೂವರು ಇದ್ದೇವೆ, ಯಾರನ್ನಾದ್ರು ಮಾಡುತ್ತಾರೆ ಎಂದರು.

PREV
click me!

Recommended Stories

Dharwad Love Jihad Case: ಲವ್ ಜಿಹಾದ್‌ಗೆ ಹೆದರಿ ಬಾಲಕಿ ಸಾವು; ಪ್ರತಿಭಟನೆ ಮಾಡಿದ ಬಜರಂಗದಳ ನಾಯಕನ ಮೇಲೆ ಕೇಸ್!
Karnataka Police: ಶಾಸಕರ ಶಿಫಾರಸಿಲ್ಲದೆ ಇನ್ನು ಪೊಲೀಸ್ ವರ್ಗಾವಣೆ? ಗೃಹ ಇಲಾಖೆ ಮಹತ್ವದ ಬದಲಾವಣೆ!