Vijayanagara| 100 ಕೋಟಿ ಲಸಿಕೆ ಸಾಧನೆ: ವಿದ್ಯುತ್ ದೀಪಗಳಿಂದ ಕಂಗೊಳಿಸಿದ ಹಂಪಿ

Suvarna News   | Asianet News
Published : Oct 15, 2021, 08:10 AM ISTUpdated : Oct 15, 2021, 08:45 AM IST
Vijayanagara| 100 ಕೋಟಿ ಲಸಿಕೆ ಸಾಧನೆ: ವಿದ್ಯುತ್ ದೀಪಗಳಿಂದ ಕಂಗೊಳಿಸಿದ ಹಂಪಿ

ಸಾರಾಂಶ

*  ದೇಶದಲ್ಲಿ 100 ಕೋಟಿ ಕೊರೋನಾ ಲಸಿಕೆ ಕಂಪ್ಲೀಟ್‌ ಆದ ಹಿನ್ನಲೆಯಲ್ಲಿ ಸ್ಮಾರಕಗಳಿಗೆ ಮೆರಗು  *  ಹಂಪಿ ಸ್ಮಾರಕಗಳಿಗೆ ವಿದ್ಯುತ್ ದೀಪಾಲಂಕಾರ  *  ವಿದ್ಯುತ್ ದೀಪಾಲಂಕಾರದಿಂದ ಕಲ್ಲಿನ ತೇರಿಗೆ ವಿಶಿಷ್ಠ ಮೆರಗು 

ವಿಜಯನಗರ(ಅ.15): ಭಾರತ(India) ಕೊರೋನಾ ಮಹಾಮಾರಿಯ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಿ, ಲಸಿಕಾ(Vaccine) ಅಭಿಯಾನದಲ್ಲಿ ಯಶಸ್ವಿಯಾಗಿದೆ. ಈ ಸಂದರ್ಭದಲ್ಲಿ 100 ಕೋಟಿ ಕೊರೋನಾ ಲಸಿಕೆ ಹಾಕಿರುವುದರ ಪ್ರತೀಕವಾಗಿ ಕೇಂದ್ರ ಸರ್ಕಾರದ(Central Government) ಸಂಸ್ಕೃತಿ ಮಂತ್ರಾಲಯವು ದೇಶಾದ್ಯಂತ 100 ಸ್ಮಾರಕಗಳನ್ನು(Monument) ಗುರುತಿಸಿ ಅವುಗಳಿಗೆ ರಾತ್ರಿ ದೀಪದ ಅಲಂಕಾರವನ್ನು ಮಾಡಲು ನಿರ್ಧರಿಸಿತ್ತು. 

ವಿಶ್ವಪಾರಂಪರಿಕ ತಾಣವಾಗಿರುವ ರಾಜ್ಯದ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಪಟ್ಟದಕಲ್ಲಿನ(Pattadakal) ಸಮೂಹ ದೇವಾಲಯಗಳ ಹತ್ತು ಸ್ಮಾರಕಗಳು, ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಐಹೊಳೆಯ(Aihole) ಸಮೂಹ ದೇವಾಲಯಗಳು(Temple), ವಿಜಯಪುರದ(Vijayapura) ವಿಶ್ವಪ್ರಸಿದ್ಧ ಗೋಲಗುಂಬಜ(Gol Gumbaz) ಹಾಗೂ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿ(Hampi) ಸ್ಮಾರಕಗಳು ದೀಪಾಲಂಕಾರಕ್ಕಾಗಿ ಆಯ್ಕೆಯಾಗಿದ್ದವು. 

ಮಳೆಯಲ್ಲೇ ಹಂಪಿ ಬೈ ನೈಟ್‌ ವೀಕ್ಷಿಸಿದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು

ಈ ಸ್ಮಾರಕಗಳಿಗೆ ನಿನ್ನೆ ಸಂಜೆ 6ರಿಂದ ಇಂದು ಬೆಳಗಿನವರೆಗೂ ಸ್ಮಾರಕಗಳಿಗೆ ಮೂರು ಬಣ್ಣದ, ರಾಷ್ಟ್ರಧ್ವಜದ(National Flag) ಮಾದರಿಯ ದೀಪಾಲಂಕಾರವನ್ನು ಮಾಡಿ, ರಾಷ್ಟ್ರಗೀತೆಯನ್ನು(National Anthem) ನಿರಂತರವಾಗಿ ಕಡಿಮೆ ಧ್ವನಿಯಲ್ಲಿ ನುಡಿಸಲಾಗಿದೆ. 

ಹಂಪಿ ಸ್ಮಾರಕಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಹಂಪಿಯ ವಿಜಯ ವಿಠ್ಠಲ ದೇವಾಲಯ, ಕಲ್ಲಿನ ತೇರು, ಗಜಶಾಲೆ, ಸಂಗೀತ ಮಂಟಪಗಳಿಗೆ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ವಿದ್ಯುತ್ ದೀಪಾಲಂಕಾರದಿಂದ ವಿಜಯ ವಿಠ್ಠಲ ದೇವಾಲಯದ ಬಳಿ ಇರೋ ಕಲ್ಲಿನ ತೇರಿಗೆ ವಿಶಿಷ್ಠ ಮೆರಗು ಬಂದಿತ್ತು. ಬಣ್ಣ, ಬಣ್ಣದ ವಿದ್ಯುತ್ ದೀಪಗಳಿಂದ ಹಂಪಿಯ ಸ್ಮಾರಕಗಳು ಕಂಗೊಳಿಸಿವೆ. 
 

PREV
click me!

Recommended Stories

ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!
ದರ್ಶನ್ ಗ್ಯಾಂಗ್‌ನಿಂದ ಕೊಲೆಗೀಡಾದ ರೇಣುಕಾಸ್ವಾಮಿಗೆ ಸತ್ತಮೇಲೂ ನೆಮ್ಮದಿಯಿಲ್ಲ! ಸಮಾಧಿ ಧ್ವಂಸಗೈದ ಡೆವಿಲ್ ಗ್ಯಾಂಗ್‌!