ಚಾಮರಾಜನಗರ: ಚಾಲನೆ ವೇಳೆ ಚಾಲಕನಿಗೆ ಮೂರ್ಛೆ, ವಿದ್ಯುತ್ ಕಂಬಕ್ಕೆ ಕೆಎಸ್‌ಆರ್‌ಟಸಿ ಬಸ್‌ ಡಿಕ್ಕಿ ..!

By Kannadaprabha NewsFirst Published Sep 9, 2024, 9:47 AM IST
Highlights

ಕೊಳ್ಳೇಗಾಲದಿಂದ ಹೊರಟಿದ್ದ ಬಸ್ಸು ಪುದುರಾಮಾಪುರ ಬಳಿ ತೆರಳುತ್ತಿತ್ತು. ಈ ವೇಳೆ ಚಾಲಕ ಸುಭಾಷ್‌ಗೆ ಏಕಾಏಕಿ ಮೂರ್ಛೆ ಕಾಣಿಸಿಕೊಂಡಿದೆ. ತಕ್ಷಣ ಕೆಳಗೆ ಬಿದ್ದಿದ್ದಾರೆ. ಆಗ ನಿಯಂತ್ರಣ ತಪ್ಪಿದ ಬಸ್‌ ರಸ್ತೆ ಬದಿಯ ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾಗಿ ನಿಂತಿದೆ. 

ಹನೂರು(ಸೆ.09):  ಕೆಎಸ್‌ಆರ್‌ಟಿಸಿ ಬಸ್‌ ಚಾಲಕನಿಗೆ ಚಾಲನೆ ವೇಳೆಯೇ ಮೂರ್ಛೆರೋಗ ಕಾಣಿಸಿಕೊಂಡು ಕೆಳಗೆ ಬಿದ್ದ ಪರಿಣಾಮ ಬಸ್ಸು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಹನೂರು ತಾಲೂಕಿನ‌ ಪುದುರಾಮಾಪುರದಲ್ಲಿ ಜರುಗಿದೆ. 

ಕೊಳ್ಳೇಗಾಲದಿಂದ ಹೊರಟಿದ್ದ ಬಸ್ಸು ಪುದುರಾಮಾಪುರ ಬಳಿ ತೆರಳುತ್ತಿತ್ತು. ಈ ವೇಳೆ ಚಾಲಕ ಸುಭಾಷ್‌ಗೆ ಏಕಾಏಕಿ ಮೂರ್ಛೆ ಕಾಣಿಸಿಕೊಂಡಿದೆ. ತಕ್ಷಣ ಕೆಳಗೆ ಬಿದ್ದಿದ್ದಾರೆ. ಆಗ ನಿಯಂತ್ರಣ ತಪ್ಪಿದ ಬಸ್‌ ರಸ್ತೆ ಬದಿಯ ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾಗಿ ನಿಂತಿದೆ. 

Latest Videos

ಹಬ್ಬದ ಖುಷಿಯನ್ನೇ ಕಸಿದ ಜವರಾಯ, ತುಮಕೂರು ಬಳಿ ಎರಡು ಕಾರುಗಳ ಮಧ್ಯೆ ಭೀಕರ ಅಪಘಾತ: 6 ಮಂದಿ ದುರ್ಮರಣ..!

ಬಸ್‌ನಲ್ಲಿ ಕಂಡಕ್ಟರ್‌ ಮತ್ತು ಒಬ್ಬ ಪ್ರಯಾಣಿಕ ಮಾತ್ರ ಇದ್ದರು. ಡಿಕ್ಕಿಯಾದಾಗ ವಿದ್ಯುತ್ ಇರಲಿಲ್ಲ. ಹೀಗಾಗಿ ಅಪಾಯ ತಪ್ಪಿದೆ.

click me!