ಕೆಆರ್‌ಎಸ್‌ನಲ್ಲಿ ಜೀಪ್‌ ಚಾಲನೆ : ಇನ್ಸ್‌ಪೆಕ್ಟರ್‌ ಸಸ್ಪೆಂಡ್‌

Kannadaprabha News   | Asianet News
Published : Mar 03, 2021, 07:30 AM IST
ಕೆಆರ್‌ಎಸ್‌ನಲ್ಲಿ ಜೀಪ್‌ ಚಾಲನೆ : ಇನ್ಸ್‌ಪೆಕ್ಟರ್‌ ಸಸ್ಪೆಂಡ್‌

ಸಾರಾಂಶ

KRS ಇನ್ಸ್‌ಪೆಕ್ಟರ್ ಎಸ್‌ಬಿ ಸ್ವಾಮಿ ಅವರನ್ನು ಅಮಾನತು ಮಾಡಲಾಗಿದೆ. ನಿಷೇಧಿತ ಪ್ರದೇಶದಲ್ಲಿ ಜೀಪ್ ಚಾಲನೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಅಮಾನತು ಮಾಡಲಾಗಿದೆ. 

ಶ್ರೀರಂಗಪಟ್ಟಣ (ಮಾ.03): ಕೆಆರ್‌ಎಸ್‌ ಅಣೆಕಟ್ಟು ನಿಷೇಧಿತ ಪ್ರದೇಶದಲ್ಲಿ ಖಾಸಗಿ ವ್ಯಕ್ತಿಗೆ ಇಲಾಖೆ ವಾಹನ ನೀಡಿ ಸುತ್ತಾಡಿದ್ದಲ್ಲದೇ ಪಕ್ಕದಲ್ಲಿ ಕುಳಿತು ವಿಡಿಯೋ ಚಿತ್ರೀಕರಿಸಿದ್ದ ಆರೋಪದ ಮೇಲೆ ಅಣೆಕಟ್ಟೆಭದ್ರತೆಗೆ ನಿಯೋಜನೆಗೊಂಡಿದ್ದ ಕರ್ನಾಟಕ ಕೈಗಾರಿಕಾ ಭದ್ರತೆಯ 3ನೇ ಪಡೆಯ ಪೊಲೀಸ್‌ ಇನ್ಸ್‌ಪೆಕ್ಟರ್‌ ಎಸ್‌.ಬಿ.ಸ್ವಾಮಿ ಅವರನ್ನು ಅಮಾನತ್ತುಗೊಳಿಸಲಾಗಿದೆ. 

ಕೆಆರ್‌ಎಸ್‌ನಲ್ಲಿ ಯುವಕನ ಪುಂಡಾಟಕ್ಕೆ ಪೊಲೀಸ್ ಅಧಿಕಾರಿ ಸಾಥ್, ಬೀದಿ ವ್ಯಾಪಾರಿಗಳಿಗೆ ಮಾತ್ರ ಥಳಿತ! ..

ಇತ್ತೀಚೆಗೆ ತಮ್ಮ ಸಂಬಂಧಿಕರೆನ್ನಲಾದ ಯುವಕನಿಗೆ ಜೀಪನ್ನು ಓಡಿಸಲು ಬಿಟ್ಟು ಪಕ್ಕದಲ್ಲಿ ಕುಳಿತು ಕನ್ನಂಬಾಡಿ ಅಣೆಕಟ್ಟೆಯ ಸೇತುವೆಯಲ್ಲಿ ಓಡಾಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. 

ಪ್ರಕ​ರ​ಣ​ವನ್ನು ಗಂಭೀ​ರ​ವಾಗಿ ಪರಿ​ಗ​ಣಿ​ಸಿ​ರುವ ಪೊಲೀಸ್‌ ಇಲಾಖೆ ಕರ್ತವ್ಯಲೋಪ ಹಾಗೂ ನಿರ್ಲಕ್ಷ್ಯತೆ ಆರೋಪದಡಿ ರಾಜ್ಯ ಪೊಲೀಸ್‌ ಶಿಸ್ತು ನಡವಳಿ ನಿಯಮ 1965/89ರ ನಿಯಮ 5(1) ಮತ್ತು (2) ರಂತೆ ಸೇವೆಯಿಂದ ಅಮಾನಗೊಳಿಸಿ ಆದೇಶ ಹೊರಡಿಸಿದೆ.

PREV
click me!

Recommended Stories

ದಯಮಾಡಿ ಅರ್ಥ ಮಾಡಿಕೊಳ್ಳಿ ತಪ್ಪು ತಿಳಿಯಬೇಡಿ: ಸೋದರನ ಪೋಸ್ಟ್‌ಗೆ ಹೆಬ್ಬಾಳ್ಕರ್ ಪ್ರತಿಕ್ರಿಯೆ
ಅಣ್ಣಾ, ಇನ್ನು ಎಷ್ಟೊತ್ತು ಎಂದ ಗ್ರಾಹಕನಿಗೆ ಇದು ಪ್ಲೇನ್ ಅಲ್ಲ ಅಂದ ಬೆಂಗ್ಳೂರು ಕ್ಯಾಬ್ ಡ್ರೈವರ್!