ನಾರಾಯಣಗೌಡಗೆ ಓಪನ್ ಚಾಲೆಂಜ್ ಹಾಕಿದ KR ಪೇಟೆ ಟಿಕೆಟ್ ಆಕಾಂಕ್ಷಿ

By Kannadaprabha NewsFirst Published Sep 16, 2019, 2:47 PM IST
Highlights

ಕೆ ಆರ್ ಪೇಟೆ ಅನರ್ಹ ಶಾಸಕ ನಾರಾಯಣ ಗೌಡಗೆ  ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿ  ಓಪನ್ ಚಾಲೇಂಜ್ ಹಾಕಿದ್ದಾರೆ. 

ಮಂಡ್ಯ [ಸೆ.16]: ಜೆಡಿಎಸ್ ಮುಖಂಡ ದೇವೇಗೌಡರ ವಿರುದ್ಧ ಮಾತನಾಡಿದರೆ ಬೇರೆ ಪಕ್ಷದವರು ಗುರುತಿಸುತ್ತಾರೆ ಎಂದು ನಾರಾಯಣ ಗೌಡ ಈ ರೀತಿ ವರ್ತಿಸುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡ ಕೃಷ್ಣೇಗೌಡ ಹೇಳಿದ್ದಾರೆ. 

"

ಕಳ್ಳನ ಮನಸ್ಸು ಒಳ ಒಳಗೆ ಎನ್ನುವಂತೆ  ನಾರಾಯಣ ಗೌಡ ವರ್ತಿಸುತ್ತಿದ್ದಾರೆ. ಬೇರೆಯವರು ಸರಿ ಇಲ್ಲ ಎನ್ನುತ್ತಿದ್ದಾರೆ. ನಾನು ನಾರಾಯಣ ಗೌಡಗೆ ಓಪನ್ ಚಾಲೇಂಜ್ ಹಾಕುತ್ತೇನೆ ಎಂದು ಹೇಳಿದರು. 

ನಾನು ಕೆ.ಆರ್. ಪೇಟೆ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಅವರು ಸ್ಪರ್ಧಿಸಲಿ. ಎಲ್ಲರಿಗೂ ಬಾಂಬೆ ಟೋಪಿ ಹಾಕುತ್ತಿರುವ ಅವರು ಈಗ ಯಡಿಯೂರಪ್ಪ ಬಳಿ ಹೋಗಿದ್ದಾರೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ನಾರಾಯಣ ಗೌಡ ಬಂದಿರೋದ್ರಿಂದ ನಾರಾಯಣ ಗೌಡರು ಅತ್ಯಂತ ಹುಷಾರಾಗಿ ಇರಬೇಕು ಎಂದು ಕೆ.ಆರ್.ಪೇಟೆ ಟಿಕೆಟ್ ಆಕಾಂಕ್ಷಿಯೂ ಆಗಿರುವ ಕೃಷ್ಣೇಗೌಡ ಎಚ್ಚರಿಕೆ ನೀಡಿದ್ದಾರೆ.

click me!