ಎರಡು ಸಲ ಸೋಲಿಸಿದ್ರಿ, ಈ ಬಾರಿ ಗೆಲ್ಲಿಸಿ: ಕಾಂಗ್ರೆಸ್ ಅಭ್ಯರ್ಥಿ ಪ್ರಚಾರ

Published : Dec 03, 2019, 08:02 AM IST
ಎರಡು ಸಲ ಸೋಲಿಸಿದ್ರಿ, ಈ ಬಾರಿ ಗೆಲ್ಲಿಸಿ: ಕಾಂಗ್ರೆಸ್ ಅಭ್ಯರ್ಥಿ ಪ್ರಚಾರ

ಸಾರಾಂಶ

ನಿಮ್ಮ ಜತೆಯಲ್ಲಿದ್ದು ಮನೆ ಮಗನಂತೆ ಶಾಸಕನಾಗಿ ಕೆಲಸ ಮಾಡುತ್ತೇನೆ. ಈ ಬಾರಿ ನನ್ನ ಗೆಲ್ಲಿಸಿಕೊಡಿ ಎಂದು ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್‌ ಮನವಿ ಮಾಡಿದ್ದಾರೆ.

ಮಂಡ್ಯ(ಡಿ.03): ನಿಮ್ಮ ಜತೆಯಲ್ಲಿದ್ದು ಮನೆ ಮಗನಂತೆ ಶಾಸಕನಾಗಿ ಕೆಲಸ ಮಾಡುತ್ತೇನೆ. ಈ ಬಾರಿ ನನ್ನ ಗೆಲ್ಲಿಸಿಕೊಡಿ ಎಂದು ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್‌ ಮನವಿ ಮಾಡಿದ್ದಾರೆ.

ತಾಲೂಕಿನ ಬೂಕನಕೆರೆ ಹೋಬಳಿಯ ಮತ್ತಿಕೆರೆ, ಮಾಚಗೋನಹಳ್ಳಿ, ಬಲ್ಲೇನಹಳ್ಳಿ, ಕಾಶಿಮುರಕುನಹಳ್ಳಿ, ಹೆರಗನಹಳ್ಳಿ, ಬಸ್ಥಿಹೊಸಕೋಟೆ, ದೊಡ್ಡಗಾಡಿಗನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ಮಾಡಿ ಮಾತನಾಡಿದ್ದಾರೆ.

ಮತ್ತೆ ಚಂಡಮಾರುತ, ರಾಜ್ಯದ ಈ ಭಾಗದಲ್ಲಿ ಇನ್ನೆರಡು ದಿನ ಭಾರೀ ಮಳೆ

ಬಿಜೆಪಿ ನೀಡುವ ಹಣ, ಸೀರೆ, ಮೂಗು ಬಟ್ಟು, ವಾಚ್‌ ತಗೆದುಕೊಳ್ಳಿ. ಆದರೆ, ಮತವನ್ನು ನನಗೆ ಹಾಕಿ, ಎರಡು ಬಾರಿ ಸೋಲಿಸಿದ್ದೀರಿ. ಈ ಬಾರಿ ಗೆಲ್ಲಿಸುವ ಮೂಲಕ ತಾಲೂಕಿನ ಅಭಿವೃದ್ಧಿಗೆ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು ಎಂದಿದ್ದಾರೆ.

ನಾನು ಕೂಡ ಈ ಹಿಂದೆ ಹಣಕ್ಕಾಗಿ ಮಾರಾಟ ಮಾಡಿಕೊಳ್ಳಬಹುದಿತ್ತು. ಕೇಳಿದಷ್ಟುದುಡ್ಡು, ಅಧಿಕಾರ ಎಲ್ಲವನ್ನೂ ನೀಡುತ್ತಿದ್ದರು. ಆದರೆ, ಮತದಾರರು ನೀಡಿರುವ ಅಧಿಕಾರವನ್ನು ಮಾರಾಟ ಮಾಡಿಕೊಂಡರೇ ಹೆತ್ತ ತಾಯಿಗೆ ಮೋಸ ಮಾಡಿದಂತೆ ಎಂದು ಭಾವಿಸಿ ಅಂತಹ ನೀಚ ಕೆಲಸಕ್ಕೆ ಹೋಗಲಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಕಬಲೆಗೆರೆ ಪುಟ್ಟಸ್ವಾಮಿ, ಲಕ್ಕೇಗೌಡ, ಬಸವರಾಜು, ಗ್ರಾಪಂ ಸದಸ್ಯ ಮಂಜು ಸೇರಿದಂತೆ ಹಲವರಿದ್ದರು.

ಪ್ರಣಾಳಿಕೆ ಬಿಡುಗಡೆ: ಕೆ. ಆರ್. ಪೇಟೆ ಅಭಿವೃದ್ಧಿಗೆ ಬಿಜೆಪಿ ಪ್ಲಾನಿಂಗ್ ಏನು..?

PREV
click me!

Recommended Stories

ಗ್ರ್ಯಾಮಿ ಪ್ರಶಸ್ತಿ ವಿಜೇತ ಖ್ಯಾತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಬೆಂಗಳೂರು ಮನೆಯಿಂದ ಡೆಲಿವರಿ ಬಾಯ್ಸ್ ಕಳ್ಳತನ!
ನನಗೆ ಎಚ್ಚರಿಕೆ ಕೊಡೋ ಮುನ್ನ ಹುಷಾರ್, ಕಾಮನ್‌ಸೆನ್ಸ್ ಇಟ್ಟುಕೊಂಡು ಡೀಲ್ ಮಾಡಿ, ಪತ್ರ ಬರೆದವನಿಗೆ ಡಿಕೆಶಿ ವಾರ್ನಿಂಗ್!