ಜಾನಕಿಯಾಗಿ ವೆಂಕಟೇಶ್ ರೆಡ್ಡಿ ಕೈ ಹಿಡಿದ ಶಹೀನಾ: ಸಪ್ತಪದಿ ತುಳಿದ ಅಪರೂಪದ ಪ್ರೇಮಕಥೆ

Published : Aug 31, 2026, 06:21 AM IST
Interfaith marriage

ಸಾರಾಂಶ

ಕೊಪ್ಪಳದಲ್ಲಿ, ಒಂಬತ್ತು ವರ್ಷಗಳಿಂದ ಪ್ರೀತಿಸುತ್ತಿದ್ದ ಹಿಂದೂ ಯುವಕ ವೆಂಕಟೇಶ್ ರೆಡ್ಡಿ ಮತ್ತು ಮುಸ್ಲಿಂ ಯುವತಿ ಶಹೀನಾ, ಕುಟುಂಬದವರ ಒಪ್ಪಿಗೆಯೊಂದಿಗೆ ಹಿಂದೂ ಸಂಪ್ರದಾಯದಂತೆ ವಿವಾಹವಾದರು. ಪ್ರೀತಿಗಾಗಿ ಧರ್ಮದ ಎಲ್ಲೆ ಮೀರಿ, ಶಹೀನಾ ಸಪ್ತಪದಿ ತುಳಿದು 'ಜಾನಕಿ'ಯಾಗಿ ಹೊಸ ಜೀವನಕ್ಕೆ ಕಾಲಿಟ್ಟರು.

ಕೊಪ್ಪಳ: ಇಲ್ಲಿಯ ಭಾಗ್ಯನಗರದ ಕಲ್ಯಾಣ ಮಂಟಪದಲ್ಲಿ ನಡೆದ ಹಿಂದೂ ಯುವಕ-ಮುಸ್ಲಿಂ ಯುವತಿಯ ವಿವಾಹ ಸಾಮರಸ್ಯ, ಸೌಹಾರ್ದಕ್ಕೆ ಸಾಕ್ಷಿಯಾಯಿತು. ಪ್ರೀತಿಸಿದ ಯುವಕನಿಗಾಗಿ ಮುಸ್ಲಿಂ ಯುವತಿ ಧರ್ಮದ ಕಟ್ಟಳೆ ಮೀರಿ ಬಿಂದಿ ಧರಿಸಿ, ಸಪ್ತಪದಿ ತುಳಿದು ಹಿಂದೂ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದಾರೆ.

ಬಾಷುಸಾಬ್‌ ಕಟ್ಟಿಮನಿ ಅವರ ಪುತ್ರಿ ಶಹೀನಾ ಮದುವೆ

ತಾಲೂಕಿನ ಅಳವಂಡಿ ಗ್ರಾಮದ ಚಂದ್ರಕಲಾ ಹಾಗೂ ಸಿದ್ದರಡ್ಡಿ ಬಿಸನಹಳ್ಳಿ ಎಂಬುವರ ಮಗ ವೆಂಕಟೇಶ್ ರಡ್ಡಿ ಹಾಗೂ ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಚಿಲಕವಾಡ ಗ್ರಾಮದ ಮಮ್ತಾಜಿ ಹಾಗೂ ಬಾಷುಸಾಬ್‌ ಕಟ್ಟಿಮನಿ ಅವರ ಪುತ್ರಿ ಶಹೀನಾ ಮದುವೆ ಭಾಗ್ಯನಗರ ಬಾಲಾಜಿ ಕಲ್ಯಾಣ ಮಂಟಪದಲ್ಲಿ ನಡೆಯಿತು. ಎರಡು ಕುಟುಂಬದವರು ಹಾಗೂ ಎರಡು ಗ್ರಾಮಸ್ಥರ ಸಮ್ಮುಖದಲ್ಲಿ ಸಕಲ ವಾದ್ಯವೃಂದ, ಮಂತ್ರ ಪಠಣ ಮೂಲಕ ವಿವಾಹ ನೆರವೇರಿತು.

ಒಂಬತ್ತು ವರ್ಷದ ಪ್ರೀತಿ

ಕಾಲೇಜು ಓದುವ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಚಿಗುರಿದೆ. ಪದವಿ ಮುಗಿದರೂ ಇವರ ಪ್ರೀತಿ ನಿರಂತರವಾಗಿರುತ್ತದೆ. ಮೊದಲು ಕುಟುಂಬದವರು ವಿರೋಧಿಸಿದ್ದರೂ ಯುವಕ-ಯುವತಿ ಕುಟುಂಬದವರನ್ನು ಒಪ್ಪಿಸಿ, ಬಂಧು-ಬಾಂಧವರ ಎದುರು ವಿವಾಹವಾಗಿದ್ದಾರೆ. ಶಹೀನಾ ಸಪ್ತಪದಿ ತುಳಿದು, ಮಂತ್ರ ಪಠಣಗಳೊಂದಿಗೆ ಮಾಂಗಲ್ಯ ಕಟ್ಟಿಸಿಕೊಳ್ಳುವ ಮೂಲಕ ''ಜಾನಕಿ''ಯಾಗಿದ್ದಾರೆ. ಎರಡೂ ಕುಟುಂಬದವರು ಹಾಗೂ ಗೆಳೆಯರು ಒಟ್ಟಾಗಿ ಬೆರೆತು, ವಿವಾಹದಲ್ಲಿ ಪಾಲ್ಗೊಂಡು, ಭೋಜನ ಸವಿದರು.

ಇದನ್ನೂ ಓದಿ: ಅಲ್ಪಸಂಖ್ಯಾತ ಮಕ್ಕಳು ರಫೇಲ್‌ ಯುದ್ಧವಿಮಾನ ಬಿಚ್ಚಿ ಜೋಡಿಸಬಲ್ಲರು, ಆದ್ರೆ ಓದಿದ್ದು ಮರೀತಾರೆ: ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ

ಇದನ್ನೂ ಓದಿ: ಇದೇ ನೋಡಿ ಪಾಕಿಸ್ತಾನದ ಅತಿದೊಡ್ಡ ಹಿಂದೂ ನಗರ? ಇಲ್ಲಿಯ ಜನಸಂಖ್ಯೆ ಎಷ್ಟಿದೆ? ಇಲ್ಲಿಯ ಆಚರಣೆ ಹೇಗೆ?

PREV
Read more Articles on
click me!

Recommended Stories

ಕಾರಂತ ಬಡಾವಣೆ: 17 ಹಳ್ಳಿ, 3069 ಎಕರೆ ಪ್ರದೇಶ; 600 ಮಾಲೀಕರಿಗೆ ಇಂದು ನಿವೇಶನ ಹಂಚಿಕೆ
Bengaluru: ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ಯುವಕನಿಂದ 3.75 ಲಕ್ಷ ದೋಚಿದ ಯುವತಿ