ಹೈದರಾಬಾದ್ ಉದ್ಯಮಿ ಅಂಜನಾದ್ರಿಗೆ ಅರ್ಪಿಸಿದ ಚಿನ್ನದ ಕಿರೀಟ, ಗದೆ ಅಸಲಿಯತ್ತು ಬಯಲು

Published : May 11, 2026, 05:51 AM IST
Anjanadri

ಸಾರಾಂಶ

ಗಂಗಾವತಿಯ ಕಿಷ್ಕಿಂದಾ ಅಂಜನಾದ್ರಿಗೆ ಹೈದರಾಬಾದ್ ಉದ್ಯಮಿಯೊಬ್ಬರು ಸಮರ್ಪಿಸಿದ್ದ ಆಭರಣಗಳು ಚಿನ್ನದ್ದಲ್ಲ, ಬದಲಿಗೆ ಚಿನ್ನಲೇಪಿತ ತಾಮ್ರ ಎಂದು ದೃಢಪಟ್ಟಿದೆ. ಲೋಹ ತಜ್ಞರ ಪರೀಕ್ಷೆ ನಂತರ, ದೇವಾಲಯದ ಆಡಳಿತಾಧಿಕಾರಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದು, ದಾನಿಗಳಿಂದ ಸಾಮಗ್ರಿಗಳ ಮೌಲ್ಯದ ರಸೀದಿ ಕೇಳಲಾಗಿದೆ.

ಗಂಗಾವತಿ (ಕೊಪ್ಪಳ):  ತಾಲೂಕಿನ ಐತಿಹಾಸಿಕ ಕಿಷ್ಕಿಂದಾ ಅಂಜನಾದ್ರಿಯ ಆಂಜನೇಯಸ್ವಾಮಿಗೆ ಹೈದರಾಬಾದ್ ಮೂಲದ ಉದ್ಯಮಿ ಮಹೇಶ ರೆಡ್ಡಿ ಕುಟುಂಬಸ್ಥರು ಸಮರ್ಪಣೆ ಮಾಡಿರುವ ಪ್ರಭಾವಳಿ, ಕಿರೀಟ, ಗದೆ ಸೇರಿದಂತೆ 12 ಸಾಮಗ್ರಿಗಳು ಚಿನ್ನಲೇಪಿತ ತಾಮ್ರದಿಂದ ಕೂಡಿದ್ದಾಗಿವೆ. ಎಲ್ಲವೂ ಚಿನ್ನದಿಂದ ಕೂಡಿಲ್ಲ ಎಂದು ಕಿಷ್ಕಿಂದಾ ಅಂಜನಾದ್ರಿ ದೇವಾಲಯದ ಆಡಳಿತಾಧಿಕಾರಿ ಹಾಗೂ ಎಸಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ತಿಳಿಸಿದ್ದಾರೆ.

ಪ್ರಭಾವಳಿ ಗದೆ, ಕಿರೀಟ ಇತರ ಪೂಜಾ ಸಾಮಗ್ರಿಗಳು

ಕಿಷ್ಕಿಂದಾ ಅಂಜನಾದ್ರಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ದೇವಾಲಯಕ್ಕೆ ಸಮರ್ಪಣೆಯಾಗಿರುವ ಸಾಮಾನುಗಳನ್ನು ಲೋಹ ತಜ್ಞರಿಂದ ಪರೀಕ್ಷೆ ಮಾಡಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಹೈದರಾಬಾದ್ ಮೂಲದ ಎಎಂಆರ್ ಕಂಪನಿಯ ಮಹೇಶ ರೆಡ್ಡಿ ಹಾಗೂ ಕುಟುಂಬಸ್ಥರು ಮೇ 8ರಂದು ಪ್ರಭಾವಳಿ ಗದೆ, ಕಿರೀಟ ಇತರ ಪೂಜಾ ಸಾಮಗ್ರಿಗಳನ್ನು ಸಮರ್ಪಣೆ ಮಾಡಿದ್ದರು. 

ತಾಮ್ರಕ್ಕೆ ಚಿನ್ನದ ತಗಡು ಲೇಪನ

ಒಂದೂವರೆ ಕೇಜಿ ಚಿನ್ನದಿಂದ ಮಾಡಲಾದ ಅಂದಾಜು ₹2.30 ಕೋಟಿ ಮೌಲ್ಯದ ಆಭರಣಗಳು ಇವು ಎಂದು ಹೇಳಲಾಗಿತ್ತು. ಆದರೆ, ಇವು ಚಿನ್ನಲೇಪಿತ ತಾಮ್ರದಿಂದ ಕೂಡಿವೆ ಎಂದು ಲೋಹ ಪರಿಶೋಧಕರು ದೃಢಪಡಿಸಿದ್ದು, ತಾಮ್ರಕ್ಕೆ ಚಿನ್ನದ ತಗಡು ಲೇಪನ ಮಾಡಲಾಗಿದೆ. ಎಲ್ಲವೂ ಚಿನ್ನದ ಸಾಮಗ್ರಿ ಅಲ್ಲ. ದಾನ ನೀಡಿದ ದಾನಿಗಳನ್ನು ಸಂಪರ್ಕಿಸಿ ಆಂಜನೇಯನಿಗೆ ಸಮರ್ಪಣೆ ಮಾಡಿದ ಸಾಮಗ್ರಿಗಳ ಮೌಲ್ಯ ಹಾಗೂ ರಸೀದಿಯನ್ನು ದೇವಾಲಯದ ಕಮಿಟಿಗೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ಶೀಘ್ರ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.

PREV
Read more Articles on
click me!

Recommended Stories

ಮಳೆ ನಿಂತು 10 ದಿನ ಕಳೆದ್ರೂ ಬಿದ್ದ ಮರಗಳ ಸಂಗ್ರಹಕ್ಕೆ ಜಿಬಿಎ ಪರದಾಟ; ಅಗತ್ಯ ಜಾಗವೇ ಇಲ್ಲ
Bengaluru: ಪ್ರೇಯಸಿ ಜತೆ ಪರಾರಿ ಆಗಿದ್ದ ಯುವಕನ ಅಣ್ಣನ ಕಿಡ್ನಾಪ್‌ ನಾಟಕ ಕೊನೆಗೂ ಬಯಲು