KR ಪೇಟೆ ಬಿಜೆಪಿ ಗೆಲುವಿನ ಹಿಂದೆ ತೋಟದ ಮನೆಯ ಸೀಕ್ರೆಟ್

Published : Dec 10, 2019, 01:06 PM IST
KR ಪೇಟೆ ಬಿಜೆಪಿ ಗೆಲುವಿನ ಹಿಂದೆ ತೋಟದ ಮನೆಯ ಸೀಕ್ರೆಟ್

ಸಾರಾಂಶ

KR ಪೇಟೆ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಇದರ ಹಿಂದಿನ ಸೀಕ್ರೆಟ್ ಇಲ್ಲಿನ ತೋಟದ ಮನೆ ಎನ್ನಲಾಗುತ್ತಿದೆ. ಏನಿದು ತೋಟದ ಮನೆ ಸೀಕ್ರೆಟ್

ಮಂಡ್ಯ [ಡಿ.10]: ರಾಜ್ಯದಲ್ಲಿ 15 ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳನ್ನು ಗೆದ್ದಿದ್ದು, ಕಾಂಗ್ರೆಸ್ 2 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಇನ್ನು ಜೆಡಿಎಸ್ ಚುನಾವಣೆಯಲ್ಲಿ ಶೂನ್ಯ ಫಲಿತಾಂಶ ದಾಖಲು ಮಾಡಿದೆ. 

ಜೆಡಿಎಸ್ ಭದ್ರಕೋಟೆ ಎಂದೇ ಕರೆಸಿಕೊಳ್ಳುತ್ತಿದ್ದ ಕೆ.ಆರ್.ಪೇಟೆ ಸಹ ಈ ಬಾರಿ ಬಿಜೆಪಿ ವಶವಾಗಿದ್ದು, ನಾರಾಯಣ ಗೌಡಗೆ ವಿಜಯ ಒಲಿದಿದೆ. ಈ ಜಯದ ಹಿಂದೆ ಒಂದು ಸೀಕ್ರೆಟ್ ಅಡಗಿದೆ. 

ಕೆ.ಆರ್ ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ ಗೆಲುವಿಗೆ ಇಂದು ಇರುವುದು ತೋಟದ ಮನೆ ಸೀಕ್ರೆಟ್. ಬಿಜೆಪಿ ಶಕ್ತಿ ಕೇಂದ್ರವಾಗಿದ್ದ ಆ ತೋಟದ ಮನೆ ಸದ್ಯ ಕೆ.ಆರ್.ಪೇಟೆ ಬಿಜೆಪಿಗರಿಗೆ ಅದೃಷ್ಟದ ಮನೆ ಎನಿಸಿಕೊಂಡಿದೆ. ಕೆ.ಆರ್ ಪೇಟೆ ಗೆಲುವಿನ ಎಲ್ಲಾ ಲೆಕ್ಕಾಚಾರಗಳೂ ಇಲ್ಲಿಯೇ ನಡೆದಿದ್ದವು. 

ನೂತನ ಶಾಸಕರಿಗೆ ಸಚಿವ ಸಂಪುಟದಲ್ಲಿ ಮಣೆ, ಉಳಿದವರಿಗೆ ಬೇರೆ ಹೊಣೆ?..

ಈ ಕ್ಷೇತ್ರದಲ್ಲಿ ಬಿಜೆಪಿ ಜಯಗಳಿಸಲು ಪ್ರಮುಖ ಪಾತ್ರ ವಹಿಸಿದ್ದ ಸಿಎಂ ಬಿಎಸ್ ವೈ ಪುತ್ರ ವಿಜಯೇಂದ್ರ ಸತತ 15 ದಿನಗಳ ಕಾಲ ಇಲ್ಲಿಯೇ ವಾಸ ಮಾಡಿದ್ದು, ಚುನಾವಣೆಯ ಎಲ್ಲಾ ಮಾಸ್ಟರ್ ಪ್ಲಾನ್ ಗಳು ಇಲ್ಲಿಯೇನಡೆದಿದ್ದವು.  ಈ ಮನೆಯಲ್ಲಿ ರಣತಂತ್ರ ರೂಪಿಸಿ ಜೆಡಿಎಸ್ ಭದ್ರಕೋಟೆ ಭೇದಿಸಲು ವಿಜಯೇಂದ್ರ ನೇತೃತ್ವದ ತಂಡ ಕಾರ್ಯತಂತ್ರಗಳನ್ನು ರೂಪಿಸಿತ್ತು. 

ಮಂಡ್ಯದ ಕೆ.ಆರ್.ಪೇಟೆ ಪಟ್ಟಣದಿಂದ 4 ಕಿ.ಮೀ ದೂರದಲ್ಲಿ ಇರುವ ಮನೆಯು ಪ್ರಶಾಂತ ವಾತಾವರಣದಲ್ಲಿ ಇದ್ದು ಪ್ರತಿದಿನವೂ ಕೂಡ ಇದೇ ಮನೆಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆಯುತ್ತಿತ್ತು. ಈ ತೋಟದ ಮನೆಯ ಲಕ್ ಬಿಜೆಪಿಗೆ ಗೆಲುವು ತಂದುಕೊಟ್ಟಿದೆ ಎಂದೇ ಇದೀಗ ಕಾರ್ಯಕರ್ತರು ಹೇಳುತ್ತಿದ್ದಾರೆ. 

PREV
click me!

Recommended Stories

ಬಾಗಲಕೋಟೆ ಉಪಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ: ಯಾರಿಗೆ ವಿಜಯ ಮಾಲೆ?
Darshan bail plea Supreme Court: ರೇಣುಕಾಸ್ವಾಮಿ ಕೊಲೆ ಕೇಸ್; ಸುಪ್ರೀಂನಲ್ಲಿಂದು ದರ್ಶನ್ ಜಾಮೀನು ವಿಚಾರಣೆ