ಸುವರ್ಣ ನ್ಯೂಸ್ ಸಂಕಲ್ಪಕ್ಕೆ ಸ್ಪಂದಿಸಿದ ಕರುನಾಡು

Published : Aug 18, 2018, 03:52 PM ISTUpdated : Sep 09, 2018, 10:08 PM IST
ಸುವರ್ಣ ನ್ಯೂಸ್ ಸಂಕಲ್ಪಕ್ಕೆ ಸ್ಪಂದಿಸಿದ ಕರುನಾಡು

ಸಾರಾಂಶ

'ಸಾಧ್ಯವಾದಷ್ಟು ಸಹಾಯ ಮಾಡಿ...' ಸುವರ್ಣ ನ್ಯೂಸ್ ಹಾಗೂ ಸುವರ್ಣ ನ್ಯೂಸ್.ಕಾಮ್ ಕನ್ನಡಿಗರನ್ನು ಕೇಳಿ ಕೊಂಡಿದ್ದು ಇಷ್ಟೆ. ಆದರೆ, ಉದಾರ ಮನಸ್ಸಿನಿಂದ ಕೈ ತುಂಬಾ ಅಗತ್ಯ ವಸ್ತುಗಳನ್ನು ತಂದು ಕೊಟ್ಟ ಕನ್ನಡಿಗರ ಹೃದಯ ವೈಶಾಲ್ಯತೆಗೆ ಏನು ಹೇಳುವುದು? ಧನ್ಯವಾದ ಕರ್ನಾಟಕ.

ಬೆಂಗಳೂರು: ಕೊಡಗಿನ ಪ್ರವಾಹ ಸಂತ್ರಸ್ತರಿಗಾಗಿ ಅಗತ್ಯ ವಸ್ತುಗಳನ್ನು ನೀಡಲು ಸುವರ್ಣ ನ್ಯೂಸ್ ಹಾಗೂ ಸುವರ್ಣನ್ಯೂಸ್.ಕಾಮ್ ಕರೆ ನೀಡಿದ್ದು, ಕನ್ನಡಿಗರು ತುಂಬು ಹೃದಯದಿಂದ ಸ್ಪಂದಿಸಿದ್ದಾರೆ. ಈ ಕರೆಗೆ ನಿರೀಕ್ಷೆಗೂ ಮೀರಿ ಜನರು ಸ್ಪಂದಿಸುತ್ತಿದ್ದು, ಅಗತ್ಯ ವಸ್ತುಗಳನ್ನು ನಮ್ಮ ಕಚೇರಿಗೆ ತಲುಪಿಸಿದ್ದಾರೆ. ಇನ್ನೂ ನೆರವಿನ ಮಹಾಪೂರ ಹರಿದು ಬರುತ್ತಲೇ ಇದ್ದು, ಸಾಕೆಂದು ನಾವೇ ಮನವಿ ಮಾಡಿ ಕೊಳ್ಳುತ್ತಿದ್ದೇವೆ.

ಅಕ್ಕಿ, ನೀರು, ಜ್ಯೂಸ್, ಔಷಧಿಗಳು, ಸ್ಯಾನಿಟರಿ ಪ್ಯಾಡ್ಸ್, ಬಿಸ್ಕತ್, ಬ್ರೆಡ್, ಹೊದಿಕೆ..ಹೀಗೆ ಮೂಟೆ ಮೂಟೆ ಅಗತ್ಯ ವಸ್ತುಗಳು ಬಂದಿದ್ದು, ಲಾರಿಗಳ ಮೂಲಕ ಸಂತ್ರಸ್ತರಿಗೆ ತಲುಪಿಸುವ ವ್ಯವಸ್ಥೆಯನ್ನೂ ಸಂಸ್ಥೆ ಮಾಡಿದೆ. 

ಕನ್ನಡಿಗರ ಈ ಸ್ಪಂದನೆಗೆ ನಮ್ಮ ಧನ್ಯವಾದಗಳು.

PREV
click me!

Recommended Stories

ಫೇಸ್‌ಬುಕ್ ಚಿಟ್ಟೆಯ ಮುಖ ನೋಡಿ ಹನಿಹೀರಲು ಬಂದವನೇ ಟ್ರ್ಯಾಪ್ , ಯುವಕನ ಮೇಲೆ ಹಲ್ಲೆ, ಹಣಕ್ಕೆ ಬೇಡಿಕೆ ಇಟ್ಟವರು ಎಸ್ಕೇಪ್!
ಫೇಸ್‌ಬುಕ್‌ ಗೆಳತಿಗಾಗಿ ಮಡಿಕೇರಿಗೆ ಬಂದು ನರಕ ನೋಡಿದ ಮಂಡ್ಯದ ಹೈದ! ಬೆತ್ತಲೆಯಾಗಿ ಓಡೋಡಿ ಬಂದ!