ಗೃಹ ಸಚಿವರ ತವರಲ್ಲೇ ಪೊಲೀಸ್ ಇನ್ಸ್‌ಪೆಕ್ಟರ್ ಕಾರಿಗೆ ಬೆಂಕಿ ಹಚ್ಚಿದ ಕಾನ್‌ಸ್ಟೇಬಲ್!

Published : Sep 16, 2026, 12:35 PM IST
Kalaburagi PSI Car fire

ಸಾರಾಂಶ

ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ನೀಡಿದ ದೂರಿನಿಂದ ಕೋಪಗೊಂಡ ಕಾನ್ಸ್ಟೇಬಲ್ ರಾಜಶೇಖರ ವರನಾಳ್, ಪಿಎಸ್‌ಐ ಬಸವರಾಜ್ ಚಿತಕೋಟೆ ಅವರ ಕಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ತನ್ನ ವಿರುದ್ಧ ದೂರು ದಾಖಲಿಸಿಕೊಂಡಿದ್ದಕ್ಕೆ ಸಿಟ್ಟಾಗಿ ಈ ಕೃತ್ಯವೆಸಗಿದ್ದು, ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಕಲಬುರಗಿ (ಸೆ.16): ಖಾಕಿ ರಕ್ಷಣೆ ಮಾಡಬೇಕಾದವರೇ ಖತರ್ನಾಕ್ ಕೃತ್ಯಕ್ಕೆ ಇಳಿದಿರುವ ಬೆಚ್ಚ ಬೀಳಿಸುವ ಘಟನೆಯೊಂದು ಗೃಹ ಸಚಿವರ ತವರು ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆಯೊಬ್ಬರು ನೀಡಿದ ದೂರಿನಿಂದ ಕೋಪಗೊಂಡ ಪೊಲೀಸ್ ಕಾನ್ಸ್ಟೇಬಲ್ ಒಬ್ಬ, ನೇರವಾಗಿ ಠಾಣೆಯ ಪಿಎಸ್‌ಐ (PSI) ಅವರ ವೈಯಕ್ತಿಕ ಕಾರಿಗೇ ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ತೀವ್ರ ಸಂಚಲನ ಮೂಡಿಸಿದೆ.

ಮಹಾಗಾಂವ್ ಪೊಲೀಸ್ ಠಾಣೆಯ ಪಿಎಸ್‌ಐ ಬಸವರಾಜ್ ಚಿತಕೋಟೆ ಅವರ ಪರ್ಸನಲ್ ಕಾರಿಗೆ ಬೆಂಕಿ ಹಚ್ಚಿದ ಆರೋಪಿಯನ್ನು ಕಾನ್ಸ್ಟೇಬಲ್ ರಾಜಶೇಖರ ವರನಾಳ್ ಎಂದು ಗುರುತಿಸಲಾಗಿದೆ.

ಘಟನೆಯ ಹಿನ್ನೆಲೆ ಏನು?

ಆರೋಪಿ ಕಾನ್ಸ್ಟೇಬಲ್ ರಾಜಶೇಖರ ವರನಾಳ್ ಕಳೆದ 4 ವರ್ಷಗಳಿಂದ ಮಹಾಗಾಂವ್ ಪೊಲೀಸ್ ಠಾಣೆಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದನು. ಆದರೆ, ಆಡಳಿತಾತ್ಮಕ ಕಾರಣಗಳಿಂದ ಅಥವಾ ಇನ್ಯಾವುದೋ ಕಾರಣಕ್ಕಾಗಿ ತಿಂಗಳ ಹಿಂದಷ್ಟೇ ಆತನನ್ನು ಚಿಂಚೋಳಿ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಹಳೆಯ ಠಾಣೆಯ ಮೇಲಿನ ಮೋಹವೋ ಅಥವಾ ಇನ್ಯಾವ ಸಿಟ್ಟೋ ಒಟ್ಟಿನಲ್ಲಿ ಕಾನ್ಸ್ಟೇಬಲ್ ಹೊಸ ಠಾಣೆಗೆ ತೆರಳಿದ್ದರು.

ದೂರು ದಾಖಲಾಗುತ್ತಿದ್ದಂತೆ ಕೆರಳಿದ ಕಾನ್ಸ್ಟೇಬಲ್:

ಇದೇ ವೇಳೆ, ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಗಂಭೀರ ಆರೋಪ ಕಾನ್ಸ್ಟೇಬಲ್ ರಾಜಶೇಖರ್ ಮೇಲಿತ್ತು. ಈ ಸಂಬಂಧ ರೇಷ್ಮಾ ಎನ್ನುವ ಮಹಿಳೆ ಮಹಾಗಾಂವ್ ಠಾಣೆಗೆ ತೆರಳಿ ರಾಜಶೇಖರ್ ವಿರುದ್ಧ ದೂರು ದಾಖಲಿಸಿದ್ದರು. ನಾಲ್ಕು ವರ್ಷಗಳ ಕಾಲ ತಾನು ಕೆಲಸ ಮಾಡಿದ್ದ ಅದೇ ಠಾಣೆಯಲ್ಲಿಯೇ ತನ್ನ ವಿರುದ್ಧ ದೂರು ದಾಖಲಾಗುತ್ತಿದ್ದಂತೆಯೇ ಕಾನ್ಸ್ಟೇಬಲ್ ರಾಜಶೇಖರ್‌ಗೆ ತೀವ್ರ ಕೋಪ ಬಂದಿದೆ. ತನ್ನ ವಿರುದ್ಧವೇ ದೂರು ದಾಖಲಿಸಿಕೊಳ್ಳಲು ಅವಕಾಶ ನೀಡಿದ ಪಿಎಸ್‌ಐ ಮೇಲಿನ ಸಿಟ್ಟಿಗೆ, ಮಹಾಗಾಂವ್ ಠಾಣೆಯ ಪಿಎಸ್‌ಐ ಬಸವರಾಜ್ ಚಿತಕೋಟೆ ಅವರ ವೈಯಕ್ತಿಕ ಕಾರಿಗೆ ಬೆಂಕಿ ಹಚ್ಚಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಅಲ್ಪ ಹಾನಿ, ಕಾನ್ಸ್ಟೇಬಲ್ ಮೇಲೆ ಮತ್ತೊಂದು ಕೇಸ್:

ಕಾರಿಗೆ ಬೆಂಕಿ ಹಚ್ಚುವುದನ್ನು ಗಮನಿಸಿದ ಸ್ಥಳದಲ್ಲಿದ್ದವರು ತಕ್ಷಣವೇ ಎಚ್ಚೆತ್ತುಕೊಂಡು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ದೊಡ್ಡಮಟ್ಟದ ಅನಾಹುತ ತಪ್ಪಿದ್ದು, ಕಾರಿಗೆ ಅಲ್ಪ ಹಾನಿಯಾಗಿದೆ.

ತನ್ನ ಕಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿರುವ ಕಾನ್ಸ್ಟೇಬಲ್ ರಾಜಶೇಖರ ವರನಾಳ್ ಕೃತ್ಯದ ವಿರುದ್ಧ ಸ್ವತಃ ಪಿಎಸ್‌ಐ ಬಸವರಾಜ್ ಚಿತಕೋಟೆ ಅವರೇ ಅತ್ತಿಬೆಲೆ/ಸಂಬಂಧಿತ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕರ್ತವ್ಯದಲ್ಲಿದ್ದುಕೊಂಡು ಇಂತಹ ಅಶಿಸ್ತಿನ ವರ್ತನೆ ತೋರಿರುವ ಕಾನ್‌ಸ್ಟೇಬಲ್ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದು, ತನಿಖೆ ಮುಂದುವರೆದಿದೆ.

PREV
Read more Articles on
click me!

Recommended Stories

4 ಕಿ.ಮೀ. ಬಸ್ ಪ್ರಯಾಣ, 'ಆ' ಯುವತಿಯ ಶಾರ್ಟ್ ಡ್ರೆಸ್: ಬೆಂಗಳೂರಿನ ಯುವಕನಿಗೆ ಎದುರಾಯ್ತು ವಿಚಿತ್ರ ಅನುಭವ!
ಕೊನೆಗೂ ಪೊಲೀಸರ ಬಲೆಗೆ ‘ಸೂಡೋ ನಕ್ಸಲ್’ ಕನಕಲಬಂಡೆ ವೆಂಕಟೇಶ್! ಎಣ್ಣೆ ಹೊಡೆಯುತ್ತಾ ಚಿಕನ್ ಸೇವಿಸುತ್ತಿದ್ದ ಆರೋಪಿ