ಬೇಸರವಾಗೋದು ಬೇಡ : ನಾನು ನನ್ನ ಮಗ, ಕುಮಾರಸ್ವಾಮಿ ಇದ್ದೇವೆ

By Kannadaprabha NewsFirst Published Nov 24, 2020, 12:18 PM IST
Highlights

ನೀವು ಬೇಸರಪಟ್ಟುಕೊಳ್ಳುವ ಅವಶ್ಯಕತೆ ಇಲ್ಲ ನಿಮ್ಮ ಜೊತೆಗೆ ನಾವಿದ್ದೇವೆ ಎಂದು ಅನಿತಾ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.  ಅವರು ಭರವಸೆ ನೀಡಿದ್ದು ಯಾರಿಗೆ 

ರಾಮನಗರ (ನ.24):  ಕ್ಷೇತ್ರ ವ್ಯಾಪ್ತಿಯ ಮಾಯ​ಗಾ​ನ​ಹ​ಳ್ಳಿ ಹಾಗೂ ಸುಗ್ಗ​ನ​ಹಳ್ಳಿ ಗ್ರಾಮ ಪಂಚಾ​ಯಿತಿ ವ್ಯಾಪ್ತಿಯ ಗ್ರಾಮ​ಗ​ಳಲ್ಲಿ ಸೋಮ​ವಾರ ಶಾಸಕಿ ಅನಿತಾ ಕುಮಾ​ರ​ಸ್ವಾಮಿರವರು ಅಧಿ​ಕಾ​ರಿ​ಗ​ಳೊಂದಿಗೆ ಪ್ರವಾಸ ನಡೆಸಿ ಜನರ ಕುಂದು​ಕೊ​ರ​ತೆ​ಗ​ಳನ್ನು ವಿಚಾ​ರಿಸಿ, ಅಹ​ವಾಲು ಸ್ವೀಕ​ರಿ​ಸಿದರು.

ಗ್ರಾಪಂನ ಕೆಂಪ​ನ​ಹಳ್ಳಿ ಗ್ರಾಮ​ದಿಂದ ಪ್ರವಾಸ ಆರಂಭಿ​ಸಿದ ಅನಿ​ತಾ​ರ​ವರು, ಮಧ್ಯಾ​ಹ್ನ​ದ​ವ​ರೆಗೆ ಕೆಂಪ​ನ​ಯ್ಯ​ನ​ದೊಡ್ಡಿ, ಮಾಯ​ಗಾ​ನ​ಹ​ಳ್ಳಿ, ಧಾರಾ​ಪುರ, ಕೇತೋ​ಹಳ್ಳಿ, ಸಂಗ​ಬ​ಸ​ವ​ನ​ದೊಡ್ಡಿ, ಬಸ​ವ​ನ​ಪುರ, ಅರ​ಳೀ​ಮ​ರ​ದೊಡ್ಡಿ, ಗಂಗ​ರಾ​ಜ​ನ​ಹ​ಳ್ಳಿ, ರಾಂಪುರ, ಗೋಪಾ​ಲ​ಪುರ, ಮಾದಾ​ಪುರ ಹಾಗೂ ಶಿವ​ನೇ​ಗೌ​ಡ​ದೊ​ಡ್ಡಿಗೆ ಭೇಟಿ ನೀಡಿ​ದರು.

ಆನಂತರ ಮಧ್ಯಾಹ್ನ ಸುಗ್ಗ​ನ​ಹಳ್ಳಿ ಗ್ರಾಪಂ ವ್ಯಾಪ್ತಿಯ ಸುಗ್ಗ​ನ​ಹಳ್ಳಿ, ಕಲಿ​ಕ​ಲ್ಲು​ದೊಡ್ಡಿ, ಮಾರೇ​ಗೌ​ಡ​ನ​ದೊಡ್ಡಿ, ಚನ್ನ​ಮಾ​ರೇ​ಗೌ​ಡ​ನ​ದೊಡ್ಡಿ, ಬೊಮ್ಮ​ಚ​ನ​ಹಳ್ಳಿ, ಕಟ​ಮಾ​ನ​ದೊ​ಡ್ಡಿ,​ ಕ​ಗ್ಗ​ಲ​ಹಳ್ಳಿ, ಸಿದ್ದ​ಯ್ಯ​ನ​ದೊಡ್ಡಿ, ಹಾಗ​ಲ​ಹ​ಳ್ಳಿ,​ ಗ​ದ​ಗ​ಯ್ಯ​ನ​ದೊಡ್ಡಿ ಗ್ರಾಮ​ಗ​ಳಿಗೆ ಅನಿ​ತಾ​ರ​ವರು ಭೇಟಿ ನೀಡಿ ಜನ​ರಿಂದ ಅಹ​ವಾಲು ಆಲಿ​ಸಿ​ದ​ರು.

ಪ್ರವಾ​ಸದ ವೇಳೆ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅನಿ​ತಾ​ರ​ವರು, ಹಳ್ಳಿ ಹಳ್ಳಿಗೂ ಭೇಟಿ ನೀಡಿ ಯಾವ್ಯಾವ ಕೆಲಸ ಆಗಿದೆ. ಯಾವ ಕೆಲಸ ಆಗಬೇಕೆಂಬದು ಕೇಳಿ ತಿಳಿದುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತೇನೆ ಎಂದು ತಿಳಿ​ಸಿ​ದರು.

ಅನಾರೋಗ್ಯದ ಬಗ್ಗೆ ಹೇಳಿದ ಅನಿತಾ ಕುಮಾರಸ್ವಾಮಿ

ಆರ್‌ಡಿಪಿಆರ್‌ನಿಂದ ಗ್ರಾಮೀಣಾಭಿವೃದ್ಧಿಗೆ ಸುಮಾರು 15 ಕೋಟಿ ರುಪಾಯಿ, ಲೋಕೋ​ಪ​ಯೋಗಿ ಇಲಾ​ಖೆಗೆ ಸಾಕಷ್ಟುಅನುದಾನ ಬಂದಿದ್ದು, ಕೆಲಸ ಕಾರ್ಯಗಳು ನಡೆ​ಯು​ತ್ತಿವೆ. ಡಿಸೆಂಬರ್‌ನಲ್ಲೂ ಅನುದಾನ ಬಿಡುಗಡೆ ಆಗಲಿದೆ. ಕ್ಷೇತ್ರದಲ್ಲಿ ಏನೇ ಬಾಕಿ ಕೆಲಸಗಳಿದ್ದರೂ ಅವುಗಳನ್ನು ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಕ್ಷೇತ್ರದ ಜನ​ರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿ ಇರುತ್ತೇನೆ. ಕಾರ್ಯಕರ್ತರು ಬೇಸರಪಟ್ಟುಕೊಳ್ಳುವುದು ಬೇಡ. ಅವರ ಸಮಸ್ಯೆಗಳಿಗೆ ನಾನು, ನನ್ನ ಮಗ ನಿಖಿಲ್ ಹಾಗೂ ಕುಮಾರಸ್ವಾಮಿ ಸ್ಪಂದಿಸುತ್ತೇವೆ. ಕಾರ್ಯಕರ್ತರೊಂದಿಗೆ ನಾವು ಇದ್ದೇ ಇದ್ದೇವೆ. ನಮ್ಮ ಜವಾಬ್ದಾರಿ ಕೂಡ ಎಂದರು.

ಜೆಡಿಎಸ್‌ ತಾಲೂ​ಕು ಅಧ್ಯಕ್ಷ ರಾಜಶೇಖರ್‌, ಮಾಯಗಾನಹಳ್ಳಿ ಉಪಾಧ್ಯಕ್ಷ ಸತೀಶ್‌, ತಾಪಂ ಮಾಜಿ ಸದಸ್ಯ ಶಂಕರಪ್ಪ, ಅಜಯ್‌ ಗೌಡ, ಜಯಕುಮಾರ್‌, ಕರೀಂ, ಯೋಗೇಶ್‌, ಗುತ್ತಿಗೆದಾರ ಪ್ರಕಾಶ್‌, ಮತ್ತಿ​ತ​ರರು ಹಾಜ​ರಿ​ದ್ದರು

click me!