ಜಮ್ಮು-ಕಾಶ್ಮೀರದಲ್ಲಿ ಹುಕ್ಕೇರಿ ಯೋಧ ಸಾವು

By Kannadaprabha NewsFirst Published Dec 4, 2020, 2:56 PM IST
Highlights

ಕಳೆದ ಹಲವು ದಿನಗಳಿಂದ ಜಮ್ಮು-ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೃತ ಯೋಧ| ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನೇರ್ಲಿ ಗ್ರಾಮದ ಚೇತನ ಪಾಟೀಲ ಸಾವಿಗೀಡಾದ ಯೋಧ| ಸಾವಿಗೆ ಕಾರಣ ತಿಳಿದು ಬಂದಿಲ್ಲ| 

ಬೆಳಗಾವಿ(ಡಿ.03): ಜಮ್ಮು-ಕಾಶ್ಮೀರದದ ಸೋಫಿಯಾ ಜಿಲ್ಲೆಯ ಔರಾ ಗ್ರಾಮದಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ಯೋಧನೊಬ್ಬ ಸಾವಿಗೀಡಾದ ಘಟನೆ ಬುಧವಾರ ನಡೆದಿದೆ. 

ಹುಕ್ಕೇರಿ ತಾಲೂಕಿನ ನೇರ್ಲಿ ಗ್ರಾಮದ ಚೇತನ ಪಾಟೀಲ ಸಾವಿಗೀಡಾದ ಯೋಧ. ಕಳೆದ ಹಲವು ದಿನಗಳಿಂದ ಜಮ್ಮು-ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. 

'ಬಿಜೆಪಿ ಚುನಾವಣೆಗೆ ದುಡ್ಡು ಖರ್ಚು ಮಾಡುತ್ತೆ, ರಾಜ್ಯದ ಅಭಿವೃದ್ಧಿ ಬಗ್ಗೆ ತಲೆಕೆಡಿಸಿಕೊಳ್ಳಲ್ಲ'

ಆದರೆ, ಬುಧವಾರ ಸಾವನಪ್ಪಿದ್ದಾರೆ. ಆದರೆ, ಸಾವಿಗೆ ಕಾರಣ ತಿಳಿದು ಬಂದಿಲ್ಲ. ಇಂದು(ಶುಕ್ರವಾರ) ಸಂಜೆ ವೇಳೆ ಯೋಧನ ಪಾರ್ಥಿವ ಶರೀರ ಗ್ರಾಮಕ್ಕೆ ಆಗಮಿಸುವ ನಿರೀಕ್ಷೆ ಇದೆ.
 

click me!