ಶಿವಮೊಗ್ಗದಲ್ಲಿ ರಿಯಾಯಿತಿ ದರದಲ್ಲಿ ತೋಟಗಾರಿಕಾ ಸಸಿಗಳು ಲಭ್ಯ

By Kannadaprabha NewsFirst Published May 30, 2020, 5:54 PM IST
Highlights

ಮುಂಗಾರು ಆರಂಭಕ್ಕೆ ಈಗಾಗಲೇ ದಿನಗಣನೆ ಆರಂಭವಾಗಿದೆ. ಇದರ ಬೆನ್ನಲ್ಲೇ ಶಿವಮೊಗ್ಗ ಜಿಲ್ಲೆಯ ತೋಟಗಾರಿಕಾ ಇಲಾಖೆ ತಮ್ಮಲ್ಲಿರುವ ಉತ್ತಮ ತಳಿಯ ಗಿಡಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ತೀರ್ಮಾನಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಶಿವಮೊಗ್ಗ(ಮೇ.30): ತೋಟಗಾರಿಕೆ ಇಲಾಖೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿರುವ ತೋಟಗಾರಿಕೆ ಕ್ಷೇತ್ರ ಮತ್ತು ನರ್ಸರಿಗಳಲ್ಲಿ ಉತ್ತಮ ಗುಣಮಟ್ಟದ ವಿವಿಧ ತೋಟಗಾರಿಕೆ ಕಸಿ, ಸಸಿಗಳನ್ನು ಉತ್ಪಾದಿ​ಸುತ್ತಿದ್ದು, ರೈತರಿಗೆ ಹಾಗೂ ಆಸಕ್ತ ಸಾರ್ವಜನಿಕರಿಗೆ ಜೂನ್‌ ತಿಂಗಳಿನಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ನಿರ್ಧರಿಸಿದೆ. 

ತೆಂಗು, ಅಡಕೆ, ಕಾಳುಮೆಣಸು, ಕೋಕೋ, ಗೇರು, ಮಾವು, ಸಪೋಟ, ಅಪ್ಪೆಮಿಡಿ , ನುಗ್ಗೆ, ಕರಿಬೇವು, ನುಗ್ಗೆ ಮತ್ತು ವಿವಿಧ ಅಲಂಕಾರಿಕ ಗಿಡಗಳು ಲಭ್ಯವಿರುತ್ತದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

ಆರ್ಥಿಕತೆಗಿಂತ ಜನರ ಆರೋಗ್ಯಕ್ಕೆ ನಮೋ ಆದ್ಯತೆ: ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ

ಹೆಚ್ಚಿನ ಮಾಹಿತಿಗಾಗಿ ತೀರ್ಥಹಳ್ಳಿಯ ಕುರುವಳ್ಳಿ ತೋಟಗಾರಿಕೆ ಕ್ಷೇತ್ರ-9448815755, 9740759597 ಮತ್ತು ಕುಶಾವತಿ ಕ್ಷೇತ್ರ- 9480494714,  ಸಾಗರದ ಯಳವರಸಿ ತೋಟಗಾರಿಕೆ ಕ್ಷೇತ್ರ-9148610219, ಭದ್ರಾವತಿಯ ಬಿಆರ್‌ಪಿ ತೋಟಗಾರಿಕೆ ಕ್ಷೇತ್ರ-9483155292 ಮತ್ತು ಕಚೇರಿ ನರ್ಸರಿ-8095391909, ಶಿಕಾರಿಪುರದ ಕಾಳೇನಹಳ್ಳಿ ಕ್ಷೇತ್ರ-9448671602 ಮತ್ತು ಕಚೇರಿ ನರ್ಸರಿ- 9008066068 , ಶಿವಮೊಗ್ಗದ ಜಿಲ್ಲಾ ನರ್ಸರಿ ಮತ್ತು ಡಿ.ಸಿ. ಕಾಂಪೌಂಡ್‌ ನರ್ಸರಿ-9632666596, ಹೊಸನಗರದ ಗಂಗನಕೊಪ್ಪ ಕ್ಷೇತ್ರ -9844865581 (ಜುಲೈ ನಂತರ) ದೂರವಾಣಿ ಸಂಖ್ಯೆಗಳಿಗೆ ಕರೆಮಾಡಿ ಆಯಾ ಕ್ಷೇತ್ರದ ಅ​ಧಿಕಾರಿಗಳನ್ನು ಸಂಪರ್ಕಿಸಬಹುದು.

click me!