ಉಡುಪಿಯಲ್ಲಿ ಭಾರೀ ಮಳೆ: ಹತ್ತಾರು ಮನೆಯೊಳಗೆ ನೀರು

Published : May 17, 2020, 08:25 AM IST
ಉಡುಪಿಯಲ್ಲಿ ಭಾರೀ ಮಳೆ: ಹತ್ತಾರು ಮನೆಯೊಳಗೆ ನೀರು

ಸಾರಾಂಶ

ಉಡುಪಿ- ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169ಎ ಕಾಮಗಾರಿಯ ಆಮೆಗತಿಯಿಂದಾಗಿ ಶುಕ್ರವಾರ ಸುರಿದ ಮಳೆಯ ನೀರು ಇಲ್ಲಿನ ಬಾಸೆಲ್‌ ಮಿಷನ್‌ ಶಾಲಾ ಬಳಿಯ ಹತ್ತಾರು ಮನೆಗಳೊಳಗೆ ನುಗ್ಗಿ ಆವಾಂತರ ಸೃಷ್ಟಿಸಿದೆ.

ಉಡುಪಿ(ಮೇ 17): ಉಡುಪಿ- ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169ಎ ಕಾಮಗಾರಿಯ ಆಮೆಗತಿಯಿಂದಾಗಿ ಶುಕ್ರವಾರ ಸುರಿದ ಮಳೆಯ ನೀರು ಇಲ್ಲಿನ ಬಾಸೆಲ್‌ ಮಿಷನ್‌ ಶಾಲಾ ಬಳಿಯ ಹತ್ತಾರು ಮನೆಗಳೊಳಗೆ ನುಗ್ಗಿ ಆವಾಂತರ ಸೃಷ್ಟಿಸಿದೆ.

ಕಳೆದೆರಡು ವರ್ಷಗಳಿಂದ ಈ ರಾ.ಹೆ.ಯ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು, ರಸ್ತೆಯನ್ನು ಹಿಂದಿನ ನೆಲಮಟ್ಟದಿಂದ ನಾಲ್ಕೈದು ಅಡಿ ಎತ್ತರಿಸಲಾಗಿದೆ. ನೀರು ಹರಿಯುವ ಚರಂಡಿಯನ್ನು ಪೂರ್ಣಗೊಳಿಸದೆ, ನೀರು ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದೆ.

ಹಿಂದಿನ ತಿಂಗಳ ವಿದ್ಯುತ್‌ ಬಿಲ್ ಸರಾಸರಿ ಆಧಾರದ ಮೇಲೆ ಈ ತಿಂಗಳ ಬಿಲ್

ಮನೆಯೊಳಗಿನ ಕೋಣೆ, ಅಡುಗಮನೆಗೂ ನೀರು ನುಗ್ಗಿ ವಸ್ತುಗಳೆಲ್ಲಾ ಒದ್ದೆಯಾಗಿವೆ, ಪಾತ್ರೆ ಪಗಡಿಗಳು ನೀರಿನಲ್ಲಿ ತೇಲುತ್ತಿದ್ದು, ರಾತ್ರಿ ಮತ್ತೆ ಮಳೆ ಸುರಿದರೆ ಜನರು ಮಲಗುವುದಕ್ಕೂ ಸಾಧ್ಯವಾಗದಂತಾಗಿದೆ. ಮಳೆಗಾಲದಲ್ಲಿ ಈ ಸಮಸ್ಯೆಯ ಸಾಧ್ಯತೆಯ ಬಗ್ಗೆ ಇಲ್ಲಿನ ಜನರು ಅಧಿಕಾರಿಗಳ ಗನಮಕ್ಕೆ ತಂದಿದ್ದರೂ ಕಾಮಗಾರಿ ತ್ವರಿತಗೊಳಿಸದೆ, ಜನರ ಬವಣೆಗೆ ಕಾರಣರಾಗಿದ್ದಾರೆ. ಪೂರ್ಣ ಮುಂಗಾರು ಆರಂಭವಾದಲ್ಲಿ ಇಲ್ಲಿನ ಹಲವಾರು ಮನೆಗಳು ನೀರಿನಲ್ಲಿ ಮುಳುಗುವ, ಕುಸಿದು ಬೀಳುವ ಅಪಾಯವಿದೆ.

PREV
click me!

Recommended Stories

ಶಿಕ್ಷಕರ ನೇಮಕಾತಿ: ವಯೋಮಿತಿ ಸಡಿಲಿಕೆ, ಗಣಿತ ಮತ್ತು ವಿವಿಧ ಭಾಷಾ ಅಭ್ಯರ್ಥಿಗಳಿಗೆ ಅವಕಾಶಕ್ಕೆ ಆಗ್ರಹ
ಮಂಗಳೂರು KFC ಮಳಿಗೆ, ಮೈಸೂರಿನ ಹೋಟೆಲ್‌ಗಳ ಮೇಲೆ ಆಹಾರ ಇಲಾಖೆ ದಾಳಿ! ಕೊಳೆತ ಮಾಂಸ ಪತ್ತೆ