ಹಾಸನ ಸಂಸದ ಶ್ರೇಯಸ್ ಪಟೇಲ್, ಅಕ್ಷತಾ ದಂಪತಿಗೆ ಅವಳಿ ಹೆಣ್ಣು ಮಕ್ಕಳು!

Published : Jul 07, 2025, 07:19 PM IST
Shreyas Patel twins Baby

ಸಾರಾಂಶ

ಸಂಸದ ಶ್ರೇಯಸ್ ಪಟೇಲ್ ಮತ್ತು ಅಕ್ಷತಾ ಪಟೇಲ್ ದಂಪತಿಗೆ ಅವಳಿ ಹೆಣ್ಣು ಮಕ್ಕಳು ಜನಿಸಿವೆ. ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಜನನ. ಕುಟುಂಬಸ್ಥರು ಮತ್ತು ಹಾಸನ ಜನತೆ ಸಂತಸ ವ್ಯಕ್ತಪಡಿಸಿದ್ದಾರೆ.

ಹಾಸನ (ಜು.07): ಹಾಸನದ ಸಂಸದ, ಯುವ ಮುಖಂಡ ಶ್ರೇಯಸ್ ಪಟೇಲ್ ಅವರು ಇದೀಗ ತಂದೆಯಾಗುವ ಮೂಲಕ ತಮ್ಮ ವೈಯಕ್ತಿಕ ಜೀವನದಲ್ಲೂ ಹೊಸ ಘಟ್ಟಕ್ಕೆ ಕಾಲಿಟ್ಟಿದ್ದಾರೆ. ಪತ್ನಿ ಅಕ್ಷತಾ ಪಟೇಲ್ ಇಂದು ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇಡೀ ಕುಟುಂಬದಲ್ಲೂ ಈ ಸಂತಸದ ಸುದ್ದಿ ಹಬ್ಬದ ಹಸಿವಿನಂತೆ ಹರಡಿದ್ದು, ಶ್ರೇಯಸ್ ಪಟೇಲ್ ಅವರು ಈ ಸಂತೋಷವನ್ನು ತಮ್ಮ ಹಾಸನ ಕ್ಷೇತ್ರದ ಜನರೊಂದಿಗೆ ಹಂಚಿಕೊಂಡಿದ್ದಾರೆ.

ಇದೊಂದು ರಾಜಕೀಯ ಗೆಲುವಿನ ನಂತರ ಸಂಸಾರದಲ್ಲಿ ಬಂದ ಮತ್ತೊಂದು ಭರ್ಜರಿ ಯಶಸ್ಸು ಎಂಬಂತಾಗಿದೆ. ಜನಮನ್ನಣೆಯೊಂದಿಗೆ ಸಂಸತ್ತಿಗೆ ಆಯ್ಕೆಯಾದ ಶ್ರೇಯಸ್ ಪಟೇಲ್ ಅವರಿಗಿದು ರಾಜಕೀಯಕ್ಕೂ ಹೊರಗಿನ ಬಹುಮಾನ. ಇತ್ತೀಚೆಗೆ ಶ್ರೇಯಸ್ ಪಟೇಲ್ ಅವರು ಅಕ್ಷತಾ ಅವರ ಸೀಮಂತ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನೆರವೇರಿಸಿದ್ದರು. ಈ ಸಂಬಂಧಪಟ್ಟ ಫೋಟೋ ಮತ್ತು ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದೀಗ ಮಕ್ಕಳು ಜನಿಸುತ್ತಿದ್ದಂತೆ ಶುಭಾಶಯಗಳನ್ನು ಹಾರೈಸುತ್ತಿದ್ದಾರೆ.

ಪತ್ನಿ ಅಕ್ಷತಾ ಪಟೇಲ್ ಸಹ ಶಿಕ್ಷಣವನ್ನು ಪಡೆದಿದ್ದು, ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಶ್ರೇಯಸ್ ಮತ್ತು ಅಕ್ಷತಾ ದಂಪತಿ ಅವರು ಕಳೆದ ಕೆಲವು ವರ್ಷಗಳ ಹಿಂದೆ ವಿವಾಹವಾಗಿದ್ದು, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದವರಿಗೆ ಅವಳಿ ಮಕ್ಕಳಾಗಿರುವುದು ಸಂತಸ ತಂದಿದೆ. ಕುಟುಂಬಸ್ಥರು ಹಾಗೂ ಹಾಸನ ಜನತೆಯಲ್ಲಿ ಹರ್ಷ ಮೂಡಿದೆ.

ರಾಜಕೀಯ ಗೆಲವು:

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ತವರು ಕ್ಷೇತ್ರವಾದ ಹಾಸನದಲ್ಲಿ, ಜೆಡಿಎಸ್‌ನ ಭದ್ರಕೋಟೆ ಮುರಿದ ಸಂಭ್ರಮ ಇನ್ನೂ ತಣ್ಣಗಾಗಿಲ್ಲ. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಲುಕಿದ್ದ ಪ್ರಜ್ವಲ್ ರೇವಣ್ಣ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಶ್ರೇಯಸ್ ಪಟೇಲ್ ಅವರು 43,588 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದರು. ಮೊದಲ 5 ಸುತ್ತುಗಳಲ್ಲಿ ಮುನ್ನಡೆ ಹೊಂದಿದ್ದ ಪ್ರಜ್ವಲ್ ನಂತರ ಹೀನಾಯ ಸೋಲನ್ನು ಕಂಡರು. ಈ ಬಾರಿ ಹಾಸನ ಕ್ಷೇತ್ರದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ಹೆಚ್ಚು ನೋಟಾ ಮತಗಳು ದಾಖಲಾಗಿದ್ದವು.

ರಾಜಕೀಯ ಹಿನ್ನೆಲೆಯುಳ್ಳ ಕುಟುಂಬ:

ಶ್ರೇಯಸ್ ಪಟೇಲ್ ಅವರ ಅಜ್ಜ ಜಿ. ಪುಟ್ಟಸ್ವಾಮಿಗೌಡ ಕೂಡ ಹಿರಿಯ ರಾಜಕಾರಣಿ. 1999ರ ಲೋಕಸಭಾ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಎಚ್.ಡಿ. ದೇವೇಗೌಡರನ್ನು ಸೋಲಿಸಿ ಗೆಲುವು ಸಾಧಿಸಿದ್ದರು. ಇದು ಪಟೇಲ್ ಕುಟುಂಬದ ರಾಜಕೀಯ ಹೆಜ್ಜೆಗುರುತುಗಳಲ್ಲೊಂದು. ಇದಕ್ಕೂ ಮೊದಲು 1985ರ ವಿಧಾನಸಭಾ ಚುನಾವಣೆಯಲ್ಲಿ ದೇವೇಗೌಡರು ಜಯ ಸಾಧಿಸಿದ್ದರೆ, 1989ರಲ್ಲಿ ಪುಟ್ಟಸ್ವಾಮಿಗೌಡ ಅವರ ವಿರುದ್ಧ ಗೆದ್ದಿದ್ದರು. ಈ ರಾಜಕೀಯ ಪೈಪೋಟಿ ತಲೆಮಾರುಗಳಿಂದ ಸಾಗುತ್ತಲೇ ಬಂದಿದೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಶ್ರೇಯಸ್ ಪಟೇಲ್ ಅವರು ಹೋಳೆನರಸೀಪುರದಿಂದ ಎಚ್‌.ಡಿ. ರೇವಣ್ಣ ವಿರುದ್ಧ ಸ್ಪರ್ಧಿಸಿ ಕೇವಲ 3,152 ಮತಗಳಿಂದ ಸೋಲು ಕಂಡಿದ್ದರು. ಆದರೆ ಲೋಕಸಭೆ ಚುನಾವಣೆಯಲ್ಲಿ ನಿಖರ ಪುನಾರಾಗಮನದಿಂದ ದೇವೇಗೌಡರ ಕುಟುಂಬಕ್ಕೆ ರಾಜಕೀಯ ತಿರುಗೇಟು ನೀಡಿದ್ದಾರೆ.

PREV
Read more Articles on
click me!

Recommended Stories

ರಾಜ್ಯದಲ್ಲಿ ವಿಪರೀತ ಚಳಿ ಹಲವು ದಿನ ಮುಂದುವರಿಕೆ, ಬೀದರ್‌ನಲ್ಲಿ ದಾಖಲೆಯ ತಾಪಮಾನ ಕುಸಿತ! 17 ಜಿಲ್ಲೆಗಳಿಗೆ ಎಚ್ಚರಿಕೆ
ಮಾಜಿ ಪ್ರೇಯಸಿ ಬರ್ತಿದ್ದಂತೆ ನವ ವಧು-ವರರು ಎಸ್ಕೇಪ್; ನಾನು ಇವನನ್ನೇ ಮದುವೆಯಾಗಬೇಕು ಎಂದು ರಂಪಾಟ!