ಹಂಪಿ ವಿರೂಪಾಕ್ಷೇಶ್ವರನಿಗೂ ತಟ್ಟಿದ ಕೊರೋನಾ ಭೀತಿ: ರಥೋತ್ಸವ ರದ್ದು

Kannadaprabha News   | Asianet News
Published : Apr 09, 2020, 10:34 AM IST
ಹಂಪಿ ವಿರೂಪಾಕ್ಷೇಶ್ವರನಿಗೂ ತಟ್ಟಿದ ಕೊರೋನಾ ಭೀತಿ: ರಥೋತ್ಸವ ರದ್ದು

ಸಾರಾಂಶ

ಲಾಕ್‌ಡೌನ್‌ ಹಂಪಿ ವಿರೂಪಾಕ್ಷೇಶ್ವರ ರಥೋತ್ಸವ ರದ್ದು| ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ಐತಿಹಾಸಿಕ ಹಂಪಿ| ಸಂಪ್ರದಾಯ ಮುರಿಯದಂತೆ ಮಡಿತೇರು ಎಳೆದು ಪೂಜೆ| ದವನದ ಹುಣ್ಣಿಮೆ ಬಳ್ಳಾರಿ ಜಿಲ್ಲೆಯಲ್ಲಿ ಹಂಪಿ ಹುಣ್ಣಿಮೆ ಎಂದೇ ಕರೆಯಲಾಗುತ್ತದೆ|

ಬಳ್ಳಾರಿ(ಏ.09): ಪ್ರತಿವರ್ಷ ದವನದ ಹುಣ್ಣಿಮೆಯಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯುತ್ತಿದ್ದ ಹಂಪಿಯ ಶ್ರೀ ವಿರೂಪಾಕ್ಷೇಶ್ವರ ರಥೋತ್ಸವ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದ್ದು, ಸಂಪ್ರದಾಯ ಮುರಿಯದಂತೆ ಸರಳವಾಗಿ ದೇವಸ್ಥಾನದ ಆವರಣದಲ್ಲಿಯೇ ಮಡಿ ರಥೋತ್ಸವವನ್ನು ಸಾಂಕೇತಿಕವಾಗಿ ಎಳೆಯಲಾಯಿತು.

ದೇವಸ್ಥಾನದ ಅರ್ಚಕರು ಹಾಗೂ ಕೆಲವೇ ಕೆಲವು ಭಕ್ತರು ರಥೋತ್ಸವ ವೇಳೆ ಪಾಲ್ಗೊಂಡು ಎಂದಿನ ಪೂಜಾ ವಿಧಿ-ವಿಧಾನ ಪೂರ್ಣಗೊಳಿಸಿದರು. ಸುಮಾರು ಒಂದು ಗಂಟೆಯೊಳಗೆ ಪೂಜೆ, ರಥೋತ್ಸವ ಮತ್ತಿತರ ಕೈಂಕರ್ಯಗಳನ್ನು ಪೂರ್ಣಗೊಳಿಸಲಾಯಿತು. 

ಕೃಷಿ ಚಟುವಟಿಕೆ: 'ಮುಕ್ತ ಸಂಚಾರಕ್ಕೆ ರೈತರಿಗೆ ಗ್ರೀನ್‌ಪಾಸ್‌ ನೀಡಲು ಕ್ರಮ'

ದವನದ ಹುಣ್ಣಿಮೆ ಬಳ್ಳಾರಿ ಜಿಲ್ಲೆಯಲ್ಲಿ ಹಂಪಿ ಹುಣ್ಣಿಮೆ ಎಂದೇ ಕರೆಯಲಾಗುತ್ತಿದ್ದು, ಪ್ರತಿವರ್ಷ ಶ್ರೀ ವಿರೂಪಾಕ್ಷೇಶ್ವರ ಹಾಗೂ ಪಂಪಾಂಬಿಕಾ ದೇವಿಯ ಜೋಡು ರಥೋತ್ಸವ ಅದ್ಧೂರಿಯಾಗಿ ನಡೆಯುತ್ತಿತ್ತು. ಜಿಲ್ಲೆ ಸೇರಿದಂತೆ ಹೊರ ಜಿಲ್ಲೆ, ರಾಜ್ಯಗಳಿಂದ ಜನರು ಆಗಮಿಸುತ್ತಿದ್ದರು.
 

PREV
click me!

Recommended Stories

ಭ್ರಷ್ಟ ಅಧಿಕಾರಿಗೆ ಬಿಗ್ ಶಾಕ್; 4 ವರ್ಷ ಜೈಲು ಶಿಕ್ಷೆ, 51 ಲಕ್ಷಕ್ಕೂ ಅಧಿಕ ಅಕ್ರಮ ಆಸ್ತಿ ಮುಟ್ಟುಗೋಲು!
Discover Koppal: ವಿಶ್ವದ ಗಮನ ಸೆಳೆಯಲಿದೆ ಹಿರೇಬೆಣಕಲ್: ಡಿಸ್ಕವರ್ ಕೊಪ್ಪಳಕ್ಕೆ ಡಿಸಿ ವಿದ್ಯುಕ್ತ ಚಾಲನೆ