ಕೆರೆಗಳಿಗೆ ನೀರು ತುಂಬಿಸುವ ಕೀರ್ತಿ ಶಾಸಕ ಗಣೇಶ್‌ ಪ್ರಸಾದ್‌ಗೆ ಸಲ್ಲಲಿ: ಸಿಎಂ ಸಿದ್ದರಾಮಯ್ಯ

Published : Apr 22, 2026, 09:22 PM IST
siddaramaiah

ಸಾರಾಂಶ

ಗುಂಡ್ಲುಪೇಟೆ ತಾಲೂಕಿನ 110 ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಯ ಕೀರ್ತಿ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಗೆ ಸಲ್ಲಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ಗುಂಡ್ಲುಪೇಟೆ (ಏ.22): ತಾಲೂಕಿನ 110 ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಯ ಕೀರ್ತಿ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ಗೆ ಸಲ್ಲಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ 110 ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಸಮಾರಂಭಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದರು.

ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸಂಬಂಧ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ನನಗೆ ಹಾಗೂ ಡಿಸಿಎಂಗೆ ಮನವಿ ಮಾಡಿದ್ದರು ಎಂದರು. ಗಣೇಶ್‌ ಪ್ರಸಾದ್‌ ಮೂರು ವರ್ಷದ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಒಬ್ಬ ಉತ್ತಮ ಶಾಸಕ ಎಂದು ಹೆಸರು ಪಡೆದಿದ್ದಾರೆ, ಮಹದೇವ ಪ್ರಸಾದ್‌ ಅವರ ರೀತಿಯಲ್ಲೇ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ಗಣೇಶ್‌ ಪ್ರಸಾದ್‌ ಅಭಿವೃದ್ಧಿ ಕೆಲಸ ತರಲು ಉತ್ಸಾಹಿಯಾಗಿದ್ದಾರೆ. ನಮ್ಮ ಸರ್ಕಾರ ಕೂಡ ನಿಮ್ಮ ಉತ್ಸಾಹಕ್ಕೆ ಪ್ರೋತ್ಸಾಹಿಸುತ್ತದೆ ಹಾಗೂ ಸಹಕಾರ ನೀಡುತ್ತದೆ ಎಂದು ಭರವಸೆ ನೀಡಿದರು.ಬೇರೆ ಮಾತನಾಡಲ್ಲ: ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ನನ್ನ ಭೇಟಿಯಾದಾಗಲೆಲ್ಲ ಗುಂಡ್ಲುಪೇಟೆ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತ್ರ ಮಾತನಾಡುತ್ತಾರೆ. ಕ್ಷೇತ್ರದ ಜನರ ಆಶೀರ್ವಾದ ಸದಾ ಗಣೇಶ್‌ ಪ್ರಸಾದ್‌ ಮೇಲೆ ಇರಲಿ ಎಂದರು.

ಕಾರ್ಯಕರ್ತರ ಗದರಿದ ಸಿಎಂ!

ಪಟ್ಟಣದಲ್ಲಿ ನಡೆದ 110 ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡಲು ಬಂದಾಗ, ಕೆಲ ಕಾರ್ಯಕರ್ತರು ವೇದಿಕೆಯಿಂದ ನಿರ್ಗಮಿಸುತ್ತಿದ್ದದ್ದನ್ನು ಕಂಡ ಮುಖ್ಯಮಂತ್ರಿಗಳು ಕಾರ್ಯಕರ್ತರನ್ನು ಗದರಿ ಕೂರಿಸಿದ ಘಟನೆ ನಡೆಯಿತು. ನಾವೇನು ತಮಾಷೆಗೆ ಬಂದಿದ್ದೀವಾ? ಶಾಸಕ ಗಣೇಶ್‌ ಪ್ರಸಾದ್‌ ಸಮಾರಂಭ ಆಯೋಜಿಸಿದ್ದಾರೆ. ಸಮಾರಂಭಕ್ಕೆ ಬಂದ್ಮೇಲೆ ನಮ್ಮ ಮಾತು ಕೇಳಬೇಕು ಎಂದರಲ್ಲದೆ, ಕಾಂಗ್ರೆಸ್‌ ಕಾರ್ಯಕರ್ತರು ಶಿಸ್ತಿನಿಂದ ನಡೆದುಕೊಳ್ಳಬೇಕು ಎಂದು ಸೂಚಿಸಿದರು.

PREV
Read more Articles on
click me!

Recommended Stories

ಬೆಂಗಳೂರು: ಪಾರಿವಾಳಕ್ಕಾಗಿ ಜಗಳ, 25 ವರ್ಷದ ಯುವಕನನ್ನು ಚಾಕು ಇರಿದು ಬರ್ಬರ ಹತ್ಯೆ!
ಚಾಮರಾಜನಗರದ ಚತುರ ಸವಾರ! ಹೆಲ್ಮೆಟ್ ಬದಲು 'ಸೊಪ್ಪು' ಹೊತ್ತು ಸವಾರಿ; ಬಿಸಿಲಿಗೇನೋ ಓಕೆ, ಬಿದ್ರೆ ಗತಿ ಏನು ಸಾಮಿ?