ವಿಜಯಪುರ: ಆರೋಗ್ಯ ಸಿಬ್ಬಂದಿಗೆ ಆವಾಜ್‌ ಹಾಕಿದ ಅಜ್ಜಿ

Suvarna News   | Asianet News
Published : Jun 07, 2020, 02:40 PM ISTUpdated : Jun 07, 2020, 02:46 PM IST
ವಿಜಯಪುರ: ಆರೋಗ್ಯ ಸಿಬ್ಬಂದಿಗೆ ಆವಾಜ್‌ ಹಾಕಿದ ಅಜ್ಜಿ

ಸಾರಾಂಶ

ಅಜ್ಜಿಯ ಆವಾಜ್‌ಗೆ ತಬ್ಬಿಬ್ಬಾದ ತಹಸೀಲ್ದಾರ| ವಿಜಯಪುರ ಜಿಲ್ಲೆಯ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ತಾಂಡಾದಲ್ಲಿ ನಡೆದ ಘಟನೆ| ಆರೋಗ್ಯ ಸಿಬ್ಬಂದಿನೋಡುತ್ತಿದ್ದಂತೆಯೇ ಅವರನ್ನು ಕರೆದುಕೊಂಡು ಹೋಗಿ 2 ತಿಂಗಳು ಬಿಡಬೇಡಿ. ನಿಮಗೆ ಯಾರು ಹೇಳಿದ್ದಾರೋ ಅವರನ್ನು ನಾನು ಸುಮ್ಮನೆ ಬಿಡೋದಿಲ್ಲ. ಅವರನ್ನು ಮುಗಿಸಿಬಿಡುತ್ತೇನೆ ಎಂದು ಕೂಗಾಡಿದ ಅಜ್ಜಿ|

ವಿಜಯಪುರ(ಜೂ.07): ಕೊರೋನಾ ಪಾಸಿಟಿವ್‌ ಬಂದ ವ್ಯಕ್ತಿಗಳನ್ನು ಕರೆತರಲು ತೆರಳಿದ್ದ ತಹಸೀಲ್ದಾರ ಹಾಗೂ ಆರೋಗ್ಯ ಸಿಬ್ಬಂದಿಗೆ ಅಜ್ಜಿಯೊಬ್ಬರು ಆವಾಜ್‌ ಹಾಕಿದ ಘಟನೆ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ತಾಂಡಾದಲ್ಲಿ ಶನಿವಾರ ನಡೆದಿದೆ. 

ಮಹಾರಾಷ್ಟ್ರದಿಂದ ಮರಳಿದವರನ್ನು 14 ದಿನ ಸಾಂಸ್ಥಿಕ ಕ್ವಾರಂಟೈನ್‌ ಮಾಡಲಾಗಿತ್ತು. ನಂತರ ಅವರನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಅವರ ಥ್ರೋಟ್‌ ಸ್ಕ್ವಾಯಬ್‌ ವರದಿ ಪಾಸಿಟಿವ್‌ ಬಂದ ಹಿನ್ನೆಲೆಯಲ್ಲಿ ತಹಸೀಲ್ದಾರ ನೇತೃತ್ವದಲ್ಲಿ ಆರೋಗ್ಯ ಸಿಬ್ಬಂದಿ ತಾಂಡಾಕ್ಕೆ ತೆರಳಿದಾಗ ಮನೆಯಲ್ಲಿನ ಅಜ್ಜಿಯೊಬ್ಬರು ಜೋರಾಗಿ ಗಲಾಟೆ ಮಾಡಿದ್ದಾರೆ. ಅಜ್ಜಿಯ ಆವಾಜ್‌ಗೆ ತಹಸೀಲ್ದಾರ ತಬ್ಬಿಬ್ಬಾಗಿದ್ದಾರೆ. ಆರೋಗ್ಯ ಸಿಬ್ಬಂದಿಯನ್ನು ನೋಡುತ್ತಿದ್ದಂತೆಯೇ ಅಜ್ಜಿ, ‘ಅವರನ್ನು ಕರೆದುಕೊಂಡು ಹೋಗಿ 2 ತಿಂಗಳು ಬಿಡಬೇಡಿ. ನಿಮಗೆ ಯಾರು ಹೇಳಿದ್ದಾರೋ ಅವರನ್ನು ನಾನು ಸುಮ್ಮನೆ ಬಿಡೋದಿಲ್ಲ. ಅವರನ್ನು ಮುಗಿಸಿಬಿಡುತ್ತೇನೆ ಎಂದು ಕೂಗಾಡಿದ್ದಾರೆ. ಕೊನೆಗೂ ಆ ಮನೆಯವರನ್ನು ಅಧಿಕಾರಿಗಳು ಆಸ್ಪತ್ರೆಗೆ ಕರೆದುಕೊಂಡು ಹೋಗುವಲ್ಲಿ ಸಫಲರಾದರು.

ವಿಜಯಪುರ: ಕ್ವಾರಂಟೈನ್‌ಗೆ ಒಪ್ಪದ ಯುವತಿ, ಅಧಿಕಾರಿಗಳ ಜೊತೆ ಕಿರಿಕ್‌

‘ನಮ್ಮ ತಲೆ ಮೇಲೆ ರೇವಣಸಿದ್ದೇಶ್ವರ ದೇವರಿದ್ದಾನೆ. ನಮಗೆ ಏನೂ ಆಗುವುದಿಲ್ಲ. ನಮಗೆ ಸಾವು ಬರುವುದಿಲ್ಲ. ಮಂದಿ ಮಾತು ಕೇಳಿ ಮನೆಗೆ ಬಂದಿದ್ದೀರಿ. ಕೊರೋನಾ ಬಂದರೆ ನಮಗೆ ಬರಲಿ ಬಿಡಿ’ ಎಂದು ಅಜ್ಜಿ ಅಧಿಕಾರಿಗಳಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಕೊನೆಗೂ ಆ ಮನೆಯವರನ್ನು ಅಧಿಕಾರಿಗಳು ಆಸ್ಪತ್ರೆಗೆ ಕರೆದುಕೊಂಡು ಹೋಗುವಲ್ಲಿ ಸಫಲರಾದರು.
 

PREV
click me!

Recommended Stories

ಸಿಲ್ಕ್ ಬೋರ್ಡ್- ಕೆ.ಆರ್ ಪುರ ಮೆಟ್ರೋ ನಿಲ್ದಾಣದವರೆಗೂ ಹೈಟೆಕ್ ಹೊರವರ್ತುಲ ರಸ್ತೆ ಅಭಿವೃದ್ಧಿಗಾಗಿ ₹307 ಕೋಟಿ ಅನುಮೋದನೆ
ಅಪರೂಪದ ಕೋತಿ ಪ್ರಭೇದ ಬ್ಯಾಗ್‌ನಲ್ಲಿಟ್ಟು ವಿದೇಶದಿಂದ ಅಕ್ರಮ ಸಾಗಾಟ, ಬೆಂಗಳೂರು ಏರ್ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ಪ್ರಯಾಣಿಕ!