ಚಿತ್ರದುರ್ಗ: ಓಬ್ಬವ್ವನ ನಾಡಲ್ಲಿ ವನಿತೆಯರ ದರ್ಬಾರ್, ಉನ್ನತ ಹುದ್ದೆಯಲ್ಲಿ ಮಹಿಳೆಯರು!

Published : Feb 01, 2020, 10:06 AM IST
ಚಿತ್ರದುರ್ಗ: ಓಬ್ಬವ್ವನ ನಾಡಲ್ಲಿ ವನಿತೆಯರ ದರ್ಬಾರ್, ಉನ್ನತ ಹುದ್ದೆಯಲ್ಲಿ ಮಹಿಳೆಯರು!

ಸಾರಾಂಶ

ಚಿತ್ರದುರ್ಗದ ನೂತನ ಎಸ್ಪಿಯಾಗಿ ಜಿ.ರಾಧಿಕಾ ನೇಮಕ| ರಾಧಿಕಾರ ಪ್ರವೇಶದಿಂದಾಗಿ ಓಬವ್ವನ ನಾಡು ಚಿತ್ರದುರ್ಗ ವನಿತೆಯರ ಸಾಮಾಜ್ಯವಾದಂತಾಗಿದೆ| ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಜಿಪಂ ಸಿಇಒ ಆಗಿ ಸಿ.ಸತ್ಯಭಾಮ ಕಾರ್ಯ ನಿರ್ವಹಣೆ| 

ಚಿತ್ರದುರ್ಗ(ಫೆ.01): ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್ ಅವರ ವರ್ಗಾವಣೆಯಾಗಿದ್ದು, ಅವರ ಸ್ಥಾನಕ್ಕೆ ನೂತನ ಎಸ್ಪಿಯಾಗಿ ಜಿ.ರಾಧಿಕಾರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 

ಅರುಣ್ ಅವರನ್ನು ಬೆಂಗಳೂರು ಮೆಟ್ರೋ ಪಾಲಿಟಿಯನ್‌ಗೆ ವರ್ಗಾಯಿಸಲಾಗಿದೆ. ರಾಧಿಕಾರ ಪ್ರವೇಶದಿಂದಾಗಿ ಓಬವ್ವನ ನಾಡು ಚಿತ್ರದುರ್ಗ ವನಿತೆಯರ ಸಾಮಾಜ್ಯವಾದಂತಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಜಿಲ್ಲೆಯ ಆಯಾ ಕಟ್ಟಿನ ಹುದ್ದೆಗಳಲ್ಲಿ ಈಗಾಗಲೇ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಜಿಪಂ ಸಿಇಒ ಆಗಿ ಸಿ.ಸತ್ಯಭಾಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಕಾಕತಾಳೀಯ ಎಂಬಂತೆ ನೂತನ ಎಸ್ಪಿಯಾಗಿ ರಾಧಿಕಾ ಅವರು ನೇಮಕಗೊಂಡಿದ್ದು, ಜಿಲ್ಲಾಡಳಿತದ ಪ್ರಮುಖರೆಲ್ಲ ವನಿತೆಯರೇ ಆದಂತಾಗಿದೆ.  
 

PREV
click me!

Recommended Stories

ಶಿಕ್ಷಕರ ನೇಮಕಾತಿ: ವಯೋಮಿತಿ ಸಡಿಲಿಕೆ, ಗಣಿತ ಮತ್ತು ವಿವಿಧ ಭಾಷಾ ಅಭ್ಯರ್ಥಿಗಳಿಗೆ ಅವಕಾಶಕ್ಕೆ ಆಗ್ರಹ
ಮಂಗಳೂರು KFC ಮಳಿಗೆ, ಮೈಸೂರಿನ ಹೋಟೆಲ್‌ಗಳ ಮೇಲೆ ಆಹಾರ ಇಲಾಖೆ ದಾಳಿ! ಕೊಳೆತ ಮಾಂಸ ಪತ್ತೆ