ಮಹಾಮಾರಿ ಕೊರೋನಾ ಗೆದ್ದ ಪೋರನಿಗೆ ಹಾರ ಹಾಕಿ ಭರ್ಜರಿ ಸ್ವಾಗತ..!

Suvarna News   | Asianet News
Published : May 01, 2020, 09:45 AM ISTUpdated : May 18, 2020, 06:41 PM IST
ಮಹಾಮಾರಿ ಕೊರೋನಾ ಗೆದ್ದ ಪೋರನಿಗೆ ಹಾರ ಹಾಕಿ ಭರ್ಜರಿ ಸ್ವಾಗತ..!

ಸಾರಾಂಶ

ಕಲಬುರಗಿಯಲ್ಲಿ ಗುರುವಾರ ಕೊರೋನಾದಿಂದ ಗುಣಮುಖರಾಗಿ ನಾಲ್ವರು ಆಸ್ಪತ್ರೆಯಿಂದ ಬಿಡುಗಡೆ| ಜಿಲ್ಲೆಯಲ್ಲಿ ಸೋಂಕು ಮುಕ್ತರಾದವರ ಒಟ್ಟು ಸಂಖ್ಯಾಬಲ 12 ಕ್ಕೆ ಹೆಚ್ಚಳ| ಬಾಲಕ ಕೊರೋನಾ ಸೋಂಕಿನೊಂದಿಗೆ ಹೋರಾಟ ನಡೆಸಿ ಸಂಪೂರ್ಣ ಸೋಂಕು ಮುಕ್ತನಾಗಿ ತನ್ನೂರಿಗೆ ಹೋದಾಗ ಬಡಾವಣೆಯ ಜನತೆ, ಚಿತ್ತಾಪುರ ತಾಲೂಕು ಆರೋಗ್ಯಾಧಿಕಾರಿ ಡಾ. ಸುರೇಶ ಮೇಕಿನ್ ಆತನಿಗೆ ಹೂವಿನ ಹಾರ ಹಾಕಿ, ಹಣ್ಣು ನೀಡಿ ಸ್ವಾಗತಿಸಿದ್ದಾರೆ|

ಕಲಬುರಗಿ(ಮೇ.01): ಕೊರೋನಾ ಸೋಂಕಿನಿಂದ ಬಳಲುತ್ತಿದ್ದವರ ಪೈಕಿ ವಾಡಿಯ ಪೀಲಕಮ್ಮ ಬಡಾವಣೆ ನಿವಾಸಿ 2 ವರ್ಷದ ಬಾಲಕ ಸೇರಿದಂತೆ ನಾಲ್ವರು ಸಂಪೂರ್ಣ ಗುಣಮುಖರಾಗಿ ಕಲಬುರಗಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಮನೆ ಸೇರಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕು ಮುಕ್ತರಾಗಿ ಮನೆ ಸೇರಿದವರ ಒಟ್ಟು ಸಂಖ್ಯಾಬಲ 12 ಕ್ಕೆ ಹೆಚ್ಚಿದೆ.

ಹೀಗೆ ಗುರುವಾರ ಬಿಡುಗಡೆಗೊಂಡವರಲ್ಲಿ ವಾಡಿಯ ಪಿಲಕಮ್ಮ ಬಡಾವಣೆಯ 2 ವರ್ಷದ ಬಾಲಕನೂ ಸೇರಿದ್ದಾನೆ. ಈ ಬಾಲಕ ಕೊರೋನಾ ಸೋಂಕಿನೊಂದಿಗೆ ಹೋರಾಟ ನಡೆಸಿ ಸಂಪೂರ್ಣ ಸೋಂಕು ಮುಕ್ತನಾಗಿ ತನ್ನೂರಿಗೆ ಹೋದಾಗ ಬಡಾವಣೆಯ ಜನತೆ, ಚಿತ್ತಾಪುರ ತಾಲೂಕು ಆರೋಗ್ಯಾಧಿಕಾರಿ ಡಾ. ಸುರೇಶ ಮೇಕಿನ್ ಆತನಿಗೆ ಹೂವಿನ ಹಾರ ಹಾಕಿ, ಹಣ್ಣು ನೀಡಿ ಸ್ವಾಗತಿಸಿದ್ದಾರೆ. 

ವಾಡಿಯಲ್ಲಿ ಮಗುವಿಗೆ ಕೊರೋನಾ ಸೋಂಕು: ಯಾದಗಿರಿಯಲ್ಲಿ ನಿರ್ಲಕ್ಷ್ಯ ಮಾಡ್ಬೇಡಿ..!

ಈ ಬಾಲಕ ಆಟವಾಡುವಾಗ ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ್ದ, ಅಲ್ಲಿನ ವೈದ್ಯರು ಈತನಿಗೆ ಕೋವಿಡ್ ಪರೀಕ್ಷೆ ಮಾಡಿದ್ದಾಗ ಸೋಂಕು ಪತ್ತೆಯಾಗಿ ಆಸ್ಪತ್ರೆಗೆ ಸೇರಿದ್ದ. ಈತನ ಪೋಷಕರು ರೈಲಿನಲ್ಲಿ ಬೊಂಬೆ ಮಾರಾಟ ಮಾಡುವ ಕಾಯಕದವರು. ಉಪ್ರ ಮೂಲದ ಈ ಪೋಷಕರ ಮನೆವರೆಗೂ ಅದ್ಹೇಗೆ ಸೋಂಕು ಬಂತು ಎಂಬುದೇ ಇಂದಿಗೂ ನಿಗೂಢ.

ಈ ಬಾಲಕನ ಜೊತೆಗೇ ಗುರುವಾರ ಸಂಪೂರ್ಣ ಗುಣಮುಖರಾಗಿರುವ ಇನ್ನೂ ನಾಲ್ವರು ಸೋಂಕಿತರು ಆಸ್ಪತ್ರೆಯಿಂದ ಇಂದು ಬಿಡುಗಡೆಗೊಂಡು ಸುರಕ್ಷಿತವಾಗಿ ಮನೆ ಸೇರಿದ್ದಾರೆ. ಇದರೊಂದಿಗೆ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಮನೆ ಸೇರಿದವರ ಸಂಖ್ಯೆ ಇದೀಗ ಜಿಲ್ಲೆಯಲ್ಲಿ 12 ಕ್ಕೆ ಏರಿದೆ.
 

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!