ಶ್ರೀ ಲಿಂಗೈಕ್ಯ:ಬನಶಂಕರಿ ದೇವಿ ರಥೋತ್ಸವ ಚಾಲನೆಗೂ ಮುನ್ನ ಸಿದ್ದರಾಮಯ್ಯ ಮೌನಾಚರಣೆ

By Web DeskFirst Published Jan 21, 2019, 9:15 PM IST
Highlights

ಸಿದ್ದಗಂಗಾ ಶ್ರೀಗಳ ಲಿಂಗೈಕ್ಯ ಹಿನ್ನೆಲೆ ಮಾಜಿ ಸಿಎಂ ಸಿದ್ದರಾಮಯ್ಯ ಮೌನಾಚರಣೆ!ಲಕ್ಷಾಂತರ ಜನ ಬನಶಂಕರಿ ದೇವಿ ಭಕ್ತರ ಮದ್ಯದಲ್ಲಿ  ಶ್ರೀಗಳಿಗೆ ಮೌನಾಚರಣೆ ಮೂಲಕ ಸಂತಾಪ!

ಬಾಗಲಕೋಟೆ, [ಜ.21]: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಾದಾಮಿ ಬನಶಂಕರಿ ದೇವಿ ರಥೋತ್ಸವಕ್ಕೆ ಚಾಲನೆ ನೀಡುವ ಮುನ್ನ ಸಿದ್ಧಗಂಗಾ ಶ್ರೀಗಳಿಗೆ ಸಂತಾಪ ಸೂಚಿಸಿದ್ದಾರೆ.

ಬನಶಂಕರಿ ದೇವಿ ಜಾತ್ರೆಯಲ್ಲಿ ನೆರೆದಿದ್ದ ಲಕ್ಷಾಂತರ ಜನರ ಮಧ್ಯೆ  ಮೌನಾಚರಣೆ ಮಾಡುವ ಮೂಲಕ ಸಿದ್ಧಗಂಗಾದ ಶಿವಕುಮಾರ ಸ್ವಾಮಿಗಳಿಗೆ ಸಂತಾಪ ಸೂಚಿಸಿದರು. ಬಳಿಕ ಬಾಗಲಕೋಟೆ ಜಿಲ್ಲೆ ಬದಾಮಿ ಕ್ಷೇತ್ರದ ಅಧಿದೇವತೆ ಜಾತ್ರೆಗೆ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.

ಶ್ರೀ ದರ್ಶನಕ್ಕೆ ಪ್ರಧಾನಿ ಮೋದಿ ಬರಲ್ಲ, ಕಾರಣಕೊಟ್ಟ ಯಡಿಯೂರಪ್ಪ

ಇದಕ್ಕೂ ಮೊದಲು ಸಿದ್ದರಾಮಯ್ಯ ಅವರು ಇಂದು [ಸೋಮವಾರ] ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ದರ್ಶನ ಪಡೆದುಕೊಂಡರು. ನಂತರ  ಬಾಗಲಕೋಟೆ ಜಿಲ್ಲೆಯ ಬನಶಂಕರಿಗೆ ತರಳಿದ್ದರು.

"

click me!
Last Updated Jan 21, 2019, 9:16 PM IST
click me!