
ರಾಮನಗರ(ನ.06): ಸಂಸದನ ಚೇಲಾಗಳು ಮರಳು ದಂಧೆ ಮಾಡಿಕೊಂಡು ಅಮಾಯಕ ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಏಕ ವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ತಾಲೂಕಿನ ಕೂಗನಲ್ನಲ್ಲಿ ಮಾತನಾಡಿದ ಅವರು, ಅರ್ಕಾವತಿ ನದಿ ದಾಟುವಾಗ ಅಮಾಯಕ ಜನರು ಸಾವನ್ನಪ್ಪುತ್ತಿದ್ದಾರೆ. ಇದಕ್ಕೆಲ್ಲ ಸಂಸದನ ಚೇಲಾಗಳು ನಡೆಸುತ್ತಿರುವ ಮರಳು ದಂಧೆ ಕಾರಣ ಎಂದು ಕಿಡಿಕಾರಿದ್ದಾರೆ.
ಮುನಿರತ್ನ ಸಿಎಂ ಆದರೆ ಖುಷಿ ಪಡುತ್ತೇನೆ : ಡಿ.ಕೆ.ಸುರೇಶ್
ಕಾಂಗ್ರೆಸ್ ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಅವ್ಯಾಹತವಾಗಿ ಮರಳು ದಂಧೆ ನಡೆದಿದೆ. ಅರ್ಕಾವತಿ ನದಿಯಲ್ಲಿ ಮರಳು ದಂಧೆಯಿಂದಾಗಿ 15ರಿಂದ 20 ಅಡಿಯಷ್ಟು ಗುಂಡಿಗಳು ಬಿದ್ದಿವೆ. ಅಷ್ಟಕ್ಕೂ ಮರಳು ದಂಧೆ ನಡೆಸಲು ಸಂಸದರಲ್ಲದಿದ್ದರೆ ಉತ್ತೇಜನ ನೀಡಿದವರು ಯಾರೆಂದು ಪ್ರಶ್ನಿಸಿದ್ದಾರೆ.