ಮತದಾನ ಕೇಂದ್ರಕ್ಕೆ ಎಣ್ಣೆ ಹೊಡೆದು ಬಂದಿದ್ದ ಚುನಾವಣಾಧಿಕಾರಿ ಸಸ್ಪೆಂಡ್!

Published : Dec 05, 2019, 12:00 PM IST
ಮತದಾನ ಕೇಂದ್ರಕ್ಕೆ ಎಣ್ಣೆ ಹೊಡೆದು ಬಂದಿದ್ದ ಚುನಾವಣಾಧಿಕಾರಿ ಸಸ್ಪೆಂಡ್!

ಸಾರಾಂಶ

ಮಾಸ್ಟರಿಂಗ್ ಕೇಂದ್ರಕ್ಕೆ ಮದ್ಯಪಾನ ಮಾಡಿ ಬಂದಿದ್ದ ಚುನಾವಣಾಧಿಕಾರಿ| ವೈದ್ಯಕೀಯ ತಪಾಸಣೆ ವೇಳೆ ಸ್ಪಂದಿಸದೇ ಓಡಿಹೋಗಿದ್ದ ಅಧಿಕಾರಿ| ಸೇವೆಯಿಂದ ಅಮಾನತುಗೊಳಿಸಿ ಅದೇಶ ಹೊರಡಿಸಿದ ಜಿಲ್ಲಾ ಚುನಾವಣಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ|  

ಗೋಕಾಕ(ಡಿ.05): ಚುನಾವಣೆ ಕರ್ತವ್ಯ ಲೋಪವೆಸಗಿದ ಆರೋಪದ ಹಿನ್ನೆಲೆಯಲ್ಲಿ ಗೋಕಾಕ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾ ಚುನಾವಣಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಅದೇಶ ಹೊರಡಿಸಿದ್ದಾರೆ.

ಅಮಾನತುಗೊಂಡ ಅಧಿಕಾರಿಯನ್ನು ಸವದತ್ತಿ ನಗರದ ತೆಂಗಿನಹಾಳದ ಪ್ರಾಥಮಿಕ ಶಾಲೆಯ ಶಿಕ್ಷಕ ಪ್ರಕಾಶ ವೀರಭದ್ರಪ್ಪ ನಾಶಿಪುಡಿ ಎಂದು ಗುರುತಿಸಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬುಧವಾರ ಮಾಸ್ಟರಿಂಗ್ ಕೇಂದ್ರಕ್ಕೆ ಪ್ರಕಾಶ ಅವರು ಮದ್ಯಪಾನ ಮಾಡಿ ಬಂದಿದ್ದರು. ಅಲ್ಲದೆ, ವೈದ್ಯಕೀಯ ತಪಾಸಣೆ ವೇಳೆ ಸ್ಪಂದಿಸದೇ ಓಡಿಹೋಗಿದ್ದರು. ಇವೆಲ್ಲ ಕಾರಣಗಳಿಗಾಗಿ ಅವರ ಮೇಲೆ ಕ್ರಮ ಜರುಗಿಸಲಾಗಿದೆ ಎಂದು ಅವರು ತಮ್ಮ ಅದೇಶ ತಿಳಿಸಿದ್ದಾರೆ.

ಇಂದು ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.
 

PREV
click me!

Recommended Stories

ಬೆಳಿಗ್ಗೆ ವೇಕ್-ಅಪ್ ಕಾಲ್, ಮನೆ ಬಾಗಿಲಿಗೇ ಕಾರ್: ಬೆಂಗಳೂರು ಏರ್‌ಪೋರ್ಟ್‌ನಿಂದ ಡೋರ್-ಟು-ಡೋರ್ ಐಷಾರಾಮಿ ಸೇವೆ
ಶ್ರೀಕೃಷ್ಣ ಜನ್ಮದಿನ ಮಳೆ ಬರುತ್ತದೆಯೇ? ಜ್ಯೋತಿಷ್ಯ ಶಾಸ್ತ್ರದ ಈ ನಂಬಿಕೆ ಇಂಟರೆಸ್ಟಿಂಗ್