ಮಂಗಳೂರು: ಮಳೆಯಿಂದ ಮೆಸ್ಕಾಂಗೆ 1043.70 ಲಕ್ಷ ರು. ನಷ್ಟ

By Kannadaprabha NewsFirst Published Aug 9, 2019, 11:06 AM IST
Highlights

ಕರಾವಳಿ, ಉತ್ತರ ಕರ್ನಾಟಕ ಸೇರಿ ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ವಿದ್ಯುತ್ ಸರಬರಾಜಿನಲ್ಲೂ ವ್ಯತ್ಯಯವಾಗಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ (ಮೆಸ್ಕಾಂ)ಗೆ ಮಳೆಯಿಂದಾಗಿ ಒಟ್ಟು 1043.70 ಲಕ್ಷ ರು. ನಷ್ಟಉಂಟಾಗಿದೆ.

ಮಂಗಳೂರು(ಆ.09): ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ (ಮೆಸ್ಕಾಂ)ಗೆ ಮಳೆಯಿಂದಾಗಿ ಒಟ್ಟು 1043.70 ಲಕ್ಷ ರು. ನಷ್ಟಉಂಟಾಗಿದೆ.

ಏ.1ರಿಂದ ಆ.6ರವರೆಗೆ ನಾಲ್ಕು ಜಿಲ್ಲೆಗಳಲ್ಲಿ ಒಟ್ಟು 677 ವಿದ್ಯುತ್‌ ಪರಿವರ್ತಕಗಳು ಹಾನಿಗೀಡಾಗಿದ್ದರೆ, 9140 ವಿದ್ಯುತ್‌ ಕಂಬಗಳು, 232.34 ಕಿ.ಮೀ. ವಿದ್ಯುತ್‌ ಮಾರ್ಗಕ್ಕೆ ಹಾನಿಯಾಗಿದೆ. ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 306 ವಿದ್ಯುತ್‌ ಪರಿವರ್ತಕಗಳು, 3046 ವಿದ್ಯುತ್‌ ಕಂಬಗಳು, 105.44 ಕಿ.ಮೀ. ವಿದ್ಯುತ್‌ ಮಾರ್ಗಕ್ಕೆ ಹಾನಿಯಾಗಿದ್ದು, 453.85 ಲಕ್ಷ ರು. ನಷ್ಟಸಂಭವಿಸಿದೆ.

ತುಮಕೂರು: ಮಳೆಯನ್ನೂ ಲೆಕ್ಕಿಸದೆ ವರಮಹಾಲಕ್ಷ್ಮೀ ಹಬ್ಬಕ್ಕೆ ಭರ್ಜರಿ ಶಾಪಿಂಗ್

ಮೆಸ್ಕಾಂ ನಿರ್ದೇಶಕರು ಪರಿಸ್ಥಿತಿಯ ಅವಲೋಕನ ಮಾಡಿ ಎಲ್ಲ ಅಧಿಕಾರಿ/ ಸಿಬ್ಬಂದಿಗೆ ಸೂಕ್ತ ನಿರ್ದೇಶನಗಳನ್ನು ನೀಡಿ ಸಮರೋಪಾದಿಯಲ್ಲಿ ವಿದ್ಯುತ್‌ ಜಾಲದ ಪುನರ್‌ ಸ್ಥಾಪನೆಯ ಕಾರ್ಯಗಳನ್ನು ನಿರ್ವಹಿಸುವಂತೆ ಹಾಗೂ ಎಲ್ಲ ಕ್ಷೇತ್ರ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ತ್ವರಿತಗತಿಯಲ್ಲಿ ವಿದ್ಯುತ್‌ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ತುಮಕೂರು: ಅಕ್ಷರ ದಾಸೋಹದಲ್ಲಿ ಲಕ್ಷಾಂತರ ರು. ಅವ್ಯವಹಾರ

click me!