ಡಿಕೆಶಿ ತಾಯಿ ಮೌನ​ವ್ರತ, ಮೋದಿ ಶಾ ಅಣ​ಕು​ ಶ​ವ​ಯಾತ್ರೆ

By Kannadaprabha NewsFirst Published Sep 5, 2019, 10:28 AM IST
Highlights

ಡಿ. ಕೆ. ಶಿವಕುಮಾರ್ ಬಂಧನವನ್ನು ವಿರೋಧಿಸಿ ರಾಜ್ಯದ ಹಲವು ಭಾಗಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಡಿ.ಕೆ.ಶಿವಕುಮಾರ್‌ ಅವರ ತಾಯಿ ಗೌರಮ್ಮ ಮೌನವ್ರತ ತಾಳಿದ್ದು, ಯಾರೊಂದಿಗೆ ಮಾತನಾಡಿಲ್ಲ. ಗೌರಿಹಬ್ಬದ ದಿನ ಮಗ ಮನೆಗೆ ಬಂದಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.

ರಾಮ​ನ​ಗರ(ಸೆ.05) : ಡಿ.ಕೆ.ಶಿವಕುಮಾರ್‌ ಅವರ ತಾಯಿ ಗೌರಮ್ಮ ಮೌನವ್ರತ ತಾಳಿದ್ದು, ಯಾರೊಂದಿಗೆ ಮಾತನಾಡಿಲ್ಲ. ಗೌರಿಹಬ್ಬದ ದಿನ ಮಗ ಮನೆಗೆ ಬಂದಿಲ್ಲ ಎಂದು ಕಣ್ಣೀರಿಟ್ಟು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಗೌರಮ್ಮ ಅವರು ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದರು.

ಡಿಕೆಶಿ ಅರೆಸ್ಟ್: ಗುರುವಾರ ರಾಮನಗರ ಬಂದ್, ಶಾಲಾ-ಕಾಲೇಜುಗಳ ರಜೆ ಮುಂದುವರಿಕೆ

ಡಿಕೆಶಿ ಕ್ಷೇಮವಾಗಿರಲಿ ಎಂದು ಕನಕಪುರದ ಶಕ್ತಿ ದೇವತೆಯಾದ ಕೆಂಕೇರಮ್ಮ ದೇವಾಲಯದಲ್ಲಿ ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿದರು. ಡಿಕೆಶಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಆರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸಿದರು.

ಅಣಕು ಶವ​ಯಾತ್ರೆ:

ಡಿ.ಕೆ.ಶಿವಕುಮಾರ್‌ ಅವರ ಸ್ವ ಗ್ರಾಮ ದೊಡ್ಡಾಲಹಳ್ಳಿಯಲ್ಲಿ ಮೋದಿ ಹಾಗು ಅಮಿತ್‌ ಶಾ ಅವರ ಅಣಕು ಶವಯಾತ್ರೆ ಮಾಡಿ ಕಾರ‍್ಯಕರ್ತರು ಆಕ್ರೋಶ ವ್ಯಕ್ತ ಪಡಿಸಿದರೆ, ಇದೇ ಗ್ರಾಮದಲ್ಲಿ ಡಿಕೆಶಿ ಅವರ ಇಬ್ಬರು ಅಭಿಮಾನಿಗಳು ಕೇಶ ಮುಂಡನ ಮಾಡಿಸಿಕೊಂಡು ವಿನೂತನವಾಗಿ ಪ್ರತಿಭಟನೆ ನಡೆಸಿದರು.

click me!