ಬಿಜೆಪಿಗೆ ಬೆಂಬಲ ನೀಡಲು ಹಿರಿಯ ಪ್ರಭಾವಿ ಕೈ ಮುಖಂಡನನ್ನು ಭೇಟಿ ಮಾಡಿದ್ದು ನಿಜ : ಡಿಸಿಎಂ

By Kannadaprabha NewsFirst Published Nov 1, 2020, 12:05 PM IST
Highlights

ಬೆಂಬಲ ನೀಡುವ ಸಲುವಾಗಿ ಹಿರಿಯ ಕಾಂಗ್ರೆಸ್ ಮುಖಂಡನನ್ನು ಭೇಟಿ ಮಾಡಿದ್ದು ನಿಜ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ. 

ಶಿರಾ (ನ.01):  ಶಿರಾ​ದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇ​ಶ​ಗೌಡ ಗೆಲುವು ಸಾಧಿ​ಸ​ಲಿ​ದ್ದಾರೆ ಎಂಬ ವಿಶ್ವಾ​ಸ​ವನ್ನು ಡಿಸಿಎಂ ಅಶ್ವಥ್‌ ನಾರಾ​ಯಣ್‌ ವ್ಯಕ್ತ​ಪ​ಡಿ​ಸಿ​ದ್ದಾರೆ.

ಅವರು ಶಿರಾ​ದಲ್ಲಿ ಸುದ್ದಿ​ಗಾ​ರ​ರೊಂದಿಗೆ ಮಾತ​ನಾಡಿ ಎಲ್ಲಾ ಜಾತಿಗೂ ಪ್ರಾಮು​ಖ್ಯತೆ ಕೊಡುವ ಪಕ್ಷ ಏನಾ​ದರೂ ಇದ್ದರೆ ಅದು ಬಿಜೆಪಿ ಎಂದರು.

ಆಂಧ್ರ ಪ್ರದೇ​ಶ ಕಾಂಗ್ರೆಸ್‌ ನಾಯಕ ರಘುವೀರ ರೆಡ್ಡಿಯನ್ನು ಭೇಟಿ ಮಾಡಿದ್ದು ನಿಜ ಎಂದ ಅವರು ರಘು​ವೀ​ರ​ರೆ​ಡ್ಡಿ ಯಾದವ ಸಮುದಾಯದ ಮುಖಂಡರು. ಹಾಗಾಗಿ ಅವರ ಬೆಂಬಲ ಕೋರಿದ್ದಾಗಿ ತಿಳಿ​ಸಿ​ದರು.

ಶಿರಾ ಉಪ ಚುನಾವಣೆ : ಬಿಜೆಪಿಗೆ ಗೆಲುವು ಖಚಿತವೆನ್ನೋ ಭವಿಷ್ಯ .

ಕಾಡುಗೊಲ್ಲರ ಅಭಿವೃದ್ಧಿ ನಿಗಮ ಮಾಡಿದ್ದೇವೆ. ಹಾಗಾಗಿ ರಘುವೀರ ರೆಡ್ಡಿ ಬೆಂಬಲ ನಮಗೆ ಸಿಗಲಿದೆ ಎಂಬ ವಿಶ್ವಾಸ ಇದೆ ಎಂದರು. ಕಾಂಗ್ರೆಸ್‌ ಅಥವಾ ಜೆಡಿಎಸ್‌ ಯಾವುದೇ ಅಭಿ​ವೃದ್ಧಿ ಕಾರ್ಯ ಮಾಡಿಲ್ಲ. ಹೀಗಾಗಿ ಅವರ ಮತ ಕೇಳಲು ಮುಖ ಇಲ್ಲ ಎಂದರು.

click me!