ಚಿಕ್ಕಮಗಳೂರು: ವಿವಾದಿತ ಇನಾಂ ದತ್ತಾತ್ರೇಯ ಪೀಠದಲ್ಲೇ ದತ್ತಜಯಂತಿ, ಭಜರಂಗದಳ ಘೋಷಣೆ

Published : Oct 30, 2022, 09:51 AM ISTUpdated : Oct 30, 2022, 04:45 PM IST
ಚಿಕ್ಕಮಗಳೂರು: ವಿವಾದಿತ ಇನಾಂ ದತ್ತಾತ್ರೇಯ ಪೀಠದಲ್ಲೇ ದತ್ತಜಯಂತಿ, ಭಜರಂಗದಳ ಘೋಷಣೆ

ಸಾರಾಂಶ

ದತ್ತಜಯಂತಿಯಲ್ಲಿ 2 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ದತ್ತಮಾಲಾಧಾರಿಗಳು ಭಾಗಿಯಾಗುವ ಸಾಧ್ಯತೆ

ಚಿಕ್ಕಮಗಳೂರು(ಅ.30):  ಜಿಲ್ಲೆಯ ವಿವಾದಿತ ಇನಾಂ ದತ್ತಾತ್ರೇಯ ಪೀಠದಲ್ಲಿ ನವೆಂಬರ್ 28 ರಿಂದ ಡಿಸೆಂಬರ್ 12 ದಿನಗಳವರೆಗೆ 12 ದಿನಗಳ ಕಾಲ ದತ್ತ ಜಯಂತಿ ನಡೆಯಲಿದೆ. ಈ ಸಂದರ್ಭದಲ್ಲಿ ವಿವಾದಿತ ದತ್ತಾತ್ರೇಯ ಗುಹೆಯ ಮುಂಭಾಗ ಹೋಮ ಪೂಜೆ ಮಾಡುವುದಾಗಿ ಭಜರಂಗದಳ ಕರೆ ನೀಡಿದೆ. 

ವಿಶ್ವ ಹಿಂದೂ ಷರಿಷತ್,  ಭಜರಂಗದಳದ ನೇತೃತ್ವದಲ್ಲಿ ದತ್ತಜಯಂತಿ ನಡೆಯಲಿದೆ. ದತ್ತ ಪೀಠದ ತಾತ್ಕಾಲಿಕ ಶೆಡ್‌ನಲ್ಲಿ‌ ಮುಸ್ಲಿಂರು ಮಾಂಸಹಾರ ಸೇವನೆ ಮಾಡಿರುವ ಹಿನ್ನೆಲೆಯಲ್ಲಿ ವಿವಾದಿತ ಪ್ರದೇಶದಲ್ಲೇ ಹೋಮ ಮಾಡುವುದಾಗಿ ಭಜರಂಗದಳ ಘೋಷಿಸಿದೆ. 

ಗ್ರಾಪಂ ಸದಸ್ಯ- ಪಿಡಿಓ ಮಾರಾಮಾರಿ: ಠಾಣೆ ಎದುರು ಕಾಂಗ್ರೆಸ್‌ ಪ್ರತಿಭಟನೆ

ನವೆಂಬರ್ 28 ರಿಂದ ಡಿಸೆಂಬರ್ 12 ದಿನಗಳವರೆಗೂ ದತ್ತಜಯಂತಿ ನಡೆಯಲಿದೆ. ದತ್ತಜಯಂತಿಯಲ್ಲಿ 2 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ದತ್ತಮಾಲಾಧಾರಿಗಳು ಭಾಗಿಯಾಗುವ ಸಾಧ್ಯತೆ ಇದೆ ಅಂತ ಹೇಳಲಾಗುತ್ತಿದೆ. ದತ್ತಜಯಂತಿ ದಿನಾಂಕ ನಿಗದಿಯಾದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಪೊಲೀಸರು ಅಲರ್ಟ್ ಆಗಿದ್ದಾರೆ. 
 

PREV
Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC