Belthangady: 105ರ ತಾಯಿ-85ರ ಮಗಳ ಅಪರೂಪದ ಭೇಟಿ: ದುರ್ಗಮ ರಸ್ತೆಯಲ್ಲಿ ಪುತ್ರಿಯ ಪಯಣ

Published : Sep 12, 2026, 09:06 AM IST
belthangady

ಸಾರಾಂಶ

ಬೆಳ್ತಂಗಡಿಯ ಮಲವಂತಿಕೆ ಗ್ರಾಮದಲ್ಲಿ, 105 ವರ್ಷದ ತಾಯಿ ಸೀತಮ್ಮ ಮತ್ತು 85 ವರ್ಷದ ಮಗಳು ಸುಶೀಲಾ ಅವರು 20 ವರ್ಷಗಳ ನಂತರ ಭೇಟಿಯಾದರು. ದುರ್ಗಮ ದಾರಿಯ ಕಾರಣದಿಂದಾಗಿ ದೂರವಾಗಿದ್ದ ಇವರನ್ನು, ಮೊಮ್ಮಕ್ಕಳು ಕಷ್ಟಪಟ್ಟು ಒಂದಾಗಿಸಿ ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದರು.

ದಕ್ಷಿಣ ಕನ್ನಡ: ತಾಯಿಗೆ 105 ವರ್ಷ, ಆಕೆಯ ಮಗಳಿಗೆ 85 ವರ್ಷ. ಇಬ್ಬರದ್ದೂ ಇಳಿ ವಯಸ್ಸು. ಮಗಳಿಗೆ ತಾಯಿಯನ್ನು ನೋಡಬೇಕೆಂಬ ಆಸೆಯಿದ್ದರೂ ವಯಸ್ಸು, ದುರ್ಗಮ ದಾರಿಯ ಕಾರಣದಿಂದ ಭೇಟಿ ಸಾಧ್ಯವಾಗಿರಲಿಲ್ಲ. ಆದರೆ ಮೊಮ್ಮಕ್ಕಳು ತಾಯಿ ಮಗಳ ಆಸೆಯನ್ನು ಪೂರೈಸಿದ್ದಾರೆ. ಇಂತಹ ಅದ್ಭುತ ಕ್ಷಣ ಕಾಣಸಿಕ್ಕಿದ್ದು, ಬೆಳ್ತಂಗಡಿ ತಾಲೂಕಿನ ಮಲವಂತಿಕೆ ಗ್ರಾಮದ ಮಕ್ಕಿ ಎಂಬಲ್ಲಿ

ಮಕ್ಕಿಯಲ್ಲಿ ಮಕ್ಕಳ ಜೊತೆ ವಾಸ ಇರುವ 105 ವರ್ಷದ ಸೀತಮ್ಮ ಅವರಿಗೆ 11 ಮಂದಿ ಮಕ್ಕಳು. ಅವರಲ್ಲಿ ಮೊದಲನೆಯವರು ಸುಶೀಲಾ. ಅವರಿಗೀಗ 85 ವಯಸ್ಸು. ಸೀತಮ್ಮ ಅವರ ಮನೆಗೆ ಹೋಗಲು ಸರಿಯಾದ ರಸ್ತೆ ಇಲ್ಲ. ಜೀಪಿನಲ್ಲಿ ದುರ್ಗಮ ಕಾಡಿನಲ್ಲಿ ಸಾಗಿ ಬಳಿಕ ಒಂದೂವರೆ ಕಿಲೋ ಮೀಟರ್ ಬೆಟ್ಟ ಇಳಿದು, ಹೊಳೆ ದಾಟಿ ಸಾಗಬೇಕು. ಸುಶೀಲಾ ಅವರು ಮಕ್ಕಳ ಜೊತೆ ಮಿತ್ತಬಾಗಿಲು ಗ್ರಾಮದ ಫಗರೆ ಎಂಬಲ್ಲಿ ವಾಸವಾಗಿದ್ದಾರೆ. ದೂರ ದೂರ ಇರುವ ತಾಯಿ–ಮಗಳು ಒಂದಾಗಿ ಸುಮಾರು 20 ವರ್ಷ ಸಂದಿತ್ತು. ಹಿಂದಿನ ನೆನಪು ಮಾತ್ರ ಮನಸ್ಸಲ್ಲಿ ಉಳಿದಿತ್ತು.

ಅಜ್ಜಿ ಆಸೆ ಪೂರೈಸಲು ಮುಂದಾದ ಮೊಮ್ಮಕಳು

ಮುತ್ತಜ್ಜಿ ಸೀತಮ್ಮ ಅವರಿಗೆ ವಯಸ್ಸಿನ ಕಾರಣ ಮಗಳ ಬಳಿ ಬರಲು ಸಾಧ್ಯರಲಿಲ್ಲ. ಮಗಳು ಸುಶೀಲಾ ಅವರಿಗೆ ಅನಾರೋಗ್ಯದ ಕಾರಣದಿಂದ ತಾಯಿ ಬಳಿ ಹೋಗಲು ಸಾಧ್ಯವಾಗದೆ ಹಲವು ವರ್ಷವಾಗಿತ್ತು. ಆದರೆ ಮೊಮ್ಮಕ್ಕಳು ಅಜ್ಜಿ ಆಸೆ ಪೂರೈಸಲು ಸುಶೀಲಾ ಅವರನ್ನು ಕರೆದುಕೊಂಡು ದಟ್ಟ ಕಾಡಿನ ಕಚ್ಛಾ ರಸ್ತೆಯ ಮೂಲಕ ಜೀಪಿನಲ್ಲಿ ಪ್ರಯಾಣಿಸಿದ್ದಾರೆ. ಜೀಪಿನಲ್ಲಿ ಅಜ್ಜಿಯನ್ನು ಕರೆದುಕೊಂಡು ಸಾಗಿದರೂ ಮುತ್ತಜ್ಜಿ ಮನೆಯವರೆಗೂ ವಾಹನ ಸಾಗಲು ಸಾಧ್ಯವಿಲ್ಲ. ಹೀಗಾಗಿ ಅಜ್ಜಿಯನ್ನು ಕಾಡುದಾರಿಯಲ್ಲಿ ನಿಧಾನವಾಗಿ ನಡೆಸಿಕೊಂಡು ಮನೆ ತಲುಪಿದ್ದಾರೆ.

ರಸ್ತೆಯಿಲ್ಲದ ಮನೆಯಲ್ಲಿದ್ದ ಮುತ್ತಜ್ಜಿ

ಅಜ್ಜಿಯನ್ನು ಕರೆದುಕೊಂಡು ಮುತ್ತಜ್ಜಿ ಮನೆಗೆ ತೆರಳಬೇಕು ಎನ್ನುವುದು ಮೊಮ್ಮಕ್ಕಳಾದ ನಮ್ಮ ಆಸೆಯಾಗಿತ್ತು. ಆದರೆ ಅಜ್ಜಿಗೆ ವಯಸ್ಸಾದ ಕಾರಣ, ಮುತ್ತಜ್ಜಿ ಮನೆಗೆ ಸರಿಯಾದ ರಸ್ತೆ ಇಲ್ಲದ ಕಾರಣ ಅದು ಸಾಧ್ಯವಾಗುತ್ತಿರಲಿಲ್ಲ. ಇದೀಗ ಅದು ಸಾಧ್ಯವಾಗಿದೆ ಎಂದು ಮೊಮ್ಮಗ ಕೇಶವ ಹೇಳುತ್ತಾರೆ.

ಇದನ್ನೂ ಓದಿ: ಯುವಕರಿಗೂ ಕಷ್ಟವಾಗಿದ್ದ 40 ಅಡಿ ಜಾರುಕಂಬ ಸರಸರನೆ ಏರಿದ 7ನೇ ತರಗತಿಯ ಬಾತೀಶ್‌: ಹೇಗೆ ಅಂತೀರಾ?

PREV
Read more Articles on
click me!

Recommended Stories

ಅ.1ರಿಂದ ಮಂಗಳೂರು ರೈಲ್ವೆ ಪ್ರದೇಶ ಬದಲಾವಣೆ; ಪಾಲಕ್ಕಾಡ್-ಮೈಸೂರು ಸಭೆಯಲ್ಲೇನಾಯ್ತು?
ದಾವಣಗೆರೆ ಹೊರವಲಯದ 200 ಎಕರೆ ಪ್ರದೇಶದಲ್ಲಿ ಹೊಸ ಲೇಔಟ್ ನಿರ್ಮಾಣಕ್ಕೆ ನಿರ್ಧಾರ: ಎಲ್ಲಿ?