ಹುಬ್ಬಳ್ಳಿ-ಧಾರವಾಡ ಪಾಲಿಕೆ ಯಡವಟ್ಟು: ಹೊಳೆಯಲ್ಲಿ ಹೋಮವಾಗ್ತಿದೆ ಕೋಟಿ ಕೋಟಿ ಹಣ..!

Published : May 28, 2022, 12:22 PM IST
ಹುಬ್ಬಳ್ಳಿ-ಧಾರವಾಡ ಪಾಲಿಕೆ ಯಡವಟ್ಟು: ಹೊಳೆಯಲ್ಲಿ ಹೋಮವಾಗ್ತಿದೆ ಕೋಟಿ ಕೋಟಿ ಹಣ..!

ಸಾರಾಂಶ

*  ಪಾಲಿಕೆ ಆವರಣದ ಮೂಲೆ ಸೇರಿದ ವಾಹನಗಳು *  ಅಧಿಕಾರಿಗಳ ಬೇಜಾವಾಬ್ದಾರಿತನದಿಂದ ವಾಹನಗಳು ಬಳಕೆಯಾಗದೇ ನಿಂತಿವೆ *  ಜನಸಾಮಾನ್ಯರಲ್ಲಿ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿ ಪಾಲಿಕೆ ನಿರ್ಧಾರ  

ಹುಬ್ಬಳ್ಳಿ(ಮೇ.28): ರಾಜ್ಯದಲ್ಲಿಯೇ ಎರಡನೇ ಅತೀ ದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಎಡವಟ್ಟು ಮಾಡಿಕೊಂಡಿದೆ. ಪಾಲಿಕೆ ವ್ಯಾಪ್ತಿಯ ಜನಸಾಮಾನ್ಯರ ಅನುಕೂಲಕ್ಕಾಗಿ ಅಲ್ಲಿನ ಅಧಿಕಾರಿಗಳು ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿ ಅದೆಷ್ಟೋ ವಾಹನಗಳನ್ನು ಖರೀದಿ ಮಾಡಿದ್ದಾರೆ.‌ ಆದರೆ ಅಧಿಕಾರಿಗಳ ಬೇಜಾವಾಬ್ದಾರಿತನದಿಂದ ಆ ವಾಹನಗಳು ಮಾತ್ರ ಬಳಕೆಯಾಗದೇ ಮೂಲೆಗೆ ಸೇರಿವೆ. 

ಹೀಗೆ ಸಾಲು ಸಾಲಾಗಿ ನಿಂತಿರುವ ಈ ವಾಹನಗಳನ್ನು ನೋಡಿದ್ರೆ ಈಗ ಅಷ್ಟೇ ಕೆಲ ದಿನಗಳ ಹಿಂದೆ ಹೊಸದಾಗಿ ಖರೀದಿ ಮಾಡಿರುವಂತೆ ಭಾಸವಾಗುತ್ತದೆ. ಹೌದು‌, ಹುಬ್ಬಳ್ಳಿ-ಧಾರವಾಡ ಅವಳಿನಗರದ ಜನಸಾಮಾನ್ಯ ಅನುಕೂಲಕ್ಕಾಗಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಇತ್ತೀಚೆಗಷ್ಟೇ ಜೆಟ್ಟಿಂಗ್ ವಾಹನಗಳನ್ನು ಖರೀದಿ ಮಾಡಿದ್ದಾರೆ. ಅವಳಿ ನಗರದ ಸ್ವಚ್ಚತೆ ಹಾಗೂ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಒಳಚರಂಡಿ ಹಾಗೂ ಸೆಪ್ಟಿಕ್ ಟ್ಯಾಂಕ್ ಕ್ಲೀನಿಂಗ್ ಮಾಡುವ ಉದ್ದೇಶದಿಂದ ಹೊಸ ವಾಹನಗಳನ್ನು ಖರೀದಿ ಮಾಡಲಾಗಿದೆ. ಒಂದು ಜೆಟ್ಟಿಂಗ್ ಮಷಿನ್ ವಾಹನಕ್ಕೆ ಬರೋಬ್ಬರಿ 26 ಲಕ್ಷದಂತೆ ಕೋಟಿ‌ ಕೋಟಿ ರೂಪಾಯಿ ವೆಚ್ಚದಲ್ಲಿ ಬರೋಬ್ಬರಿ ಎಂಟು ವಾಹನಗಳನ್ನು ಖರೀದಿ ಮಾಡಿದ್ದಾರೆ. ಆದರೆ ಖರೀದಿ ಮಾಡಿದಾಗಿನಿಂದಲೂ ಸಾರ್ವಜನಿಕರಿಗೆ ಅನುಕೂಲವಾಗಬೇಕಿದ್ದ ಈ‌ ವಾಹನಗಳು ಪಾಲಿಕೆ ಆವರಣದ ಮೂಲೆ ಸೇರಿವೆ. ಅಧಿಕಾರಿಗಳ ಬೇಜಾವಾಬ್ದಾರಿತನದಿಂದ ಈ ಎಂಟು ವಾಹನಗಳು ಬಳಕೆಯಾಗದೇ ನಿಂತಿರೋದು ಜನಸಾಮಾನ್ಯರಲ್ಲಿ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. 

ಎಸ್‌ಎಸ್‌ಎಲ್‌ಸಿ: ಆನ್‌ಲೈನ್‌ 41, ಉತ್ತರ ಪತ್ರಿಕೆಯಲ್ಲಿ 91 ಅಂಕ, ಆತಂಕದಲ್ಲಿ ವಿದ್ಯಾರ್ಥಿನಿ

ಇನ್ನೂ ಪ್ರಮುಖವಾಗಿ ಅವಳಿನಗರದ ಜನತೆ ದಿನನಿತ್ಯ ಒಂದಿಲ್ಲೊಂದು ಸಮಸ್ಯೆ ಅನುಭವಿಸುತ್ತಲೇ ಇದ್ದಾರೆ. ಅಲ್ದೆ ಯುಜಿಡಿ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿರೋದ್ರಿಂದ ಒಳಚರಂಡಿ ಸಮಸ್ಯೆಯಂತೂ ಹೇಳತೀರದು.‌ ಇದರಿಂದಾಗಿ ನಗರದ ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ಒಳಚರಂಡಿ ಅವ್ಯವಸ್ಥೆಯನ್ನ ಸರಿಪಡಿಸೋ‌ ನೆಪದಲ್ಲಿ ಅಧಿಕಾರಿಗಳು ಈ ರೀತಿ ಎಂಟು ವಾಹನಗಳನ್ನ ಕೋಟಿ ಕೋಟಿ ರೂಪಾಯಿ ಹಣ ವ್ಯಯಿಸಿ ಖರೀದಿ ಮಾಡುವ ಮೂಲಕ ಗೋಲ್ ಮಾಲ್ ನಡೆಸಿದ್ದಾರಾ ಅನ್ನೋ ಅನುಮಾನಗಳು ದಟ್ಟವಾಗಿ ಕಾಡುತ್ತಿವೆ. ಅಲ್ದೆ ನಗರದ ಸಮಸ್ಯೆ ನೀಗಿಸಲು ಹೊಸ ವಾಹನಗಳನ್ನ ಖರೀದಿ ಮಾಡಿದ್ರೂ ಆ ವಾಹನಗಳು ಕಾರ್ಯನಿರ್ವಹಿಸದೇ ಪಾಲಿಕೆ ಆವರಣದ ಮೂಲೆಯಲ್ಲಿ ನಿಂತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಕೂಡಲೇ ಈ ವಾಹನಗಳು ಬಳಕೆಗೆ ಮುಕ್ತವಾಗಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ಆದ್ರೆ ಪಾಲಿಕೆ ಅಧಿಕಾರಿಗಳು ಮಾತ್ರ ತಾವು ಮಾಡುತ್ತಿರೋ ಯಡವಟ್ಟಿಗೆ ಸಮರ್ಥನೆ ಕೊಡುತ್ತಿರೋದು ಮಾತ್ರ ಅಸಮಂಜಸವಾಗಿದೆ. 

ಅವಳಿ ನಗರದ ಅಭಿವೃದ್ದಿ ನೆಪದಲ್ಲಿ ಕೇವಲ ಖರ್ಚು ವೆಚ್ಚ ತೋರಿಸೋ ಉದ್ದೇಶದಿಂದ ಪಾಲಿಕೆ ಅಧಿಕಾರಿಗಳು ಈ ರೀತಿ ವಾಹನ ಖರೀದಿ ಸೇರಿದಂತೆ ಹಲವು ವಿಚಾರಗಳಲ್ಲಿ ಕೋಟಿ ಕೋಟಿ ಹಣ ವ್ಯಯಿಸಿ ಗೋಲ್ ಮಾಲ್ ನಡೆಸಿದ್ದಾರಾ ಅನ್ನೋ ಅನುಮಾನಗಳು ಕಾಡುತ್ತಿದ್ದು, ಇನ್ನಾದ್ರೂ ಅಧಿಕಾರಿಗಳು ಅವಳಿ ನಗರದ ಅಭ್ಯುದಯಕ್ಕೆ ಪ್ರಾಮಾಣಿಕವಾಗಿ ಕಾರ್ಯ ಮಾಡುವ ಮೂಲಕ ಜನಸಾಮಾನ್ಯರಿಗೆ ಉತ್ತಮ‌ ಸೌಲಭ್ಯ ಒದಗಿಸಬೇಕಿದೆ.
 

PREV
Read more Articles on
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ