ಲಾಕ್‌ಡೌನ್‌: 'ಅನಾವಶ್ಯಕವಾಗಿ ಮನೆ ಬಿಟ್ಟು ಹೊರ ಬಂದರೆ ಕಠಿಣ ಕ್ರಮ'

Kannadaprabha News   | Asianet News
Published : May 16, 2020, 11:35 AM ISTUpdated : May 18, 2020, 05:21 PM IST
ಲಾಕ್‌ಡೌನ್‌: 'ಅನಾವಶ್ಯಕವಾಗಿ ಮನೆ ಬಿಟ್ಟು ಹೊರ ಬಂದರೆ ಕಠಿಣ ಕ್ರಮ'

ಸಾರಾಂಶ

ಜಮಖಂಡಿಯ ಬಸವೇಶ್ವರ ವೃತ್ತದಲ್ಲಿ ಜನರಿಗೆ ಎಚ್ಚರಿಕೆ ನೀಡಿದ ಸಿಪಿಐ ಧರೇಗೌಡ ಪಾಟೀಲ| ಮೇ 17ರವರೆಗೆ ಎಲ್ಲ ಅಂಗಡಿ ಮುಂಗಟ್ಟುಗಳು ತೆರವು ನೀಡಲು ಅನುಮತಿ| ಸಾರ್ವಜನಿಕ ಅನೂಕೂಲಕ್ಕಾಗಿ ದಿನಸಿ ವಸ್ತುಗಳ ಕಿರಾಣಿ ಅಂಗಡಿಗಳು,  ಮಾತ್ರೆ-ಔಷಧಿಗಳನ್ನು ಪಡೆಯಲು ಔಷಧಿ ಅಂಗಡಿಗಳಾಗಲೀ, ಇನ್ನಿತರ ಅಂಗಡಿಗಳಿಗೆ ಅನುಮತಿ|

ಜಮಖಂಡಿ(ಮೇ.16): ಕೋವಿಡ್‌-19 ಅಂಟುರೋಗವನ್ನು ತಪ್ಪಿಸಬೇಕಾದರೆ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಅನಾವಶ್ಯಕವಾಗಿ ಮನೆಬಿಟ್ಟು ಯಾರು ಹೊರಗಡೆ ಬರಬಾರದು. ರಸ್ತೆ ಮೇಲೆ ಯಾರಾದರು ಕಂಡು ಬಂದರೆ ಅವರ ವಿರುದ್ಧ ಕಾನೂನು ಕ್ರಮವನ್ನು ಜರುಗಿಸಲಾಗುವುದು ಎಂದು ಸಿಪಿಐ ಧರೇಗೌಡ ಪಾಟೀಲ ಹೇಳಿದ್ದಾರೆ.

ಇಲ್ಲಿನ ಬಸವೇಶ್ವರ ವೃತ್ತದ ನಾಕಾಬಂದಿಯಲ್ಲಿ ವಾಹನ ಸವಾರರು ತಿರುಗಾಡುತ್ತಿರುವವರನ್ನು ತಡೆದು ಎಚ್ಚರಿಕೆ ನೀಡಿ ಮಾತನಾಡಿದ ಅವರು, ಮೇ 17ರವರೆಗೆ ಎಲ್ಲ ಅಂಗಡಿ ಮುಂಗಟ್ಟುಗಳು ತೆರವು ನೀಡಲು ಅನುಮತಿ ನೀಡಿದೆ. 

ಪ್ರಿಯಕರನೊಂದಿಗೆ ಕಬ್ಬಿನ ಗದ್ದೆಗೆ ಹೋದ ಮಹಿಳೆ: ಬಳಿಕ ಆಗಿದ್ದು ಘನ ಘೋರ...

ಸಾರ್ವಜನಿಕ ಅನೂಕೂಲಕ್ಕಾಗಿ ದಿನಸಿ ವಸ್ತುಗಳ ಕಿರಾಣಿ ಅಂಗಡಿಗಳು,ಮಾತ್ರೆ-ಔಷಧಿಗಳನ್ನು ಪಡೆಯಲು ಔಷಧಿ ಅಂಗಡಿಗಳಾಗಲೀ, ಇನ್ನಿತರ ಅಂಗಡಿಗಳಿಗೆ ಅನುಮತಿ ನೀಡಲಾಗಿದೆ. ಅವಶ್ಯಕತೆ ಇದ್ದವರಿಗೆ ಮಾತ್ರ ಮಾರುಕಟ್ಟೆಗೆ ಬರಲು ಅನುಮತಿ ನೀಡಿದೆ. ಒಂದು ವೇಳೆ ಬೇಕಾಬಿಟ್ಟಿಯಾಗಿ ವಾಹನ ಸವಾರರು ತಿರುಗಾಡುತ್ತಿದ್ದರೆ ಅವರ ವಿರುದ್ಧ ಕಾನೂನು ಕ್ರಮವನ್ನು ಜರುಗಿಸಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಪೋಲಿಸ್‌ ಪೇದೆ ಹಣಮಂತ ಬಂಗಿ,ಸಿದ್ದು ಜಕಾತಿ, ಶಂಕರ ಮೂಲಿ ಮನಿ, ಲಕ್ಷ್ಮಣ ಹೊಸುರ ಇನ್ನಿತರರು ಇದ್ದರು.
 

PREV
click me!

Recommended Stories

ಆತಂಕದ ವಿಷಯ: ಬೆಂಗಳೂರಿನಲ್ಲಿ 11 ವರ್ಷದ ಮಕ್ಕಳಿಗೂ ಡ್ರಗ್ಸ್‌ ಚಟ!
ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!