ಕೂಲಿ ಕೊಡುವುದಾಗಿ ಕರೆಸಿ ನಡುರಸ್ತೆಯಲ್ಲಿಯೇ ದಂಪತಿಗೆ ಥಳಿತ

Suvarna News   | Asianet News
Published : Jan 09, 2020, 02:49 PM IST
ಕೂಲಿ ಕೊಡುವುದಾಗಿ ಕರೆಸಿ ನಡುರಸ್ತೆಯಲ್ಲಿಯೇ ದಂಪತಿಗೆ ಥಳಿತ

ಸಾರಾಂಶ

ಕೂಲಿ ಕೊಡೋದಾಗಿ ಕರೆಸಿ ದಂಪತಿಗೆ ನಡು ರಸ್ತೆಯಲ್ಲಿಯೇ ಮನ ಬಂದಂತೆ ಥಳಿಸಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಚಿಕ್ಕಮಗಳೂರು [ಜ.09]: ಹಣದ ವಿಚಾರಕ್ಕೆ ನಡುರಸ್ತೆಯಲ್ಲಿಯೇ ಸಂಬಂಧಿಕರ ನಡುವೆ ಮಾರಾಮಾರಿ ನಡೆದಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. 

ಚಿಕ್ಕಮಗಳೂರು ನಗರದ ಹೌಸಿಂಗ್  ಬೋರ್ಡ್ ಬಳಿಯಲ್ಲಿ ಕೂಲಿ ಕೇಳಿದ್ದಕ್ಕೆ ಸಂಬಂಧಿಕರಿಂದಲೇ ದಂಪತಿಗೆ ನಡು ರಸ್ತೆಯಲ್ಲಿಯೇ ಮನ ಬಂದಂತೆ ಥಳಿಸಲಾಗಿದೆ. 

ಕೂಲಿ ನೀಡುವುದಾಗಿ ವೆಂಖಟೇಶ್ - ಸುಧಾ ದಂಪತಿಯನ್ನು ಕರೆಸಿಕೊಂಡು ಸಂಬಂಧಿಕರು ಮನ ಬಂದಂತೆ ಥಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಧರ್ಮ ಎಂಬುವರ ಹಂದಿ ಫಾರ್ಮ್ ನಲ್ಲಿ ದಂಪತಿ ಕಾರ್ಯ ನಿರ್ವಹಿಸುತ್ತಿದ್ದು, ವೆಂಕಟೇಶ್ ಸಂಬಂಧಿಯಾದ ಧರ್ಮರಿಂದ ಹಲ್ಲೆ ನಡೆದಿದ್ದಾಗಿ ಆರೋಪಿಸಲಾಗಿದೆ. 

ಯುವತಿ ಜೊತೆ ಲವ್ವಿ ಡವ್ವಿ : ಫೋಟೊ ವೈರಲ್ ಆಗುತ್ತಿದ್ದಂತೆ ಚರ್ಚ್ ಬಿಟ್ಟು ಓಡಿದ ಫಾದರ್...

ಹಲ್ಲೆಗೊಳಗಾದ ದಂಪತಿ ವೆಂಕಟೇಶ್ ಹಾಗೂ ಸುಧಾ ದಂಪತಿ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಸದ್ಯ ಈ ಸಂಬಂಧ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
click me!

Recommended Stories

ಕುಡಿದ ಮತ್ತಿನಲ್ಲಿ SSLC ಓದುವ ಮಗಳ ಬ್ಯಾಗ್, ಪುಸ್ತಕ ಸುಟ್ಟ ತಂದೆ, ವಿದ್ಯಾರ್ಥಿನಿಗೆ ಆಸರೆಯಾದ ಖಾಕಿ ಪಡೆ!
ಸುಚಿತ್ರಾಗೆ 100 ಕೋಟಿ ರೂ ಆಸ್ತಿ ಮಾಡಿಟ್ಟಿರೋ Kamalakar Bhat; ಜ್ಯೋತಿಷಿ ಇನ್ನೊಂದು ಆಡಿಯೋ ಸ್ಫೋಟ!