ಬಳ್ಳಾರಿ: ಮಹಾಮಾರಿ ಕೊರೋನಾಗೆ ಮತ್ತೆ ಆರು ಸಾವು: ಕಳೆದ 4 ದಿನಗಳಲ್ಲಿ 20 ಬಲಿ

Kannadaprabha News   | Asianet News
Published : Jul 01, 2020, 09:15 AM IST
ಬಳ್ಳಾರಿ: ಮಹಾಮಾರಿ ಕೊರೋನಾಗೆ ಮತ್ತೆ ಆರು ಸಾವು: ಕಳೆದ 4 ದಿನಗಳಲ್ಲಿ 20 ಬಲಿ

ಸಾರಾಂಶ

ಮಂಗಳವಾರ ಮೃತಪಟ್ಟವರಲ್ಲಿ ಬಳ್ಳಾರಿಯ ಕೋಳೂರಿನ 31 ವರ್ಷದ ಮಹಿಳೆ, ಹೊಸಪೇಟೆಯ ಎನ್‌ಸಿ ಕಾಲೋನಿಯ 63 ವರ್ಷದ ಪುರುಷ, ಬಳ್ಳಾರಿಯ ಸಾಲಗೊಂಡ ಪ್ರದೇಶದ 55 ವರ್ಷದ ಮಹಿಳೆ ಹಾಗೂ ಕೆಎಚ್‌ಬಿ ಕಾಲನಿಯ 58 ವರ್ಷದ ವೃದ್ಧೆ| ಇನ್ನಿಬ್ಬರ ಮೃತರ ಮಾಹಿತಿಯನ್ನು ಜಿಲ್ಲಾಡಳಿತ ನೀಡಿಲ್ಲ|

ಬಳ್ಳಾರಿ(ಜು. 01):  ಗಣಿನಾಡು ಬಳ್ಳಾರಿಯಲ್ಲಿ ಕೊರೋನಾ ಮರಣ ಮೃದಂಗ ಬಾರಿಸುತ್ತಿದ್ದು, ಮಂಗಳವಾರ ಮತ್ತೆ ಆರು ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ಕಳೆದ ಕಳೆದ ನಾಲ್ಕು ದಿನಗಳಲ್ಲಿ 20 ಮಂದಿ ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಒಟ್ಟು ಸಾವಿನ ಸಂಖ್ಯೆ 29ಕ್ಕೇರಿದೆ.

ಮಂಗಳವಾರ ಮೃತಪಟ್ಟವರಲ್ಲಿ ಬಳ್ಳಾರಿಯ ಕೋಳೂರಿನ 31 ವರ್ಷದ ಮಹಿಳೆ, ಹೊಸಪೇಟೆಯ ಎನ್‌ಸಿ ಕಾಲೋನಿಯ 63 ವರ್ಷದ ಪುರುಷ, ಬಳ್ಳಾರಿಯ ಸಾಲಗೊಂಡ ಪ್ರದೇಶದ 55 ವರ್ಷದ ಮಹಿಳೆ ಹಾಗೂ ಕೆಎಚ್‌ಬಿ ಕಾಲನಿಯ 58 ವರ್ಷದ ವೃದ್ಧೆಯಾಗಿದ್ದು, ಇನ್ನಿಬ್ಬರು ಮೃತರ ಮಾಹಿತಿಯನ್ನು ಜಿಲ್ಲಾಡಳಿತ ನೀಡಿಲ್ಲ. 

ಸೋಂಕಿತರ ಶವ ಗುಂಡಿಗೆಸೆದರು: ಒಂದೇ ಗುಂಡಿಗೆ 8 ಶವ!

ಮೃತರೆಲ್ಲರೂ ಮಧುಮೇಹ, ಅಧಿಕ ರಕ್ತದೊತ್ತಡ, ಶ್ವಾಸಕೋಶ ತೊಂದರೆ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. 
 

PREV
click me!

Recommended Stories

ಹೊಳೆನರಸೀಪುರದ ಲಕ್ಷ್ಮಿನರಸಿಂಹ ಸ್ವಾಮಿ ರಥೋತ್ಸವ: ರಥದ ಅಲಂಕಾರದಲ್ಲಿ ರಾಜಕೀಯ:ಶ್ರೇಯಸ್ ಪಟೇಲ್ ವಿರುದ್ಧ JDS ಕಾರ್ಯಕರ್ತರ ಆಕ್ರೋಶ
ಇರಾನ್ ದಾಳಿಯ ಸಾವಿನ ದವಡೆಯಿಂದ ಪಾರಾಗಿ ಬೆಂಗಳೂರಿಗೆ ಬಂದಿಳಿದ 230 ಕನ್ನಡಿಗರು; ಬಾಂಬ್ ಬೀಳುವ ಅನುಭವ ಬಿಚ್ಚಿಟ್ಟರು!