ಗಂಗಾವತಿ: ಆರಾಧನೆಯಲ್ಲಿ ಭಾಗವಹಿಸಿದ್ದ ಭಕ್ತನಿಗೆ ವಕ್ಕರಿಸಿದ ಕೊರೋನಾ

Published : Jul 20, 2020, 08:48 AM IST
ಗಂಗಾವತಿ: ಆರಾಧನೆಯಲ್ಲಿ ಭಾಗವಹಿಸಿದ್ದ ಭಕ್ತನಿಗೆ ವಕ್ಕರಿಸಿದ ಕೊರೋನಾ

ಸಾರಾಂಶ

ಭಕ್ತಗೆ ಸೋಂಕು: ಆನೆ​ಗೊಂದಿ ಬೃಂದಾವನ ಪ್ರವೇಶ ನಿಷೇಧ| ನವ ಬೃಂದಾವನ ಗಡ್ಡೆಗೆ ದಿನನಿತ್ಯ ಪೂಜೆಗೆ ಹೋಗುವ ಉತ್ತರಾದಿ ಮಠ ಮತ್ತು ಮಂತ್ರಾಲಯ ಮಠದ ಅರ್ಚಕರು ಸೇರಿದಂತೆ ಸಿಬ್ಬಂದಿ ಕ್ವಾರಂಟೈನಲ್ಲಿರುವಂತೆ ಬಳ್ಳಾರಿ ಜಿಲ್ಲಾಡಳಿತ ಸೂಚನೆ| ನವಬೃಂದಾವನಗಡ್ಡೆಗೆ ತೆರಳುತ್ತಿದ್ದ ಭಕ್ತರಿಗೆ ತೆಪ್ಪ ಸಂಚಾರ ರದ್ದು|

ಗಂಗಾವತಿ(ಜು.20):  ಒಂಬತ್ತು ಯತಿವರಣ್ಯರ ಬೃಂದಾವನವಿರುವ ಪುಣ್ಯಕ್ಷೇತ್ರ ತಾಲೂಕಿನ ಆನೆಗೊಂದಿಯ ನವ ಬೃಂದಾವನಗಡ್ಡೆಯಲ್ಲಿ ಈಚೆಗೆ ಜರುಗಿದ ಶ್ರೀಜಯತೀರ್ಥರ ಆರಾಧನಾ ಮಹೋತ್ಸವಕ್ಕೆ ಆಗಮಿಸಿದ್ದ ಬೆಂಗಳೂರು ಮೂಲದ ಭಕ್ತರೊಬ್ಬರಿಗೆ ಕೊರೋನಾ ಸೋಂಕು ತಗುಲಿದ್ದರಿಂದ ಗಡ್ಡೆಗೆ ಭಕ್ತರು ಹೋಗುವುದಕ್ಕೆ ನಿಷೇಧಿಸಲಾಗಿದೆ. ಜುಲೈ 10ರಂದು ಮಹೋತ್ಸವ ನಡೆ​ದಿತ್ತು.

ನಡೆದ ಆರಾಧನಾ ಮಹೋತ್ಸವಕ್ಕೆ ಬೆಂಗಳೂರಿನಿಂದ ಭಕ್ತರೊಬ್ಬರು ಆಗಮಿಸಿ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದ್ದರು. ನಂತರ ಬೆಂಗಳೂರಿಗೆ ತೆರಳಿದ್ದ ಭಕ್ತ ತೀವ್ರ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಿಸಿದಾಗ ಕೊರೋನಾ ಸೋಂಕು ದೃಢಪಟ್ಟಿದೆ. 

 

ಗಂಗಾವತಿ: ನವ ವೃಂದಾವನ ಗಡ್ಡೆಯಲ್ಲಿ ಜಯತೀರ್ಥರ ಆರಾಧನೆ

ಈ ಕಾರಣಕ್ಕೆ ನವ ಬೃಂದಾವನ ಗಡ್ಡೆಗೆ ದಿನನಿತ್ಯ ಪೂಜೆಗೆ ಹೋಗುವ ಉತ್ತರಾದಿ ಮಠ ಮತ್ತು ಮಂತ್ರಾಲಯ ಮಠದ ಅರ್ಚಕರು ಸೇರಿದಂತೆ ಸಿಬ್ಬಂದಿ ಕ್ವಾರಂಟೈನಲ್ಲಿರುವಂತೆ ಬಳ್ಳಾರಿ ಜಿಲ್ಲಾಡಳಿತ ಸೂಚನೆ ನೀಡಿದೆ. ಜೊತೆಗೆ ನವಬೃಂದಾವನಗಡ್ಡೆಗೆ ತೆರಳುತ್ತಿದ್ದ ಭಕ್ತರಿಗೆ ತೆಪ್ಪ ಸಂಚಾರ ರದ್ದುಗೊಳಿಸಲಾಗಿದೆ.
 

PREV
click me!

Recommended Stories

ಶಿಕ್ಷಕರ ನೇಮಕಾತಿ: ವಯೋಮಿತಿ ಸಡಿಲಿಕೆ, ಗಣಿತ ಮತ್ತು ವಿವಿಧ ಭಾಷಾ ಅಭ್ಯರ್ಥಿಗಳಿಗೆ ಅವಕಾಶಕ್ಕೆ ಆಗ್ರಹ
ಮಂಗಳೂರು KFC ಮಳಿಗೆ, ಮೈಸೂರಿನ ಹೋಟೆಲ್‌ಗಳ ಮೇಲೆ ಆಹಾರ ಇಲಾಖೆ ದಾಳಿ! ಕೊಳೆತ ಮಾಂಸ ಪತ್ತೆ