ಹಲವು ಮಾರ್ಗದಲ್ಲಿ KSRTC ಬಸ್ ಸಂಚಾರ ರದ್ದು

Kannadaprabha News   | Asianet News
Published : Mar 17, 2020, 02:11 PM IST
ಹಲವು ಮಾರ್ಗದಲ್ಲಿ KSRTC ಬಸ್ ಸಂಚಾರ ರದ್ದು

ಸಾರಾಂಶ

ಹಲವು ಮಾರ್ಗಗಳಲ್ಲಿ  KSRTC ಬಸ್ ಸಂಚಾರ ರದ್ದು ಮಾಡಲಾಗಿದೆ. ಕೊರೋನಾ ಭೀತಿ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ತಗ್ಗಿದ್ದು ಈ ನಿಟ್ಟಿನಲ್ಲಿ ಹಲವು ಬಸ್ ಸಂಚಾರ ಸ್ಥಗಿತವಾಗಿದೆ. 

ರಾಯಚೂರು [ಮಾ.17]: ಕೊರೋನಾ ವೈರಸ್ ಭೀತಿ ಹಿನ್ನೆಲೆ ಸಾರಿಗೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. 

ರಾಯಚೂರಿನಲ್ಲಿ ಪ್ರಯಾಣಿಕರ ಸಂಚಾರ ಕುಸಿದ ಹಿನ್ನೆಲೆಯಲ್ಲಿ, ಸಾರಿಗೆ ಇಲಾಖೆಗೆ ಭಾರಿ ನಷ್ಟ ಎದುರಾಗಿದ್ದು ಈ ನಿಟ್ಟಿನಲ್ಲಿ ಹಲವು ಮಾರ್ಗಗಳಲ್ಲಿ ಬಸ್ ಸಂಚಾರ ಬಂದ್ ಮಾಡಲಾಗಿದೆ. 

ಜಿಲ್ಲೆಯಲ್ಲಿ ಆರು ದಿನಗಳಲ್ಲಿ 28 ಲಕ್ಷ ರು. ನಷ್ಟ ಉಂಟಾಗಿದ್ದು, 40 ಬಸ್ ಗಳ ಸಂಚಾರ ಬಂದ್ ಮಾಡಲಾಗಿದೆ . ದಿನವೊಂದಕ್ಕೆ 100 ಟ್ರಿಪ್ ಕಡಿತ ಮಾಡಲಾಗಿದೆ. 

ಕೊರೋನಾ ಆತಂಕ ನಿವಾರಣೆಗೆ ರಾಜ್ಯ ಸರ್ಕಾರದಿಂದ ಟೆಲಿಗ್ರಾಂ ಗ್ರೂಪ್‌!...

ನಿತ್ಯ ಶ್ರೀಶೈಲಕ್ಕೆ ತೆರಳುತ್ತಿದ್ದ 55 ಬಸ್ ಗಳನ್ನು ರದ್ದು ಮಾಡಲಾಗಿದೆ. ಸದ್ಯ ಈ ಮಾರ್ಗದಲ್ಲಿ ನಿತ್ಯ ಕೇವಲ 15 ಬಸ್ ಗಳು ಸಂಚರಿಸುತ್ತಿವೆ. 

ರಾಯಚೂರು ಜಿಲ್ಲೆಯ ಒಟ್ಟು 8 ಡಿಪೋಗಳಲ್ಲಿ ಹಲವು ಮಾರ್ಗದ ಬಸ್ ಸಂಚಾರ ರದ್ದಾಗಿದೆ. ಕಲಬುರಗಿಯಲ್ಲಿ ಕೊರೋನಾ ಉಲ್ಬಣ ಹಿನ್ನೆಲೆಯಲ್ಲಿ ರಾಯಚೂರು - ಕಲಬುರಗಿ ಮಾರ್ಗದ ಬಸ್ ಸಂಚಾರ ರದ್ದು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ. ವೆಂಕಟೇಶ್ ಮಾಹಿತಿ ನೀಡಿದ್ದಾರೆ. 

ಇನ್ನು ರಾಜ್ಯದಾದ್ಯಂತ ಹಲವು ಬಸ್ ಸಂಚಾರ ರದ್ದು ಮಾಡಲಾಗಿದ್ದು, ಇದರಿಂದ ರಾಜ್ಯ ಸಾರಿಗೆ ಸಂಸ್ಥೆ 5 ಕೋಟಿಗೂ ಅಧಿಕ ನಷ್ಟ ಎದುರಿಸುತ್ತಿದೆ. 

PREV
click me!

Recommended Stories

ಪುತ್ತೂರು ಕೃಷ್ಣನ ನವರಂಗಿ ಆಟ, ಡಿಎನ್‌ಎ ಟೆಸ್ಟ್‌ನಲ್ಲಿ ಅಪ್ಪ ಅನ್ನೋದು ಕನ್ಫರ್ಮ್‌ ಆದರೂ ಮದುವೆ ಆಗಲ್ವಂತೆ!
ಧರ್ಮಸ್ಥಳ ಬುರುಡೆ ಕೇಸ್‌: ಜ.3ಕ್ಕೆ ತೀರ್ಪು ಮುಂದೂಡಿಕೆ