'ರಾಜ್ಯದಲ್ಲಿ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಶತಸಿದ್ಧ'

Kannadaprabha News   | Asianet News
Published : Sep 29, 2021, 11:53 AM IST
'ರಾಜ್ಯದಲ್ಲಿ 2023ರ ಚುನಾವಣೆಯಲ್ಲಿ ಕಾಂಗ್ರೆಸ್  ಅಧಿಕಾರಕ್ಕೆ ಬರುವುದು ಶತಸಿದ್ಧ'

ಸಾರಾಂಶ

ರಾಜ್ಯದಲ್ಲಿ 2023ರ ಚುನಾವಣೆಯಲ್ಲಿ ಈಗಿನ ಭ್ರಷ್ಟ ಸರ್ಕಾರ  ಸರಕಾರ ತೊಲಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರು ವುದು ಶತಸಿದ್ಧ  ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗಗಳ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ ಹೇಳಿಕೆ

  ಶಿರಾ (ಸೆ.29):  ರಾಜ್ಯದಲ್ಲಿ 2023ರ ಚುನಾವಣೆಯಲ್ಲಿ (Election) ಈಗಿನ ಭ್ರಷ್ಟ ಸರ್ಕಾರ, ಅನೈತಿಕ ಬಿಜೆಪಿ (BJP) ಸರಕಾರ ತೊಲಗಿ ಕಾಂಗ್ರೆಸ್ (Congress) ಸರ್ಕಾರ ಅಧಿಕಾರಕ್ಕೆ ಬರು ವುದು ಶತಸಿದ್ಧ ಎಂದು ಕೆಪಿಸಿಸಿ (KPCC) ರಾಜ್ಯ ಹಿಂದುಳಿದ ವರ್ಗಗಳ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ (MD Lakshminarayana) ಹೇಳಿದರು.

 ಅವರು ಮಂಗಳವಾರ ನಗರದ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರ ಗೃಹ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಹಿಂದುಳಿದ ವರ್ಗಗಳ ಸಭೆ ಉದ್ಘಾಟಿಸಿ ಮಾತನಾಡಿದರು. 

ಸಿಂದಗಿ ವಿಧಾನಸಭೆ ಬೈ ಎಲೆಕ್ಷನ್​ಗೆ ಅಭ್ಯರ್ಥಿ ಘೋಷಿಸಿದ ಕಾಂಗ್ರೆಸ್​

ರಾಜ್ಯದಲ್ಲಿ ಶೇ. 52ರಷ್ಟು ಹಿಂದುಳಿದ ಜನಾಂಗದವರಿದ್ದು, ಎಲ್ಲ ರೂ ಒಗ್ಗೂಡಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸ ಬೇಕು. ನಾನು 224 ಕ್ಷೇತ್ರಗಳಲ್ಲಿಯೂ ಹಿಂದುಳಿದ ವರ್ಗಗಳ ಸಭೆ ನಡೆಸುತ್ತೇನೆ. ಈಗಾಗಲೇ 63 ಕ್ಷೇತ್ರದಲ್ಲಿ ಸಭೆ ನಡೆಸಿದ್ದೇನೆ. ಇನ್ನಾರು ತಿಂಗಳಲ್ಲಿ ಉಳಿದ ಎಲ್ಲಾ ಕ್ಷೇತ್ರಗಳಲ್ಲೂ ಸಭೆ ನಡೆಸಿ ಪಕ್ಷ ಸಂಘಟಿಸುತ್ತೇನೆ. ಜನವರಿ 2022ಕ್ಕೆ ಬೆಂಗಳೂರಿನ (Bengaluru) ಅರಮನೆ ಮೈದಾನದಲ್ಲಿ ಸುಮಾರು 2 ಲಕ್ಷ ಹಿಂದುಳಿದ ಸಮುದಾಯದವರು ಸೇರಿ ಬೃಹತ್ ಸಮಾವೇಶ ಮಾಡಲಾಗುವುದು ಎಂದರು.

 ರಾಜ್ಯ ದಿವಾಳಿ ಮಾಡಿರುವ ಬಿಜೆಪಿ ಸರ್ಕಾರ: ಮಾಜಿ ಸಚಿವ ಟಿ.ಬಿ.ಜಯಚಂದ್ರ (TB Jayachandra) ಮಾತನಾಡಿ, ಈ ರಾಜ್ಯದಲ್ಲಿರುವ ಬಿಜೆಪಿ ಸರಕಾರ ಕಳೆದ 3 ವರ್ಷದಲ್ಲಿ ರಾಜ್ಯವನ್ನು ದಿವಾಳಿ ಮಾಡಿದೆ. ಯಾವುದೇ ಯೋಜನೆಗಳಿಗೆ ಹಣ ನೀಡುತ್ತಿಲ್ಲ. ಅವರಿಗೆ ಎಲ್ಲಿ ಹಣ ಮಾಡಬಹುದೋ ಅಂತಹ ಯೋಜನೆಗಳಿಗೆ ಹಣ ಬಿಡುಗಡೆ ಮಾಡುತ್ತಿದೆ.

ಮೂರು ವರ್ಷದಲ್ಲಿ 3.50 ಲಕ್ಷ ಕೋಟಿ ಸಾಲ ವನ್ನು ರಾಜ್ಯ ಸರಕಾರ ಮಾಡಿದೆ. ಈ ದೇಶದಲ್ಲಿ ಹಗರಣ ಮುಕ್ತ, ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ ಸರಕಾರವೆಂದರೆ ಅದು ಸಿದ್ದರಾಮಯ್ಯ (Siddaramaiah) ಅವಧಿಯ ಕಾಂಗ್ರೆಸ್ ಸರಕಾರ. ಅಂದಿನ ಅವಧಿ ಯಲ್ಲಿ ಶಿರಾ ತಾಲೂಕಿಗೆ 17000 ಮನೆಗಳನ್ನು ಮಂಜೂರು ಮಾಡಿಸಿದ್ದೆ. ಆ ಮನೆಗಳಿಗೆ ಇಲ್ಲಿಯ ವರೆಗೂ ಸರಕಾರ ಹಣ ಬಿಡುಗಡೆ ಮಾಡಿಲ್ಲ. ಕಳೆದ ಉಪ ಚುನಾ ವಣೆಯಲ್ಲಿ ಮಾತು ಕೊಟ್ಟಂತೆ ಕಾಡು ಗೊಲ್ಲರ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರ ನೇಮಕ ಮಾಡಿಲ್ಲ, ಮದಲೂರು ಕೆರೆಗೆ ನೀರು ತುಂಬಿಸಿಲ್ಲ. ಆದ್ದರಿಂದ ಹಿಂದುಳಿದ ಸಮುದಾಯ ಒಗ್ಗಟ್ಟಾಗಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರಕಾರವನ್ನು ಬೆಂಬಲಿಸಿ ಭ್ರಷ್ಟ ಬಿಜೆಪಿ ಸರಕಾರವನ್ನು ತೊಲಗಿಸೋಣ ಎಂದರು.

 ರಾಜ್ಯ ಓಬಿಸಿ (OBC) ಪ್ರಧಾನ ಕಾರ್ಯದರ್ಶಿ ಗುರು ಪ್ರಸಾದ್, ಜಿಲ್ಲಾಧ್ಯಕ್ಷ ಪುಟ್ಟರಾಜು, ಅಲ್ಪಸಂ ಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಅಬ್ದುಲ್ಲಾ ಖಾನ್, ನಗರ ಬ್ಲಾಕ್ ಅಧ್ಯಕ್ಷ ಪಿ.ಆರ್.ಮಂಜು ನಾಥ್, ಗ್ರಾಮಾಂತರ ಅಧ್ಯಕ್ಷ ನಟರಾಜ್ ಬರ ಗೂರು, ಹಾರೋಗೆರೆ ಮಹೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಸತ್ಯನಾರಾಯಣ, ಮಾಜಿ ತಾ ಪಂ ಸದಸ್ಯೆ ಲಕ್ಷ್ಮೀ ದೇವಮ್ಮ, ಮಹಿಳಾ ಘಟಕದ ಅಧ್ಯಕ್ಷೆ ರೇಖಾ ರಾಘವೇಂದ್ರ, ರೂಪೇಶ್ ಕೃಷ್ಣಯ್ಯ, ಯುವ ಘಟಕದ ಅಧ್ಯಕ್ಷ ದಯಾನಂದ ಗೌಡ, ಎಸ್.ಎಲ್.ರಂಗನಾಥ್, ಅಜಯ್ ಕು ಮಾರ್ ಗಾಲಿ, ಗಜಮಾರನಹಳ್ಳಿ ಮಂಜುನಾಥ್, ಪಿ.ಬಿ.ನರಸಿಂಹಯ್ಯ, ಭಾನುಪ್ರಕಾಶ್ ಇದ್ದರು.  

PREV
click me!

Recommended Stories

ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!