Chikkaballapur Utsav: ಬಿಜೆಪಿ ಸರ್ಕಾರಕ್ಕೆ ಹೆಸರು ತಂದ ಸುಧಾಕರ್‌

Published : Jan 11, 2023, 01:36 AM IST
Chikkaballapur Utsav: ಬಿಜೆಪಿ ಸರ್ಕಾರಕ್ಕೆ ಹೆಸರು ತಂದ ಸುಧಾಕರ್‌

ಸಾರಾಂಶ

ಕೋವಿಡ್‌ ಎರಡನೇ ಅಲೆ ಸಂದರ್ಭದಲ್ಲಿ ನನಗೆ ಕೋವಿಡ್‌ ಪಾಸಿಟಿವ್‌ ಬಂದಾಗ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ನನ್ನನ್ನು ರಕ್ಷಿಸಿದರೆಂದು ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಚಿಕ್ಕಬಳ್ಳಾಪುರ (ಜ.11) : ಕೋವಿಡ್‌ ಎರಡನೇ ಅಲೆ ಸಂದರ್ಭದಲ್ಲಿ ನನಗೆ ಕೋವಿಡ್‌ ಪಾಸಿಟಿವ್‌ ಬಂದಾಗ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ನನ್ನನ್ನು ರಕ್ಷಿಸಿದರೆಂದು ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಚಿಕ್ಕಬಳ್ಳಾಪುರ ಉತ್ಸವ(Chikkaballapur Utsav)ದಲ್ಲಿ ಮಂಗಳವಾರ ಸಂಜೆ ಪಾಲ್ಗೊಂಡು ಫಲಪುಪ್ಪ ಪ್ರದರ್ಶನ ಹಾಗೂ ಆಹಾರ ಮೇಳ, ಕೃಷಿ ವಸ್ತು ಪ್ರದರ್ಶನ ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ಒಬ್ಬ ಸಚಿವರಾಗಿ ಕರ್ನಾಟಕವನ್ನು ಕೋವಿಡ್‌(Covid-19)(ನಿಂದ ಪಾರು ಮಾಡಿದ ಮಹಾನ್‌ ದೊಡ್ಡ ವ್ಯಕ್ತಿತ್ವ ಅವರದು ಎಂದರು.

ಸ್ಯಾಂಟ್ರೋ ರವಿ ಬಗ್ಗೆ ಆಳವಾದ ತನಿ​ಖೆಗೆ ಸೂಚ​ನೆ: ಗೃಹ ಸಚಿವ ಆರಗ ಜ್ಞಾನೇಂದ್ರ

ಮಾದರಿ ಗ್ರಾಮ ಪರಿಕಲ್ಪನೆಗೆ ಶ್ಲಾಘನೆ

ಚಿಕ್ಕಬಳ್ಳಾಪುರ ಉತ್ಸವವನ್ನು ಬಹಳ ಚಿಂತನೆ, ದೂರದೃಷ್ಟಿಯಿಂದ ಆಯೋಜಿಸಿದ್ದಾರೆ. ಇದು ಬರೀ ಪ್ರದರ್ಶನವಲ್ಲ. ಹನಿ ನೀರಿಗೂ ಪರದಾಡಬೇಕಾದ ಸ್ಥಿತಿ ಇರುವ ಜಿಲ್ಲೆಗೆ ನೀರಾವರಿ ಕಲ್ಪಿಸಿ ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ವಸ್ತು ಪ್ರದರ್ಶನದಲ್ಲಿ ತೋರಿಸಿದ್ದಾರೆ. ಮಳಿಕೆ, ಮಾದರಿ ಗ್ರಾಮ ಪರಿಕಲ್ಪನೆ ನಿಜಕ್ಕೂ ನೋಡಿದವರಿಗೆ ಸಾಕಷ್ಟುಅರಿವು, ಪ್ರೇರಣೆ ನೀಡುತ್ತದೆಂದರು.

ಸುಧಾಕರ್‌(Dr K Sudhakar) ನಾಯಕತ್ವ ಈ ಜಿಲ್ಲೆಗೆ ಸಿಕ್ಕಿರುವುದು ಪುಣ್ಯ, ಅವರ ನಾಯಕತ್ವನ್ನು ಜಿಲ್ಲೆಯ ಜನತೆ ಬಳಸಿಕೊಳ್ಳಬೇಕು, ಅವರ ಅಭಿವೃದ್ದಿಯ ದೂರದೃಷ್ಠಿ ಎಲ್ಲರನ್ನು ಬೆರಗುಗೊಳಿಸುತ್ತದೆ. ಒಬ್ಬ ಶಾಸಕನಾಗಿ, ಮಂತ್ರಿಯಾಗಿ ತನ್ನ ಜಿಲ್ಲೆಗೆ ಏನು ಮಾಡಬಹುದು ಎಂಬುದನ್ನು ಸಚಿವ ಸುಧಾಕರ್‌ ತೋರಿಸಿಕೊಟ್ಟಿದ್ದಾರೆ. ಇದೆಲ್ಲಾ ನಮಗೆ ಮಾದರಿ. ಸುಧಾಕರ್‌ ರವರ ಬದ್ದತೆ, ಕಾರ್ಯದಕ್ಷತೆ, ಕಾರ್ಯಪ್ರವೃತ್ತಿ ಚಿಕ್ಕಬಳ್ಳಾಪುರ ಉತ್ಸವದಲ್ಲಿ ಮೇಳೈಸಿದೆಯೆಂದು ಸಚಿವ ಆಗರ ಜ್ಞಾನೇಂದ್ರ ಹೇಳಿದರು.

ರಾಜ್ಯದಲ್ಲಿ ಯಡಿಯೂರಪ್ಪ ಹಾಗೂ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಒಳ್ಳೆ ಹೆಸರು ಇದ್ದರೆ ಅದು ಸುಧಾಕರ್‌ ಅವರ ಶ್ರಮದಿಂದ ಮಾತ್ರ ಸಾಧ್ಯವೆಂದರು. ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಸಾಧನೆಗಳ ಬಗ್ಗೆ ಉತ್ಸವದಲ್ಲಿ ವ್ಯವಸ್ಥಿತವಾಗಿ ಬೆಳಕು ಚೆಲ್ಲಿದ್ದಾರೆಂದರು. ಬರದ ನಾಡು ಆಗಿದ್ದ ಈ ಭಾಗವನ್ನು ಮಲೆನಾಡಾಗಿ ಪರಿವರ್ತಿಸಿದ್ದಾರೆಂದರು.

ಸ್ಯಾಂಟ್ರೋ ರವಿ ಪ್ರಕರಣ: ಕುಮಾರಸ್ವಾಮಿ ಹತಾಶೆ ಸ್ಥಿತಿಗೆ ತಲುಪಿದ್ದಾರೆ: ಆರಗ

ಸ್ಯಾಂಟ್ರೋ ರವಿಗೆ ಸೂಕ್ತ ಜಾಗ ತೋರಿಸುತ್ತೇವೆ:

ಸ್ಯಾಂಟ್ರೋ ರವಿಗೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಆರಗಜ್ಞಾನೇಂದ್ರ, ನಾವು ಆತನಿಗೆ ಇಲ್ಲಿ ಜಾಗ ತೋರಿಸಬೇಕು ಅಲ್ಲಿ ಜಾಗ ತೋರಿಸುವ ಕೆಲಸವನ್ನು ಮಾಡುತ್ತೇವೆ. ಈಗಾಗಲೇ ಆತನಿಗೆ ಸಹಕಾರ ಮಾಡಿದ ಪೊಲೀಸ್‌ ಇನ್ಸ್‌ಪೆಕ್ಟರ್‌ನ್ನು ಸೇವೆಯಿಂದ ಅಮಾನತ್ತುಗೊಳಿಸಿರುವುದಾಗಿ ತಿಳಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಇತಂಹ ವ್ಯಕ್ತಿತ್ವ ಇರುವ ವ್ಯಕ್ತಿಗಳನ್ನು ಬೇರು ಮಟ್ಟದಿಂದ ಎಲ್ಲಿಯು ಓಡಾಡದಂತೆ ಬೇರು ಮಟ್ಟದಲ್ಲಿ ಕಿತ್ತು ಹಾಕುವ ಕೆಲಸವನ್ನು ಗೃಹ ಇಲಾಖೆ ಸಮರ್ಥವಾಗಿ ಮಾಡಲಿದೆ ಎಂದರು.

PREV
Read more Articles on
click me!

Recommended Stories

ಪ್ರಧಾನಿಗೆ ಪತ್ರ ಬರೆಯುವುದರಲ್ಲಿ ಸಿದ್ದರಾಮಯ್ಯ, ಡಿಕೆಶಿ ನಿಸ್ಸೀಮರು: ಬಿ.ವೈ.ವಿಜಯೇಂದ್ರ
ಕುಡುಕರ ಲಿವರ್‌ ಚಿಕಿತ್ಸೆಗೆ ಹಣ ಕೇಳಿದ ಶಾಸಕರು: ಪರಿಷತ್‌ನಲ್ಲಿ ಸ್ವಾರಸ್ಯಕರ ಚರ್ಚೆ